Tipaturu: ತಿಪಟೂರು: ಇಂದು ನಗರದ ಮುಖ್ಯ ರಸ್ತೆ ಬೀದಿಗಳಲ್ಲಿ ರಾಷ್ಟ್ರೀಯ ವಿದ್ಯುತ್ ಸುರಕ್ಷಾ ಸಪ್ತಾಹ ಜಾಗೃತಿ ಮೂಡಿಸಲು ರಸ್ತೆಗಳಲ್ಲಿ ಸುರಕ್ಷತಾ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಜಾಗೃತಿ ಮೂಡಿಸಿದರು.
ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳಿಗೆ ತಂತಿಯನ್ನು ಕಟ್ಟಿ ಬಟ್ಟೆ ಒಣಗಿಸುವುದು ಮತ್ತು ಜಾನುವಾರುಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟುವುದು ಇದರಿಂದಾಗಿ ಹೆಚ್ಚಿನ ವೋಲ್ಟೇಜ್ ಬರುವುದು.
ಮಳೆಗಾಲದಲ್ಲಿ ಗಾಳಿ ಮಳೆಗೆ ಕೆಳಗೆ ಬಿದ್ದ ವಿದ್ಯುತ್ ಕಂಬ ತುಂಡರಿಸಿ ಬಿದ್ದ ಎಲೆಕ್ಟ್ರಿಕ್ ವಯರ್ ಮುಟ್ಟುವುದು ಅಂತಹ ಸ್ಥಳಗಳಿಗೆ ತೆರಳಿ ಅಪಾಯ ತಂದುಕೊಳ್ಳುವ ಸಾಧ್ಯತೆ ಇರುತ್ತದೆ.ಅಲ್ಲದೆ ಹಸಿ ಕೈ (ಒದ್ದೆ ಕೈ) ಮೂಲಕ ಕರೆಂಟ್ ಸ್ವಿಚ್ ಬೋರ್ಡ್ ಮುಟ್ಟುವುದು ಆನ್ ಅಂಡ್ ಆಫ್ ಮಾಡುವುದು ಹೀಗೆ ಅನೇಕ ವಿಧದಲ್ಲಿ ವಿದ್ಯುತ್ ನಿಂದ ನಮಗೆ ಅಪಾಯ ಇರುತ್ತದೆ ಇಂತಹ ಸಮಯದಲ್ಲಿ ಅದರಲ್ಲಿಯೂ ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು ಏನು ಮಾಡಬೇಕು ಮತ್ತು ಏನು ಮಾಡಬಾರದು. ಎಂದು ವಿದ್ಯುತ್ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಯಿತು.