ಅಣ್ಣಿಗೇರಿ: ಧಾರವಾಡ ಜಿಲ್ಲೆಯ ಬರಪೀಡಿತ ಪ್ರದೇಶದ ಪಟ್ಟಿ ಬಿಡುಗಡೆಯಾಗಿದ್ದು ಅಣ್ಣಿಗೇರಿ ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಯಲ್ಲಿ ಸೇರಿಸದ ಕಾರಣ ಬೆನ್ನುರು ಗ್ರಾಮದ ರೈತ ಮುಖಂಡ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ದೇವರಾಜ್ ದಾಡಿಬಾವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಣ್ಣಿಗೇರಿ ತಾಲೂಕಿನಲ್ಲಿ ಕೇವಲ ನಾಲ್ಕು ಹಳ್ಳಿಗಳು ನೀರಾವರಿ ವ್ಯಾಪ್ತಿಗೆ ಬರುತ್ತವೆ, ಉಳಿದ 18 ಹಳ್ಳಿಗಳು ಒಣ ಬೇಸಾಯ ಜಮೀನುಗಳಿಂದ ಕೂಡಿದ್ದು ಅಣ್ಣಿಗೇರಿ ತಾಲೂಕಿನ ಎಲ್ಲ ಜಮೀನುಗಳು ಬರಗಾಲದಿಂದ ಕೂಡಿದ್ದು ಬರ ಪಟ್ಟಿಯಿಂದ ಅಣ್ಣಿಗೇರಿ ತಾಲೂಕನ್ನು ಕೈ ಬಿಟ್ಟಿರುವುದು ವಿಪರ್ಯಾಸ.
ಮುಂಗಾರು ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದು ಹಿಂಗಾರು ಬೆಳೆ ಸಹಿತ ಬರಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ತಕ್ಷಣ ಸರ್ಕಾರ ಅಣ್ಣಿಗೇರಿಯನ್ನು ಬರಪೀಡಿತ ಪ್ರದೇಶದ ಪಟ್ಟಿಯಲ್ಲಿ ಸೇರಿಸಬೇಕು. ಇಲ್ಲದಿದ್ದರೆ ತಾಲೂಕಿನ ರೈತರು ಪ್ರತಿಭಟನೆ ಮಾಡುವುದು ಅನಿವಾರ್ಯವಾಗುವುದು ಎಂದರು.
Basavaraj Bommai : ಬಿಜೆಪಿಗೂ, ಚೈತ್ರ ಕೇಸ್ ಗೂ ಯಾವುದೇ ಸಂಬಂಧವಿಲ್ಲ : ಬೊಮ್ಮಾಯಿ
Krishna Byregowda: ತಹಶಿಲ್ದಾರ್ ಕಛೇರಿಗೆ ಸಚಿವರ ದಿಡೀರ್ ಭೇಟಿ ಅಧಿಕಾರಿಗಳ ತರಾಟೆಗೆ..!
Farmers Protest: ವಿವಿಧ ಬೇಡಿಕೆಗಳ ಈಡೇರಿಕೆಗೆ ಕುಂದಗೋಳ ರೈತರಿಂದ ಪ್ರತಿಭಟನೆ..!