Friday, September 20, 2024

Latest Posts

ಎರಡೇ ತಿಂಗಳಲ್ಲಿ ಉತ್ತಮ ಫಲ ಪಡೆದ ಉಪ್ಪಿ: ಬೆಳೆ ಬೆಳೆಯಲು ಟಿಪ್ಸ್ ಕೊಟ್ಟ ರಿಯಲ್ ಸ್ಟಾರ್…

- Advertisement -

ತಮ್ಮ ಸಿನಿಮಾದ ಮೂಲಕ ದೇಶ ಅಂದ್ರೆ ಹಿಂಗಿರ್ಬೇಕು ಅಂತಾ ಹೇಳಿದ್ದು ರಿಯಲ್ ಸ್ಟಾರ್ ಉಪೇಂದ್ರ. ಅಂತೆಯೇ ತಮ್ಮ ತಲೆಯಲ್ಲಿ ಬರುವ ಯೂನಿಕ್ ಐಡಿಯಾಗಳನ್ನ ಜನರಿಗೆ ತಿಳಿಸಲೆಂದೇ ಪ್ರಜಾಕೀಯ ಎಂಬ ಪಕ್ಷ ಕಟ್ಟಿದ್ರು. ಆದ್ರೆ ಎಲೆಕ್ಷನ್‌ಲ್ಲಿ ಭಾಗವಹಿಸದಿದ್ರೂ, ಮುಂದಿನ ಬಾರಿಯ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡು ರೆಡಿಯಾದಂತಿದ್ದಾರೆ.

ಆದ್ರೆ ಈಗ ನಾವು ಉಪ್ಪಿ ಗಾರ್ಡನ್‌ ಕ್ರಿಯೇಟ್ ಮಾಡಿ, ಅದರಲ್ಲಿ ಕಡಿಮೆ ಸಮಯದಲ್ಲಿ ಮತ್ತು ಯಾವುದೇ ಕ್ರಿಮಿನಾಶಕ ಬಳಸದೇ ಕೆಲ ತರಕಾರಿ, ಹೂವುಗಳನ್ನು ಹೇಗೆ ಬೆಳೆಸಿದ್ದಾರೆ ಎಂದು ಹೇಳಲು ಹೊರಟಿದ್ದೇವೆ.
ಲಾಕ್‌ಡೌನ್ ಶುರುವಾಗಿದ್ದ ಸಮಯದಲ್ಲಿ ಉಪ್ಪಿ ರೈತನಂತೆ ದುಡಿಯುತ್ತಿದ್ದುದ್ದನ್ನ ನೀವೂ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೀರಿ. ಅದರ ಫಸಲು ಈಗ ಬಂದಿದ್ದು, ಈ ಬಗ್ಗೆ ಉಪ್ಪಿ ತಮ್ಮ ಫೇಸ್‌ಬುಕ್‌ನಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ.

2 ತರಹದ ಬದನೆಕಾಯಿ, ಚೆಂಡುಹೂವು, ಸೌತೇಕಾಯಿ, ಮೆಣಸಿನಕಾಯಿ ಬೆಳೆದಿದ್ದು, ಇದಕ್ಕೆ ಯಾವುದೇ ಕ್ರಿಮಿನಾಶಕ ಸಿಂಪಡಿಸಿಲ್ಲ, ಬರೀ ದನದ ಗೊಬ್ಬರ ಮತ್ತು ನೀರು ಹಾಕಿ ಗಿಡ ಬೆಳೆಸಿದ್ದೇವೆ ಎಂದು ಉಪ್ಪಿ ಹೇಳಿದ್ದಾರೆ.

ಗಿಡ ಬೆಳೆಯುವಾಗ ಕೀಟಗಳು ಹುಟ್ಟಿಕೊಳ್ಳುವುದು ಸಹಜ, ಆದ್ರೆ ಕ್ರಿಮಿನಾಶಕ ಹಾಕಿ, ಭೂಮಿಯನ್ನ ಹಾಳುಮಾಡಬಾರದು. ತಾಳ್ಮೆಯಿಂದ ಗಿಡ ನೆಟ್ಟು, ಬೆಳೆಸಿದರೆ, ಉತ್ತಮ ಫಲ ನಿಮ್ಮದಾಗುತ್ತದೆ. ತಾವು ಬೆಳೆದಿರುವ ಬೆಳೆ ತೋರಿಸಬೇಕೆನ್ನಿಸಿತು ಅದಕ್ಕೆ ಈ ವೀಡಿಯೋ ತೋರಿಸಿದ್ದು, ಧನ್ಯವಾದಗಳು ಎಂದಿದ್ದಾರೆ. ಈ ಮೂಲಕ ಬೆಳೆ ಬೆಳೆಯುವಾಗ ತಾಳ್ಮೆ ಮುಖ್ಯ ಎಂದು ಉಪ್ಪಿ ಕರೆಕೊಟ್ಟಿದ್ದಾರೆ.

https://youtu.be/JkmwVHYC2oU

- Advertisement -

Latest Posts

Don't Miss