Sunday, September 8, 2024

Latest Posts

ಸೆ.27ರ ಭಾರತ್ ಬಂದ್ ಗೆ ಬೆಂಬಲ..!

- Advertisement -

www.karnatakatv.net: ರಾಯಚೂರು: ರೈತರ ವಿವಿಧ ಬೇಡಿಕ್ಕೆ ಆಗ್ರಹಿಸಿ ಮತ್ತು ಕೆಂದ್ರ ಸರ್ಕಾರದ ಆಶ್ವಾಸನೆ ಹುಸಿಯಾದ ಹಿನ್ನಲೆಯಲ್ಲಿ, ರೈತರಿಗೆ ಮಾರಕವಾದ ಕೃಷಿ ಮಸೂದೆ ಖಂಡಿಸಿ ಇದೆ 27 ರಂದು ರೈತರು ಭಾರತ ಬಂದ್ ಕರೆ ನೀಡಿದ್ದಾರೆ.

ರೈತ ಸಂಘದ ರಾಜ್ಯ ಗೌರವ ಅದ್ಯಕ್ಷ ಚಾಮರಸ ಮಾಲೀಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರದ ಬರುವ ಮುಂಚೆ ರೈತರಿಗೆ ದೊಡ್ಡ ದೊಡ್ಡ ಆಶ್ವಾಸನೆ ಕೊಟಿತ್ತು. ರೈತರ ಸಾಲ ಮನ್ನ ಮಾಡುತ್ತೆವೆ, ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ಹೇಳಿ ಅಧಿಕಾರ ಬಂದು ೮ ವರ್ಷಗಳು ಆದರು ಯಾವುದು ಆಗಿಲ್ಲ ಎಂದು ಟೀಕಿಸಿದರು. ಇನ್ನೂ ದಿನ ಬಳಿಕೆ ಮಾಡುವ ಗ್ಯಾಸ್ ಬೆಲೆ, ಪೆಟ್ರೋಲ್ ಡಿಸೇಲ್ ಬೆಲೆ ಹೇಚ್ಚಾಗಿದ್ದೆ. ಕೃಷಿ ಬೆಳೆಗಳು ಮಾರುಕಟ್ಟೆಯಲ್ಲಿ ಕುಸಿದಿವೆ ಮತ್ತು ಕೃಷಿಗೆ ಮಾರಕವಾಗಿರುವ ಮಸೂದೆಗಳನ್ನು
ನಾವು ಖಂಡಿಸುತ್ತೆವೆ ಎಂದರು. ನಲವಾತ್ತಕ್ಕೂ ಹೆಚ್ಚು ಸಂಘಟನೆಗಳನ್ನು ಕೂಡಿಸಿ ಭಾರತ್ ಬಂದ್ ಗೆ ಬೆಂಬಲ ನೀಡುತ್ತೆವೆ. ಕೇಂದ್ರ ಸರ್ಕಾರ ಸ್ಪಂದಿಸಲಿಲವೆಂದರೆ ನಿರಂತರವಾಗಿ ಹೊರಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss