Sunday, September 8, 2024

Latest Posts

ಈ ವಸ್ತುವನ್ನು ಬೇರೆಯವರಿಗೆ ಕೊಟ್ರೆ ನಿಮ್ಮ ಅದೃಷ್ಟವೇ ನೀವು ಕೊಟ್ಟಂತೆ..

- Advertisement -

ಕೆಲವು ವಸ್ತುಗಳನ್ನು ಯಾರಿಂದಲೂ ಪಡೆಯಬಾರದು ಮತ್ತು ಯಾರಿಗೂ ನೀಡಬಾರದೆಂಬ ನಿಯಮವಿದೆ. ಅಂಥಹುದರಲ್ಲಿ ಕೊಬ್ಬರಿ ಎಣ್ಣೆ ಕೂಡ ಒಂದು.

ಹೌದು ನಾವು ಬಳಸುವ ಕೊಬ್ಬರಿ ಎಣ್ಣೆಯನ್ನ ಬೇರೆಯವರಿಗೆ ನೀಡಬಾರದು. ಹೀಗೆ ನೀಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ಇರುವುದಿಲ್ಲ. ನೀವು ಯಾರಿಗೆ ಕೊಬ್ಬರಿ ಎಣ್ಣೆ ನೀಡಿದ್ದೀರೋ ಅಂಥವರ ಮನೆಗೆ ಲಕ್ಷ್ಮೀ ದೇವಿ ಹೊರಟುಹೋಗುತ್ತಾಳೆ ಎನ್ನಲಾಗಿದೆ.

ಅಲ್ಲದೇ, ಎಣ್ಣೆ ಚಲ್ಲದಂತೆ ನೋಡಿಕೊಳ್ಳಬೇಕು. ಅಷ್ಟಕ್ಕೂ ಎಣ್ಣೆ ಕೈ ತಪ್ಪಿ ಚಲ್ಲಿತೆಂದರೆ ಬಹುಬೇಗ ಅದನ್ನ ಶುದ್ಧಗೊಳಿಸಿ. ಅದನ್ನ ಮೆಟ್ಟಲು ಅವಕಾಶ ಕೊಡಬೇಡಿ.

ಇನ್ನು ಮುಖ್ಯವಾಗಿ ಲಕ್ಷ್ಮೀದೇವಿಗೆ ಶುಭ್ರತೆ ಎಂದರೆ ಇಷ್ಟ. ಯಾರ ಮನೆ ಶುಭ್ರವಾಗಿರುತ್ತದೆಯೋ ಅಂಥ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಅದೇ ರೀತಿ ಪೊರಕೆ, ರುಬ್ಬುವ ಕಲ್ಲು, ಹೊಸ್ತಿಲ ಮೇಲೆ ಕಾಲಿಡಬಾರದು. ಅಲ್ಲದೇ, ನಿಮ್ಮ ಮನೆಯಲ್ಲಿ ತುಳಸಿ ಗಿಡ ನೆಡಿ. ಇದರಿಂದ ನಕಾರಾತ್ಮಕ ಶಕ್ತಿಗಳು ಹೋಗಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ.

ಮಲಗುವ ಸ್ಥಳ ಅಂದರೆ ದಿಂಬಿನ ಕೆಳಗೆ ಅಥವಾ ಹಾಸಿಗೆ ಕೆಳಗೆ ಹಣ, ಚಿನ್ನ ಇಡಬಾರದು. ಹೀಗೆ ಮಾಡುವುದರಿಂದ ನಿಮ್ಮ ಬಳಿ ಹಣ ನಿಲ್ಲುವುದಿಲ್ಲ. ಹೆಚ್ಚೆಚ್ಚು ಖರ್ಚು ವೆಚ್ಚ ಉಂಟಾಗುವ ಸಾಧ್ಯತೆ ಇರುತ್ತದೆ.

- Advertisement -

Latest Posts

Don't Miss