www.karnatakatv.net: ರಾಯಚೂರು : ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಾಹಾ ಸಂಸ್ಥೆ ಜಿಲ್ಲಾ ವಾಣಿಜ್ಯೋದ್ಯಮ ಸಂಘ ಆಯೋಜಿಸಿದ ಸಂವಾದ ಸಭೆಯಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಆನ್ಲೈನ್ ಮೂಲಕ ಉದ್ಘಾಟಿಸಿದರು.
ರೈತರಿಗೆ ಕೃಷಿಗೆ ಬೇಕಾಗುವ ಹೊಸ ಕೃಷಿ ತಂತ್ರಗಳು ಪ್ರದರ್ಶನಕ್ಕೆ ಇಡಲಾಗಿತ್ತು. 20ಕ್ಕೂ ಹೆಚ್ಚು ಸ್ಟಾಲ್ ಅಳವಡಿಸಲಾಗಿದೆ . ರಾಯಚೂರು ಜಿಲ್ಲೆಯ ಹಲವು ಭಾಗದಿಂದ ಬಂದು ರೈತರು ವೀಕ್ಷಣೆ ಮಾಡಿದರು. ವಿದ್ಯಾರ್ಥಿಗಳು ಭಾಗವಹಿಸಿದರು. ಈ ಸ್ಟಾಲ್ ಗಳಲ್ಲಿ ರೈತರ ಸಾಮಗ್ರಿಗಳನ್ನು ಅಲ್ಲದೆ ಕೆಲವು ದ್ವಿದಳ ಧಾನ್ಯಗಳು ಇಡಲಾಗಿತ್ತು. ಧಾನ್ಯಗಳನ್ನು ಕಡಲೆ , ಬೀನ್ಸ್ , ಬಟಾಣಿ, ಬಹಳ ದಿನಗಳು ಸಂಗ್ರಹಿಸಲು ತೋರಿಸಲಾಗಿತ್ತು . ರೈತರ ಹೊಲಗಳಲ್ಲಿ ಎಣ್ಣೆಯನ್ನು ಡ್ರೋನ್ ಮೂಲಕ ಸಿಂಪಡಣೆ ಮಾಡುವುದು ಹಾಗೂ ಗೊಬ್ಬರಗಳನ್ನು ಯಂತ್ರಗಳ ಸಹಾಯದಿಂದ ಕಡಿಮೆ ಸಮಯದಲ್ಲಿ ಹಾಕುವುದು ರೈತರಿಗೆ ತರಬೇತಿಯನ್ನು ನೀಡಲಾಗಿತ್ತು. ಎಲ್ಲಾ ರೀತಿಯ ಯಂತ್ರಗಳು ರೈತರಿಗೆ ಯಾವ ರೀತಿ ಬಳಕೆ ಮಾಡುವುದು ವಿದ್ಯಾರ್ಥಿಗಳು ಹಾಗೂ ರೈತರು ಗಮನ ಸೆಳೆದರು.
ಅನಿಲ್ ಕುಮಾರ್, ಕರ್ನಾಟಕ ಟಿವಿ – ರಾಯಚೂರು