Political News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಕ್ರವರ್ತಿ ಸೂಲಿಬೆಲೆಯವರು ಉಡುಪಿ ಪ್ರವಾಸಕ್ಕೆ ಬರುತ್ತಿರುವ ಬಗ್ಗೆ ವ್ಯಂಗ್ಯವಾಡಿದ್ದು, ಶಾಸಕ ಸುನೀಲ್ ಕುಮಾರ್ ಈ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಚಕ್ರವರ್ತಿ ಸುಲಿಬೆಲೆಯವರ ಬಗ್ಗೆ ವ್ಯಂಗ್ಯದ ಮಾತನಾಡುವ ಯಾವುದೇ ನೈತಿಕ ಅಧಿಕಾರ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಲ್ಲ. ನಿಮಗೆ ಭಾರತೀಯತೆ, ಇತಿಹಾಸದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ನಿಮ್ಮ ಇಲಾಖೆ ವ್ಯಾಪ್ತಿಯಲ್ಲಿ ಎಷ್ಟು ಅಂಗನವಾಡಿಗಳಿವೆ, ಅಪೌಷ್ಠಿಕತೆಯ ಪ್ರಮಾಣ ಎಷ್ಟಿದೆ ? ಎಂಬ ಬಗ್ಗೆಯೇ ಜ್ಞಾನವಿಲ್ಲದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉಡುಪಿ ಜಿಲ್ಲೆಯ ಬಗ್ಗೆಯಾಗಲಿ, ಚಕ್ರವರ್ತಿ ಸುಲಿಬೆಲೆಯವರ ಬಗ್ಗೆಯಾಗಲಿ, ಭಾರತೀಯತೆಯ ಬಗ್ಗೆಯಾಗಲಿ ಮಾತನಾಡುವ ಅರ್ಹತೆ ಹೊಂದಿಲ್ಲ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದವರ ಪರವಾಗಿ ವಕಾಲತ್ತು ವಹಿಸಿದ ನೀವು ಕುಂದಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಭಾಷಣಕ್ಕೆ ಪೊಲೀಸ್ ಬಲದ ಮೂಲಕ ವಿರೋಧ ವ್ಯಕ್ತಪಡಿಸುತ್ತಿರುವುದು ಸಹಿಸಲು ಸಾಧ್ಯವಿಲ್ಲ. ಇದು ತುರ್ತುಪರಿಸ್ಥಿತಿಯ ಇನ್ನೊಂದು ಮುಖ ಎಂದು ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು..?
ಚಕ್ರವರ್ತಿ ಸೂಲಿಬೆಲೆಯವರು ಸುಳ್ಳಿನ ಚಕ್ರವರ್ತಿ. ಬಾಯಿ ತೆಗೆದರೆ, ರಾಮಾಯಣ, ಭಗವದ್ಗೀತೆ ಎಂದು ಹೇಳುತ್ತಾರೆ. ಆದರೆ ಅವರು ಎಷ್ಟು ಸುಳ್ಳು ಮಾತನಾಡುತ್ತಾರೆಂದು ರಾಜ್ಯದ ಜನರಿಗೆ ಗ“ತ್ತು. ಕಪ್ಪಗಿರೋದನ್ನು ಬೆಳ್ಳಗೆ ಮಾಡೋದ್ರಲ್ಲಿ, ಬೆಳ್ಳಗೆ ಇರೋದನ್ನು ಕಪ್ಪಗೆ ಮಾಡೋದ್ರಲ್ಲಿ ಬಹಳ ನಿಸ್ಸೀಮರು ಅಂತಾ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು.
ದೇಶದಲ್ಲಿ ಸಂವಿಧಾನದ ಘನತೆ ಎತ್ತಿ ಹಿಡಿದ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಪಕ್ಷ. ಹಾಗಾಗಿ ಚಕ್ರವರ್ತಿಯವರಿಂದ ನಾವು ಯಾವುದೇ ಪಾಠ ಕಲಿಯಬೇಕಾಗಿಲ್ಲ. ಉಡುಪಿಯಲ್ಲ ಅವರು 3 ದಿನದ ಪ್ರವಾಸದಲ್ಲಿದ್ದಾರೆ ಅಂತಾ ಕೇಳ್ಪಟ್ಟೆ ಅವರು ಪ್ರವಾಸ ಮಾಡಲಿ. ಆದರೆ ದ್ವೇಷ ದ ಭಾಷಣ, ಸುಳ್ಳು ಬಿತ್ತೋದನ್ನ, ವಿಷಬೀಜ ಬಿತ್ತೋದನ್ನು ಅವರು ಮಾಡಬಾರದು, ಯಾಕಂದ್ರೆ ಉಡುಪಿ ಜಿಲ್ಲೆಯ ಜನ ಶಾಂತಿಪ್ರಿಯರು ಅಂತಾ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದರು.