- Advertisement -
ಕರ್ನಾಟಕ ಟಿವಿ : ಕಳೆದು ಎರಡು ತಿಂಗಳಿನಿಂದ ಕೊರೊನಾ ಹಿನ್ನೆಲೆ ಸ್ಥಗಿತವಾಗಿದ್ದ ರೈಲು ಸಂಚಾರ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೇ 12 ರಿಂದ ದೇಶಾದ್ಯಂತ ಮೊದಲ ಹಂತದಲ್ಲಿ 15 ರೈಲುಗಳು ಸಂಚಾರ ಮಾಡಲಿದೆ ಅಂತ ರೇಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ. ಇದು ಮೊದಲು ವಲಸೆ ಕಾರ್ಮಿಕರಿಗಾಗಿ 15 ಶ್ರಮಿಕ್ ಸ್ಪೆಷಲ್ ಕಾರ್ಯಾರಂಭ ಮಾಡಲಿದ್ದು ದಿಬ್ರುಘರ್, ಅಗರ್ತಲಾ, ಹೌರಾ, ಪಾಟ್ಲಾ, ರಾಂಚಿ, ಭುವನೇಶ್ವರ, ಸಿಂಕದರಾಬಾದ್, ಬೆಂಗಳೂರು, ಚೈನ್ನೈ, ತಿರುವನಂತಪುರಂ, ಮಡಗಾವ್, ಮುಂಬೈ, ಅಹಮದಾಬಾದ್ ಹಾಗೂ ಜಮ್ಮುವಿಗೆ ಸಂಚಾರ ನಡೆಸಲಿದೆ.
- Advertisement -