Wednesday, June 18, 2025

Latest Posts

Protection: ಮಾಜಿ ಸಚಿವ ಜಯಚಂದ್ರಗೆ ಸೂಕ್ತ ಭದ್ರತೆ- ಕಾನೂನು ಸಚಿವ ಎಚ್ ಕೆ ಪಾಟೀಲ್

- Advertisement -

2014 ಮತ್ತು 2016ರ ನಡುವೆ ನಂದಿ ಮೂಲಸೌಕರ್ಯ ಕಾರಿಡಾರ್ ಎಂಟರ್‌ಪ್ರೈಸಸ್‌ನಲ್ಲಿ (ನೈಸ್) ನಡೆದಿರುವ ಅಕ್ರಮಗಳ ಕುರಿತು ವರದಿ ನೀಡಿದ ಬೆನ್ನಲ್ಲೇ ಮಾಜಿ ಸಚಿವ ಮತ್ತು ನವದೆಹಲಿಯ ರಾಜ್ಯದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರಿಗೆ ಜೀವ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಸರ್ಕಾರ ಸೂಕ್ತ ಭದ್ರತೆ ನೀಡಲಾಗುವುದು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಹೇಳಿದರು.

ಹುಬ್ಬಳ್ಳಿ ನಗರದಲ್ಲಿ ಶನಿವಾರ ತಮ್ಮನ್ನ ಭೇಟಿಯಾದ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಸಚಿವ ಟಿ. ಬಿ. ಜಯಚಂದ್ರ ಅವರಿಗೆ ಜೀವ ಬೆದರಿಕೆ ಬಂದಿದ್ದು ನಿಜ ನಾನು ಸಹ ಮಾಧ್ಯಮಗಳಲ್ಲಿ ಸಹ ನೋಡಿದ್ದೇನೆ. ಈಗ ಕುರಿತು ಮಾಹಿತಿ ಸಹ ಪಡೆದುಕೊಂಡೆ ಎಂದ ಅವರು ಮಾಜಿ ಸಚಿವ ಟಿ‌ ಬಿ ಜಯಚಂದ್ರ ಅವರು ಒಳ್ಳೆಯ ಸಚಿವರಾಗಿದ್ದವರುಸಮರ್ಥವಾಗಿ ಕೆಲಸ ಮಾಡತಾ ಇದ್ದಾರೆ ಈಗ ನೈಸ್ ಯೋಜನೆ ಕುರಿತು ಒಳ್ಳೆಯ ವರದಿ ಕೊಟ್ಟಿದ್ದಾರೆ.

ನಿಷ್ಪಕ್ಷಪಾತ ಹಾಗೂ ಒಳ್ಳೆಯ ವರದಿ ಕೊಡಲಾಗಿದೆ ಆದರೆ ವರದಿ ಕೊಟ್ಟ ಹಿನ್ನಲೆಯಲ್ಲಿ ಕರೆ ಬಂದಿರಬಹುದು
ಟಿ. ಬಿ. ಜಯಚಂದ್ರ ಅವರು ಸಹ ಸ್ವತಃ ಹೇಳಿದ್ದಾರೆ ಅವರಿಗೆ ಕಾನೂನಾತ್ಮಕವಾಗಿ ಏನು ಬೇಕು ಅದನ್ನ ಕೊಡುತ್ತೇವೆ ಸೂಕ್ತ ರಕ್ಷಣೆ ಸಹ ನೀಡಲಾಗುವುದು. ಜಯಚಂದ್ರ ಒಬ್ಬ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಇಂತಹ ಬೆದರಿಕೆಗೆ ಹೆದರಲ್ಲ ಎಂದರು. ಈಗಾಗಲೇ ತಮ್ಮ ಕೆಲಸ ಆಗತಾ ಇಲ್ಲ ಅನುದಾನ ಬರತಾ ಇಲ್ಲಾ ವರ್ಗಾವಣೆ ವಿಷಯಗಳಲ್ಲಿ ತಮ್ಮನ್ನ ಪರಿಗಣಿಸತಾ ಇಲ್ಲ ಸೇರಿದಂತೆ ಅನೇಕ ಬೇಡಿಕೆಗಳನ್ನು ಇರಿಸಿಕೊಂಡು ಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚೆ ಮಾಡಲಾಗಿದೆ.
ಶಾಸಕರ ಅಸಮಾಧಾನ ತಣಿಸಲು ಆಗಷ್ಟ್ 2 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ಕರೆದ ಕುರಿತು ಪ್ರತಿಕ್ರಿಯೆ ಮಾತನಾಡಿದ ಅವರು
ದೆಹಲಿಯಲ್ಲಿ ಕರೆದ ಸಭೆಗೂ ಶಾಸಕರ ಅಸಮಾಧಾನಕ್ಕೋ ಸಂಬಂಧ ಬೇಡಾ ದೆಹಲಿಯಲ್ಲಿ
ಪಕ್ಷದ ವರಿಷ್ಠರು ಮೇಲಿಂದ ಮೇಲೆ ಸಭೆ ಕರೆಯುತ್ತಿರುತ್ತಾರೆ
ಅದೊಂದು ಪಕ್ಷದ ಆಂತರಿಕ ಸಭೆ ಆಗಿದೆ. ದೆಹಲಿ ಸಭೆಗೂ ಶಾಸಕರ‌ ಅಸಮಾಧಾನಕ್ಕೋ ಯಾವುದೇ ಸಂಬಂಧವಿಲ್ಲ ಈಗಾಗಲೇ ಶಾಸಕರ ಬೇಡಿಕೆ , ಸಮಸ್ಯೆ ಕುರಿತು ಸುದೀರ್ಘವಾದ ಚರ್ಚೆ ಮಾಡಲಾಗಿದೆ ಕಾರಣ
ವರಿಷ್ಠರಾದ ರಾಹುಲ್‌ ಗಾಂಧಿ, ಎಐಸಿಸಿ ಸಭೆ ಕರೆದಿದ್ದು ನಿಜ ಅಲ್ಲಿ ವಿಧಾನ ಪರಿಷತ್ ಸದಸ್ಯರಾದ
ಬಿಕೆ ಹರಿಪ್ರಸಾದ್ ಹಾಗೂ ಶಾಸಕರ ಅಸಮಾಧಾನ ಕುರಿತು ಸಭೆ ಕರೆದಿಲ್ಲ ಅಲ್ಲಿ ಇವು ಚರ್ಚೆ ಸಹ ನಡೆಯಲ್ಲ ಎಂದರು. ಇದೇ ವೇಳೆ
ಈಗಾಗಲೇ ರಾಜ್ಯದ ಪ್ರವಾಸೋದ್ಯಮ ಹೇಗೆ ಅಭಿವೃದ್ಧಿ ಮಾಡಬೇಕು ಎಂಬ ಚರ್ಚೆ ಮಾಡಲಾಗಿದ್ದುಸಾಕಷ್ಟು ಪ್ರವಾಸಿ ತಾಣಗಳಿಗೆ ಜನರು ಹೋಗತಾ ಇದ್ದಾರೆ ಅಲ್ಲಿ ಮೂಲಸೌಕರ್ಯ ಸೇರಿದಂತೆ ಅಗತ್ಯ ನೆರವು ನೀಡಲಾವುದು ಎಂದರು.
ಉಡುಪಿಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರನ್ನ ಬೆತ್ತಲೆ ಚಿತ್ರೀಕರಣ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು
ಈ ಕುರಿತು ಮುಖ್ಯಮಂತ್ರಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಕೈಗೊಳ್ಳುತ್ತಾರೆ ಎಂದರು.

CT Ravi : ಸಿಟಿ ರವಿಗೆ ಹೊಸ ಹುದ್ದೆ..?! ಒಲಿಯುತ್ತಾ ರಾಜ್ಯಾಧ್ಯಕ್ಷ ಪಟ್ಟ..?!

Hariprasad : ಹರಿಪ್ರಸಾದ್‌ ಮನವೊಲಿಕೆಗೆ ಪರಂ ಪ್ರಯತ್ನ

Congress : ಸರ್ಕಾರವನ್ನು ಬೀಳಿಸುತ್ತೇವೆ ಎನ್ನುವುದು ನರಿ ದ್ರಾಕ್ಷಿಗೆ ಆಸೆ ಪಟ್ಟಂತೆ..! : ಕಾಂಗ್ರೆಸ್ ಟ್ವೀಟ್ ಮರ್ಮವೇನು..?!

- Advertisement -

Latest Posts

Don't Miss