Tuesday, June 3, 2025

Latest Posts

Ganesh Utsava: ಮುಸ್ಲಿಂ ಮಹಿಳೆಯಿಂದ ಗಣೇಶ ತಯಾರು- ಭಾವೈಕ್ಯತೆ ಮೆರೆಯುತ್ತಿರುವ ಸುಮನ್..!

- Advertisement -

ಹುಬ್ಬಳ್ಳಿ ; ಇಂದು ಎಲ್ಲೆಡೆ ಜಾತಿ, ಧರ್ಮ ಮತ ಪಂಥ ಮೇಲು ಕೀಳು ಬಡವ ಬಲ್ಲಿದ, ಹೆಣ್ಣು ಗಂಡು ಎಂಬ ಭೇಧಭಾವದ ಕಂದಕ ಕ್ಕೆ ಸಿಲುಕಿ ನರಳಾಡುತಿದ್ದು.‌ಇಂತಹ ಸಂದರ್ಭದಲ್ಲಿ ಹಿಂದುಗಳ ಹಬ್ಬ ಅದು ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬವ ಜೊತೆಗೆ ಹಿಂದೂಗಳನ್ನ ಒಡಗೂಡಿಸಿದ ಗಣೇಶ ಹಬ್ಬ ನಾಡಹಬ್ಬವಾಗಿದೆ. ಈ ಹಬ್ಬಕ್ಕೆ ಗಣೇಶ ಮೂರ್ತಿ ಇಲ್ಲ ಎಂದರೆ ಹೇಗ ವಿಘ್ನ ನಿವಾರಕನನ್ನ ತಯಾರು ಮಾಡಿ ಹಿಂದು ಮುಸ್ಲಿಂ ಬೇಧ ಭಾವ ಹೊಡೆದು ಹಾಕಿದ ಮುಸ್ಲಿಂ ಸಮುದಾಯದ ಮಹಿಳೆಯ ಈ ವಿಶೇಷ ವರದಿ.

ಈ ಮಹಿಳೆಯನ್ನ ಒಂದು ಸಲ ನೋಡಿ. ಇವಳ ಹೆಸರು ಸುಮನ್.. ಇವಳು ಗಣೇಶ ವಿಗ್ರಹ ತಯಾರಿಸುವುದು ಇವಳ ಕಾಯಕ ಇನ್ನು ಕಳೆದ ಕೇಲ ದಿನಗಳಿಂದ ಇದೇ ಇವಳ ಆಕೆಯ ಜೀವನೋಪಾಯದ ಪ್ರಮುಖ ಮೂಲ. ಈಕೆಯ ಕಲಾತ್ಮಕ ಕೌಶಲ್ಯಕ್ಕೆ ಯಾವುದೇ ಧರ್ಮವಿಲ್ಲ. ಹುಬ್ಬಳ್ಳಿಯ ಮೂಲದ ಮುಸ್ಲಿಂ ಮಹಿಳೆ ಕಳೆದ ನಾಲ್ಕು ವರ್ಷಗಳಿಂದ ಗಣೇಶ ಪ್ರತಿಮೆ ತಯಾರಿಸುವ ತಂಡದಲ್ಲಿ ಕೆಲಸ ಮಾಡುತ್ತಿ ದ್ದಾರೆ. ತಮ್ಮ ಕೆಲಸ ಹಾಗೂ ಇಂದಿನ ಧರ್ಮದಂಗಲ್ ಸಂದರ್ಭದಲ್ಲಿ ಇವರ ಭಕ್ತಿಗೆ ಮೆಚ್ಚಲೇ ಬೇಕು..

ಹೀಗೇ ಶ್ರದ್ಧಾ ಭಕ್ತಿಯಿಂದ ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಪರಿಣಿತೆ, ಗಣೇಶ ವಿಗ್ರಹ ತಯಾರಕರಾದ ನಿರುಪಮಾ ಯಾದವ್ ಅವರ ಬಳಿ ಸಹಾಯಕಿಯಾಗಿ ಸುಮನ್ ಕೆಲಸ ಮಾಡುತ್ತಿದ್ದಾರೆ. ಇವರ ಜೊತೆ ಇನ್ನಿಬ್ಬರು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅವರು ವಿಗ್ರಹಕ್ಕೆ ಆಭರಣ ವಿನ್ಯಾಸ ಮತ್ತು ಅಂತಿಮ ಟಚ್ ನೀಡುತ್ತಾರೆ. ಹಣಕಾಸಿನ ಸಮಸ್ಯೆಯಿಂದಾಗಿ ಸುಮನ್ ತಮ್ಮ ಮನೆಯ ಬಳಿಯಿದ್ದ ವಿಗ್ರಹ ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಪರಿಸರ ಸ್ನೇಹಿ ಗಣಪ ತಯಾರಿಕೆ ಹಾಗೂ ವಿವಿಧ ರೀತಿಯ ಗಣೇಶ ವಿಗ್ರಹಳ ತಯಾರಿಕೆ ಖುಷಿ ನೀಡುತ್ತದೆ ಎನ್ನುವ ಸುಮನ್ ಅವರ ಕೆಲಸ ಕುರಿತು ಗಣೇಶ ಮೂರ್ತಿ ತಯಾರಿಸುವ ಘಟಕದ ಮಾಲೀಕರಾದ ನಿರುಪಮಾ ಹೇಳುವುದು ಹೀಗೆ..

ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹ ನಿಷೇಧದ ನಂತರ ಕಾಗದದ ವಿಗ್ರಹ ತಯಾರಿಸಲು ಆರಂಭಿಸಿದೆ. ಮುಸ್ಲಿಂ ಸಮುದಾಯದ ಮಹಿಳೆ ಸೇರಿದಂತೆ ವಿವಿಧ ಸಮುದಾಯಗಳ ಮೂವತ್ತು ಮಂದಿ ಕೆಲಸ ಮಾಡುವ ಇಲ್ಲಿ
ಉತ್ತಮ ಗುಣಮಟ್ಟದ ಮಣ್ಣು ಸಿಗುವುದು ಈ ದಿನಗಳಲ್ಲಿ ತುಂಬಾ ಕಷ್ಟ, ಜೇಡಿ ಮಣ್ಣಿನಿಂದ ತಯಾರಿಸುವ ಗಣೇಶ ಪ್ರತಿಮೆಗಳು ಬೇಗ ಬಿರುಕು ಬಿಡುತ್ತವೆ. ಆದ್ದರಿಂದ ವಿಗ್ರಹ ತಯಾರಕರಲ್ಲಿ ಜನಪ್ರಿಯ ವಾಗಿರುವ ‘ಪೊರ್ಬಂದರ್ ಚಾಕ್ ಮಿಟ್ಟಿ’ ಮತ್ತು ವೃತ್ತಪತ್ರಿಕೆಗಳೊಂದಿಗೆ ವಿಗ್ರಹಗಳನ್ನು ತಯಾರಿಸುತ್ತಾರೆ .
ಸೀಮೆ ಸುಣ್ಣದ ಪುಡಿ ಮತ್ತು ವೃತ್ತಪತ್ರಿಕೆಯ ಸಂಯೋಜನೆಯು ಕಡಿಮೆ ತೂಕವಿದ್ದು ಅದರಿಂದ ಬಿರುಕು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಭಾಗದಲ್ಲಿ ಇವರೊಬ್ಬರೇ ಕಾಗದದಿಂದ ಗಣೇಶ ತಯಾರಿಸುವವರಾಗಿದ್ದಾರೆ. ಪ್ರತಿ ವರ್ಷ ಸುಮಾರು ೫೦೦ ವಿಗ್ರಹ ರಡಿ ಮಾಡುತ್ತಾರೆ. ಆದರೆ ಈ ವರ್ಷ ಅತಿಯಾದ ಮಳೆಯಿಂದ ಗಣೇಶ ಮೂರ್ತಿ ಕಡಿಮೆ ಮಾಡಲಾಗಿದೆ. ‌ ಆರ್ಥಿಕ ಹೊರ ಸಹ ಹೆಚ್ಚಾಗಿದೆ.

Ration card: ರಾಜ್ಯದಲ್ಲಿ 4.59 ಲಕ್ಷ ಬಿಪಿಎಲ್ ಕಾರ್ಡ್ ಡಿಲೀಟ್: ನಕಲಿ ದಾಖಲೆ ನೀಡಿದರೇ ದಂಡ ಫಿಕ್ಸ್..!

Hubli Ring Road : ಹುಬ್ಬಳ್ಳಿ ಹೊರವಲಯದಲ್ಲಿ ಮೂರು ವಾಹನಗಳು ಡಿಕ್ಕಿ, ಘಟನೆಯಲ್ಲಿ ಓರ್ವ ಸಾವು..!

Raani movie: ಭಾರಿ ಮೊತ್ತಕ್ಕೆ ಮಾರಾಟವಾಯಿತು “ರಾನಿ” ಆಡಿಯೋ ರೈಟ್ಸ್ .

 

- Advertisement -

Latest Posts

Don't Miss