ಕರ್ನಾಟಕ ಟಿವಿ : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದೇ ಮೊದಲ ಬಾರಿಗೆ ಚುನಾವಣೆ ಸ್ಪರ್ಧೆ ಮಾಡ್ತಿದ್ದಾರೆ.. ಮೇ 21ಕ್ಕೆ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಿರುವ ಉದ್ಧವ್ ಇದವರೆಗೂ ಯಾವ ಚುನಾವಣೆಗೂ ಸ್ಪರ್ಧೆ ಮಾಡಿರಲಿಲ್ಲ.ಅನಿರೀಕ್ಷಿತ ಮೈತ್ರಿಯಿಂದಾಘಿ ಕಾಂಗ್ರೆಸ್-ಎನ್ ಸಿಪಿ ಜೊಒಯೆ ಕೈಜೋಡಿಸಿದ ಉದ್ಧವ್ ಮಹಾರಾಷ್ಟ್ರ ಮುಖ್ಯಮಂತ್ರಿಯಾದ್ರು. ಮೇ 28ರ ಒಳಗೆ ಅಂದ್ರೆ ಸಿಎಂ ಆಗಿ 6 ತಿಂಗಳ ಒಳಗಾಘಿ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯನಾಗಿ ಉದ್ಧವ್ ಠಾಕ್ರೆ ಆಯ್ಕೆಯಾಗಬೇಕಾಗಿತ್ತು. ಇದೀಗ ಮೇ 21ರಂದು ನಡೆಯುವ ಮತದಾನ ಹಿನ್ನೆಲೆ ನಾಮಪತ್ರ ಸಲ್ಲಿಕೆ ಮಾಡಿದ್ದು ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. 143.26 ಕೋಟಿ ಚರಸ್ಥಿ ಹಾಗೂ ಸ್ಥರಾಸ್ತಿ ಇದೆ ಎಂದು ಘೊಷಣೆ ಮಾಡಿಕೊಂಡಿದ್ದಾರೆ.. 143 ಕೋಟಿ ಆಸ್ತಿ ಇದ್ದರೂ ಉದ್ಧವ್ ಠಾಕ್ರೆ ಬಳಿ ಒಂದು ಸ್ವಂತ ಕಾರಿಲ್ಲ. ಇನ್ನು ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಶಿವಸೇನಾ ಮುಖವಾಣಿ ಸಾಮ್ನಾ ಪತ್ರಿಕರೆಯ ಸಂಪಾದಕಿ ಕೂಡ ಹೌದು. ಉದ್ಧವ್ ಹಾಗೂ ಪತ್ನಿ ರಶ್ನಿ ಇಬ್ಬರ ಾಸ್ತಿ ಸೇರಿ 143.26 ಕೋಟಿ ಘೋಷಣೆ ಮಾಡಿಕೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಚುನಾವಣೆ ಎದುರಿಸಿಫಲಿತಾಂಶ ಬಂದಮೇಲೆ ಕಮಲಕ್ಕೆ ಕೈ ಕೊಟ್ಟು ರಾಜಕೀಯ ವಿರೊಧಿಗಳಾದ ಕಾಂಗ್ರೆಸ್, ಎನ್ ಸಿಪಿ ಜೊಗೆ ಕೈ ಜೋಡಿಸುವ ಮೂಲಕ ಮೋದಿ ಗೆ ಶಾಕ್ ನೀಡಿ ಅಧಿಕಾರದ ರಾಜಕಾರಣಕ್ಕೆ ಉದ್ಧವ್ ಠಾಕ್ರೆ ಎಂಟ್ರಿಯಾದ್ರು. ಬಾಳ್ ಠಾಕ್ರೆ ಮಹಾರಾಷ್ಟ್ರದಲ್ಲಿ ಕಿಂಗ್ ಹಾಗೂ ಕಿಂಗ್ ಮೇಕರ್ ರೀತಿ ಇದ್ರು.. ಚುನಾವಣಾ ರಾಜಕಾರಣದಿಂದ ದೂರ ಇದ್ರು.. ಅಲ್ಲದೇ ಕಾಂಗ್ರೆಸ್ ವಿರೋಧಿ ರಾಜಕೀಯವನ್ನ ಮಾಡಿಕೊಂಡು ಬಂದಿದ್ರು. ಆದ್ರೆ, ಉದ್ಧವ್ ಠಾಕ್ರೆ ಬಿಜೆಪಿಗೆ ಪಾಠ ಕಲಿಸುವ ದೃಷ್ಠಿಯಿಂದ ತಂದೆಯ ಹಾದಿಯನ್ನ ಬದಲಾಯಿಸಿ ಚುಣಾವಣೆ ರಾಜಕಾರಣ ಹಾಗೂ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಶಿವಸೇನಾ ಇತಿಹಾಸದಲ್ಲಿ ಹೊಸ ಪರ್ವವನ್ನ ಶುರು ಮಾಡಿದ್ದಾರೆ.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ