Saturday, July 27, 2024

Latest Posts

ಮತ್ತೆ ಪಿಎಂ ಆಗ್ತಾರಂತೆ ಮೋದಿ- ಹಾಸನ, ಮಂಡ್ಯ,ತುಮಕೂರಲ್ಲಿ ಜೆಡಿಎಸ್ ಮೋಡಿ-ರಾಜಗುರು ಸಿಎಂ ಬಳಿ ನುಡಿದ ಭವಿಷ್ಯ ಹೇಗಿದೆ ನೋಡಿ

- Advertisement -

ಬೆಂಗಳೂರು: ಸಿಎಂ ಕುಮಾರಸ್ವಾಮಿ ಬೆಂಗಳೂರಿನ ಆರ್.ಟಿ ನಗರದಲ್ಲಿರುವ ರಾಜಗುರು ದ್ವಾರಕಾನಾಥ್ ಗುರೂಜೀ ಮನೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ನಡೆಸಿದರು. ಹೀಗಾಗಿ ದ್ವಾರಕಾನಾಥ್ ಗುರೂಜೀ ಮನೆಯ ಸುತ್ತಮುತ್ತ ಬಿಗಿ ಪೊಲೀಸ್​ ಬಂದೋ ಬಸ್ತ್​ ಏರ್ಪಡಿಸಲಾಗಿತ್ತು.  

ಇನ್ನು ಪೂಜೆ ನಡೆಸಿದ ನಂತರ ಸಿಎಂ ಕುಮಾರಸ್ವಾಮಿ, ಗುರೂಜಿ ಆಶೀರ್ವಾದ ಪಡೆದು 2 ದಿನ ವಿಶ್ರಾಂತಿಗಾಗಿ ಮಡಿಕೇರಿಗೆ ತೆರಳಿದ್ರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗುರೂಜಿ, ಸಿಎಂ ನನ್ನ ಜೊತೆ ವೈಯಕ್ತಿಕವಾಗಿ ಮಾತನಾಡಲು ಬಂದಿದ್ರು. ನಾಡಿನ ಮುಖ್ಯಮಂತ್ರಿಯಾಗಿ ಜನ ಹೇಳಿದನ್ನು ಕೇಳಬೇಕು. ಎಲ್ಲದಕ್ಕೂ ನೀವು ಪ್ರತಿಕ್ರಿಯೆ ಕೊಡಬೇಡಿ ಮಾಧ್ಯಮಗಳ ಜೊತೆ ಎಂದೂ ವಿಭಿನ್ನವಾಗಿ ಮಾತನಾಡಬೇಡಿ ಎಂದು ಸಿಎಂಗೆ ಸಲಹೆ ನೀಡಿದ್ದೇನೆ ಅಂತ ದ್ವಾರಕಾನಾಥ್ ಗುರೂಜಿ  ಎಂದ್ರು. ಈ ಬಗ್ಗೆ ಅವರು ನನಗೆ ಮಾತು ಕೊಟ್ಟಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಾಧ್ಯವಾದ್ರೆ ಉತ್ತರ ಕೊಡ್ತಾರೆ ಇಲ್ಲವೇ ನಗುತ್ತಾ ಹೋಗ್ತಾರೆ ಅಷ್ಟೇ ಎಂದು ದ್ವಾರಕಾನಾಥ್ ತಿಳಿಸಿದರು.

https://www.youtube.com/watch?v=B-Xtbnitga8

ಇನ್ನು, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ರಥ ನಿರ್ಮಿಸೋ ವಿಚಾರವಾಗಿ ಸಿಎಂ ಜೊತೆ ಚರ್ಚೆ ನಡೆಸಿದ್ದು ರಥ ನಿರ್ಮಾಣಕ್ಕೆ ಬೇಕಾಗಿರೋ 72ಕೋಟಿ ರೂಪಾಯಿ ಬೇಕಾಗುತ್ತದೆ. ಇದಕ್ಕಾಗಿ ತೆರಿಗೆ ಹಣವನ್ನಾಗಲಿ, ಸರ್ಕಾರದ ಹಣವನ್ನಾಗಲಿ ಬಳಸದೆ ಹುಂಡಿಯಲ್ಲಿರೋ ಹಣ ಬಳಕೆ ಮಾಡುವಂತೆ ಸಲಹೆ ಕೊಟ್ಟಿರುವೆ ಅಂತ ದ್ವಾರಕಾನಾಥ್ ಗುರೂಜಿ ಹೇಳಿದ್ರು. ಇನ್ನು ಧರ್ಮದ ಹೆಸರಲ್ಲಿ ಯಾರೇ ಸಿಎಂ ಆಗಿದ್ದರೂ ಅವರನ್ನ ಅಧಿಕಾರದಿಂದ ಕೆಳಗಿಳಿಸೋದು ಸುಲಭ ಅಲ್ಲ. ದೇವ್ರನ್ನ ಪೂಜೆ ಮಾಡೋವವರನ್ನ ದೇವರೇ ಕಾಪಾಡ್ತಾರೆ. ಈಗಿನ ಸರ್ಕಾರ ಪತನವಾದ್ರೆ ನನಗೆ ನೋವಾಗುತ್ತೆ ಅಂತ ಸಿಎಂ ಪರ ತಮ್ಮ ಅಭಿಮಾನ ಪ್ರದರ್ಶಿಸಿದ್ರು.

ಸಿಎಂ ಜೊತೆ ಇದನ್ನು ಬಿಟ್ಟು ಬೇರೇನೂ ಮಾತಾಡಿಲ್ಲ. ಅವರೂ ಏನನ್ನೂ ಕೇಳಿಲ್ಲ. ನೀವು ಧೈರ್ಯ ಕೆಡಬೇಡಿ,ರಾಜಕೀಯ ವಿಚಾರಕ್ಕೆ ತಲೆಕೆಡಿಸಿಕೊಳ್ಳಬೇಡಿ. ಒಳ್ಳೆ ಕೆಲಸಕ್ಕೆ ಅನುಗ್ರಹ ಇರಲಿದೆ ಅಂತ ಸಲಹೆ ಕೊಟ್ಟಿದ್ದೇನೆ ಅಂತ ದ್ವಾರಕಾನಾಥ್ ಗುರೂಜಿ ಹೇಳಿದ್ರು.

ಹಾಸನ, ಮಂಡ್ಯ , ತುಮಕೂರಲ್ಲಿ ಗೆಲ್ಲುತ್ತಂತೆ ಜೆಡಿಎಸ್

ಹಾಸನ , ಮಂಡ್ಯ,ತುಮಕೂರಿನಲ್ಲಿ ಗೆಲ್ಲೋದು ಜೆಡಿಎಸ್ ಅಭ್ಯರ್ಥಿ ಅಂತ ದ್ವಾರಕಾನಾಥ್ ಭವಿಷ್ಯ ದ್ವಾರಕಾನಾಥ್ ಭವಿಷ್ಯ ನುಡಿದಿದ್ದಾರೆ.

ಮೋದಿಯನ್ನ ತಡೆಯಲು ಸಾಧ್ಯವಿಲ್ಲ

ಇನ್ನು ರಾಷ್ಟ್ರ ರಾಜಕಾರಣ ಕುರಿತಾಗಿ ಸಿಎಂ ಜೊತೆ ಮಾತನಾಡಿದ್ದೇವೆ. ಬಿಜೆಪಿಗೆ ಬಹುಮತ ಬರೋದಿಲ್ಲ ಆದರೆ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರೋದನ್ನ ತಡೆಯೋಕೆ ಸಾಧ್ಯವಿಲ್ಲ ಅಂತ ದ್ವಾರಕಾನಾಥ್ ಭವಿಷ್ಯ ನುಡಿದಿದ್ದಾರೆ.

- Advertisement -

Latest Posts

Don't Miss