ಲಾರಿ ಡಿಕ್ಕಿ ಹೊಡೆದು ಗಾಂಧಿ ಪುತ್ಥಳಿ ಸಂಪೂರ್ಣ ನಾಶ..!

www.karnatakatv.net :ರಾಯಚೂರು : ನಗರದ ಗಡಿಭಾಗದಲ್ಲಿ ಇರುವ ತೆಲಂಗಾಣದ  ಇಂದಪೂರಿನಲ್ಲಿ ಗಾಂಧಿ ಪುತ್ಥಳಿಗೆ ಲಾರಿ ಡಿಕ್ಕಿ ಹೊಡೆದು ಸಂಪೂರ್ಣ ನಾಶವಾಗಿದೆ.  

ಶಕ್ತಿನಗರದ ೨ ಕಿಲೋ ಮೀಟರ್ ಇರುವ ಗಡಿಭಾಗದ ತೆಲಂಗಾಣ ದ ಇಂದಪೂರ್ ನ ರಸ್ತೆ ಮಧ್ಯದಲ್ಲಿ ‌ಇರುವ ಗಾಂಧಿ ಪುತ್ಥಳಿ ಗೆ ವೇಗವಾಗಿ  ಬರುತ್ತಿದ್ದ ಹಾರು ಬೂದಿ  ಟ್ಯಾಂಕರ್  ಡಿಕ್ಕಿ  ಹೊಡೆದಿದ್ದು ಗಾಂಧಿ ಪುತ್ಥಳಿ ಸಂಪೂರ್ಣ ನಾಶವಾಗಿದೆ. ಇನ್ನೂ ಘಟನ ಸ್ಥಳಕ್ಕೆ ಬಂದ ತೆಲಂಗಾಣದ ಕೃಷ್ಣ ಪೋಲಿಸ್ ಠಾಣೆಯ ಪರಿಶೀಲನೆ ನಡೆಸಿದರು. ನಂತರ ಟ್ಯಾಂಕರ್  ಮಾಲಿಕ ಸ್ಥಳಕ್ಕೆ  ಬಂದು  ಮಹಾತ್ಮ ಗಾಂಧಿ ನೂತನ ಪುತ್ಥಳಿ ನಿರ್ಮಾಣ ಮಾಡುವುದೆಂದು  ಸ್ಥಳಿಯಾರಿಗೆ ಬರವಸೆ ನೀಡಿದರು.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

About The Author