Hubli News: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಯ ಘಟನೆಯಲ್ಲಿ ಡ್ರಗ್ಸ್ ಬಳಕೆ ಆಗಿದೆ. ಗುಜರಾತ್ ಏರ್ ಪೋರ್ಟ್ ಸೇರಿದಂತೆ ದೇಶದಲ್ಲಿ ಎಷ್ಟು ಪ್ರಮಾಣದ ಡ್ರಗ್ಸ್ ಸಿಕ್ಕಿದೆ. ಡ್ರಗ್ಸ್ ಪತ್ತೆಯಾದ ಬಗ್ಗೆ ಸ್ವತಃ ಎನ್ ಐಎ ಮಾಹಿತಿ ವರದಿ ಕೊಟ್ಟಿದೆ. ಯಾವ ಯಾವ ರಾಜ್ಯಗಳಲ್ಲಿ ಎಷ್ಟು ಡ್ರಗ್ಸ್ ಸಿಕ್ಕಿದೆ. ಈ ಬಗ್ಗೆ ಮೊದಲು ಚರ್ಚೆ ಆಗಲಿ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಕೋಲ್ ಮೈನಿಂಗ್ ಬ್ಲಾಕ್ ಯಾರಿಗೆಲ್ಲಾ ಅಲಾಟ್ ಆಗಿದ್ದಾವೆ. ಈ ಬಗ್ಗೆ ಈ ಹಿಂದೆ ಕಲ್ಲಿದ್ದಲು ಸಚಿವರಾಗಿದ್ದ ಪ್ರಹ್ಲಾದ ಜೋಶಿ ಹೇಳಬೇಕು. 200 ಬಿಲಿಯನ್ ಡಾಲರ್ ರಪ್ತು ವ್ಯಾಪರ ಕುಸಿತವಾಗಿದೆ. ಪ್ರಧಾನಿ ಮೇಕ್ ಇನ್ ಇಂಡಿಯಾ ಬಗ್ಗೆ ಮಾತಡ್ತಾರೆ. ಆದ್ರೆ ಛತ್ರಿಯನ್ನು ಕೂಡಾ ನಾವು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. 1700 ಕೋಟಿ ಹಣ ಬಿಎಸ್ ಎಲ್ ಗೆ ಜಿಯೋದಿಂದ ಬರಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಬಿಲ್ ಕೂಡಾ ಜನರೇಟ್ ಮಾಡಿಲ್ಲಾ. ಸ್ವಿಸ್ ಬ್ಯಾಂಕ್ ನಲ್ಲಿ 37 ಸಾವಿರ ಕೋಟಿ ಕಪ್ಪು ಹಣ ಇದೆ. ಕಪ್ಪು ಹಣ ತರ್ತೇವೆ ಅಂತ ಹೇಳಿದ್ರು, ಏನಾಯ್ತು? ಎಂದು ಲಾಡ್ ಪ್ರಶ್ನಿಸಿದ್ದಾರೆ.
ಯಾವ ಮಾನದಂಡದಲ್ಲಿ ಭ್ರಷ್ಟಾಚಾರ ಇಲ್ಲಾ ಅಂತ ಹೇಳ್ತಾರೆ. ಅದಾನಿ ಪೋರ್ಟ್ ನಲ್ಲಿ 21 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಸಿಕ್ಕಿದೆ. ಆ ಡ್ರಗ್ಸ್ ದುಡ್ಡು ಪೆಹಲ್ಗಾಂವ್ ದಾಳಿ ಉಗ್ರ ಕೃತ್ಯಕ್ಕೆ ಬಳಕೆಯಾಗಿದೆ. ಅವರದೇ ಎನ್ ಐ ಎ ಸುಪ್ರೀಂ ಕೋರ್ಟ್ ಗೆ ಈ ವರದಿ ನೀಡಿದೆ. ವಿಕಸಿತ ಭಾರತ ಆಗಿದೆ ಅಂತ ಹೇಳ್ತಿದ್ದಾರೆ. ನಮ್ಮ ಅಮ್ಮ ಪ್ರಧಾನಿಯಾದ್ರು ಅಭಿವೃದ್ಧಿ ಆಗುತ್ತೆ. ನಿಮ್ಮ ಅಮ್ಮ ಪ್ರಧಾನಿಯಾದ್ರು ಆಗುತ್ತೆ ಶೇಕಡಾ 5 ರಿಂದ 6 ರಷ್ಟು ವಾರ್ಷಿಕ ಗ್ರೋತ್ ಇದ್ದೇ ಇರುತ್ತೆ. ಮೋದಿ ಅವರನ್ನು ವಿಶ್ವಗುರು ಅಂತ ಹೇಳಿದ್ರು.. ಇವತ್ತು ನಮ್ಮ ಅಕ್ಕಪಕ್ಕದ ಯಾವ ದೇಶ ನಮ್ಮ ಜೊತೆ ಚೆನ್ನಾಗಿವೆ. 56 ರೂಪಾಯಿ ಡಾಲರ್ 90 ರೂಪಾಯಿ ಹೇಗಾಯ್ತ?
ಬೆಟ್ಟಿಂಗ್ ಆಪ್ ಗಳಿಂದ, ಗೋ ಹತ್ಯ ಮಾಡಿ ವಿದೇಶಕ್ಕೆ ಮಾಂಸ ರಪ್ತು ಮಾಡೋರಿಂದ ಚಂದಾ ಪಡೆಯುತ್ತಿದ್ದಾರೆ. ಚಂದಾ ಪಡೆದು ಬಿಜೆಪಿ ಪಾರ್ಟಿ ಆಪೀಸ್ ಕಟ್ಟುತ್ತಿದೆ. ಮಾಂಸ ರಪ್ತಿನಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೇವೆ. ಎರಡು ಸಾವಿರ ನೋಟು ಎಲ್ಲಿವೆ ಇವಾಗ. ಎರಡು ಸಾವಿರ ನೋಟು ಮಾಡಲು ಬರೋಬ್ಬರಿ 40 ಸಾವಿರ ಕೋಟಿ ಖರ್ಚು ಮಾಡಲಾಗಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಇನ್ನು ಆಡಿಯೋ ವೈರಲ್ ಆಗಿರುವ ಬಗ್ಗೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಬಿ. ಆರ್ ಪಾಟೀಲ್ ರು ಹಿರಿಯರು, ಅವರ ಬಗ್ಗೆ ಗೌರವವಿದೆ. ಅವರ ಹೇಳಿಕೆಗೆ ನಾನು ಕೌಂಟರ್ ಕೊಡಲ್ಲಾ. ಮನೆಗಳು ಗ್ರಾಮ ಪಂಚಾಯತ್ ಸಧಸ್ಯರಿಂದ ಹಂಚಿಕೆ ಆಗುತ್ತವೆ. ಸಚಿವರು, ಶಾಸಕರು ಹಂಚಿಕೆ ಮಾಡಲ್ಲಾ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.