Friday, June 20, 2025

Latest Posts

Dress Shop Owner : ಹುಬ್ಬಳ್ಳಿ : ಬಟ್ಟೆ ಅಂಗಡಿ ಮಾಲಕಿ ಅನುಮಾನಾಸ್ಪದ ಸಾವು..!

- Advertisement -

Hubballi News : ಅವಳು  ಬಟ್ಟೆ ಅಂಗಡಿ ಮಾಲಕಿ…ಗಂಡ ಸರ್ಕಾರಿ ಅಧಿಕಾರಿ…ಮದುವೆ ಆಗಿ 10 ವರ್ಷ ಕಳದಿವೆ. ಆ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ..ಆದ್ರೆ ಅವರಿಬ್ಬರ ಜೀವನ ಕಳೆದ ಕೆಲ ವರ್ಷಗಳಿಂದ ಅಷ್ಟಕ್ಕಷ್ಟೆ.ಸರ್ಕಾರಿ ಅಧಿಕಾರಿಯಾಗಿರೋ ಗಂಡನನ್ನ ಬಿಟ್ಟು ತಾಯಿ ಮನೆಯಲ್ಲಿದ್ಲು.ಮೂರು ವರ್ಷದಿಂದ ಗಂಡನ ಮನೆ ಬಿಟ್ಟಿದ್ದ ಅವಳು ಇದೀಗ ಸಾವನ್ನಪ್ಪಿದ್ದಾಳೆ.

ಬಟ್ಟೆ ಅಂಗಡಿಯಲ್ಲಿಯೇ ಅವಳು ಸಾವನ್ನಪ್ಪಿದ್ದರಿಂದ ಹಲವು ಅನುಮಾನ ಹುಟ್ಟಿಕೊಂಡಿವೆ.ಇದು ಆತ್ಮಹತ್ಯೆ ಅಲ್ಲ,ಕೊಲೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ..ಸರ್ಕಾರಿ ಅಧಿಕಾರಿಯಾಗಿರೋ ಗಂಡನ ವಿರುದ್ದವೇ ಇದೀಗ ಬಟ್ಟೆ ಅಂಗಡಿ ಮಾಲಕೀಯ‌ ಕುಟುಂಬಸ್ಥರ ಆರೋಪ.ಏನಿದು ಅನುಮಾನದ ಸಾವು ಅಂತೀರಾ ಈ ಸ್ಟೋರಿ ನೋಡಿ..

ಒಂದು ಕಡೆ ಬಟ್ಟೆ ಅಂಗಡಿಯಲ್ಲಿ ಸಾವನ್ನಪ್ಪಿರೋ ಮಹಿಳೆ. ಇನ್ನೊಂದು ಕಡೆ ಕಮೀಷನರ್ ಕಚೇರಿ ಮುಂದೆ ಕುಟುಂಬಸ್ಥರ ಆಗ್ರಹ.ಬಟ್ಟೆ ಅಂಗಡಿಯಲ್ಲಿ ಪೊಲೀಸರ ಪರಿಶೀಲನೆ. ಎಸ್ ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.ಹುಬ್ಬಳ್ಳಿಯ ನವನಗರದಲ್ಲಿರೋ ಐಶ್ವರ್ಯ ಬಟ್ಟೆ ಅಂಗಡಿಯಲ್ಲಿ ಅಂಗಡಿ ಮಾಲಕಿ ಸಾವನ್ನಪ್ಪಿದ್ದಾಳೆ.36 ವರ್ಷದ ಪ್ರೀಯಾ ಬೊಂಗಲೆ ಸಾವನ್ನಪ್ಪಿದ್ದಾಳೆ. ನೇಣು ಬಿಗಿದು ಬಟ್ಟೆ ಅಂಗಡಿ ಮಾಲಕಿ ಸಾವನ್ನಪ್ಪಿದ್ರು.ಆದ್ರೆ ಇದೀಗ ಈ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಇದು ಆತ್ಮಹತ್ಯೆ ಅಲ್ಲ ಕೊಲೆ ಎನ್ನಲಾಗಿದೆ.ಎಸ್ ಬಟ್ಟೆ ಅಂಗಡಿ ಮಾಲಕೀಯ ಸಹೋದರ ರಾಹುಲ್ ನಮ್ಮ ಅಕ್ಕ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆಯಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಗೆ ದೂರು ಕೊಟ್ಟಿದ್ದಾರೆ. ಅಸಲಿಗೆ ಇಲ್ಲಿ ಸಾವನ್ನಪ್ಪಿರೋ ಬಟ್ಟೆ ಅಂಗಡಿ ಮಾಲಕೀಯ ಸಹೋದರ ಆರೋಪ ಮಾಡ್ತಿರೋದು ಬೇರೆ ಯಾರ ಮೇಲೂ ಅಲ್ಲ..ಇಲ್ಲಿ ಅನುಮಾನವಾಗಿ ಸಾವನ್ನಪ್ಪಿದ ಪ್ರೀಯಾ ಬೊಂಗಾಳೆ‌ ಪತಿ ವಿನೋದ ಬೊಂಗಾಳೆ ಸರ್ಕಾರಿ ಅಧಿಕಾರಿ.ಹೌದು ಕಂದಾಯ ಇಲಾಖೆಯಲ್ಲಿ ದ್ವೀತಿಯ ದರ್ಜೆ ಸಹಾಯಕನಾಗಿ ಕೆಲಸ ಮಾಡ್ತಿರೋ ವಿನೋದ್ ಕೊಲೆ ಮಾಡಿದ್ದಾನೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಹೌದು‌ ಕಳೆದ ಮೂರು ವರ್ಷಗಳಿಂದ ಪ್ರೀಯಾ ಹಾಗೂ ವಿನೋದ್ ಬೇರೆ ಬೇರೆ ವಾಸ ಮಾಡ್ತಿದ್ರು

ಆದ್ರೆ ಸರ್ಕಾರಿ ಅಧಿಕಾರಿಯಾಗಿರೋ ವಿನೋದ್ ಹೆಂಡತಿ ಮೇಲೆ ಅನುಮಾನ‌ ಪಡ್ತಿದ್ದನಂತೆ. ಅದಕ್ಕಿಂತ ಹೆಚ್ಚಾಗಿ ವಿನೋದ್ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ಕೊಡ್ತಿದ್ರು ಬೇರೆ ಬೇರೆ ಇದ್ರೂ ವರದಕ್ಷಿಣೆಗಾಗಿ ಪೀಡಿಸುತ್ತಿದ್ದಂತೆ. ಅವರೆಲ್ಲ ಸೇರಿ ಕೊಲೆ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.

ಇನ್ನು ಪ್ರೀಯಾ ಬೊಂಗಾಳೆ ಗಂಡ ವಿನೋದನನ್ನು ಬಿಟ್ಟು ಮೂರು ವರ್ಷ ಆಗಿತ್ತು. ವಿನೋದ ಸರ್ಕಾರಿ ಅಧಿಕಾರಿಯಾಗಿದ್ರು ಮನೆಯಲ್ಲಿ ನಿತ್ಯ ಕಿರುಕುಳ ಕೋಡ್ತಿದ್ದನಂತೆ. ಹೆಂಡತಿ ಮೇಲೆ ನಿತ್ಯ ಅನುಮಾನ.ಇದೇ ಕಾರಣಕ್ಕೆ ಪ್ರೀಯಾ ಗಂಡನನ್ನ ಬಿಟ್ಟು ತವರು ಮನೆ ಸೇರಿದ್ಲು. ತಾಯಿನೇ ಸಾಲ ಸೋಲ ಮಾಡಿ ಬಟ್ಟೆ ಅಂಗಡಿ ಮಾಡಿಕೊಟ್ಟಿದ್ರು. ಆದ್ರೆ ಅದೇ  ಬಟ್ಟೆ ಅಂಗಡಿಯಲ್ಲಿ ಪ್ರೀಯಾ  ಸಾವನ್ನಪ್ಪಿದ್ದಾಳೆ.ಈ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಯಾಕಂದ್ರೆ ಪ್ರೀಯಾ ನಡೆಸೋ ಬಟ್ಟೆ ಅಂಗಡಿಯಲ್ಲಿ ಸಾರಿ ಮಾರಾಟ ಮಾಡಲ್ಲ.ಅದಹೇಗೆ ಸಾರಿಯಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ತಾರೆ ಅನ್ನೋ ಅನುಮಾನ ಮೂಡಿದೆ. ಅಮೇಲೆ ಕುತ್ತಿಗೆಯಲ್ಲೂ ಯಾವದೇ ಕಲೆಯಿಲ್ಲ.ಹೀಗಾಗಿ ಇದು ಆತ್ಮಹತ್ಯೆ ಅಲ್ಲ,ಕೊಲೆ ಅನ್ನೋದು ಕುಟುಂಬಸ್ಥರ ಆರೋಪ. ಯಾವಾಗ ಪ್ರೀಯಾ ಬೊಂಗಾಲೆ ಆತ್ಮಹತ್ಯೆ ಅನುಮಾನಸ್ಪದವಾಗಿ ಸಾವನ್ನಪ್ಪಿದರೋ ಅಲ್ಲಿಂದ ಗಂಡ ನಾಪತ್ತೆಯಾಗಿದ್ದಾನೆ.ಇದು ಕೂಡಾ ಗಂಡನ ಮೇಲೆ ಅನುಮಾನಕ್ಕೆ ಕಾರಣವಾಗಿದೆ.ಹೀಗಾಗಿ ಕುಟುಂಬಸ್ಥರು ನಮಗೆ ನ್ಯಾಯ ಬೇಕೆಂದು ಕಮೀಷನರ್ ಕಚೇರಿ ಮೆಟ್ಟಿಲೇರಿದ್ದಾರೆ. ಇನ್ನು ಈ ಬಗ್ಗೆ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಹೇಳೋದು ಹೀಗೆ..

ಒಟ್ಟಿನಲ್ಲಿ ಗಂಡನ ಅನುಮಾನಕ್ಕೆ ಹೆಂಡತಿ ಬಲೆಯಾಗಿದ್ದಾಳೆ.ಪ್ರೀಯಾ ಸಾವು ಹಲವು ಅನುಮಾನ ಹುಟ್ಟುಹಾಕಿದೆ. ಬಟ್ಟೆ ಅಂಗಡಿಯಲ್ಲಿ ಸೀರೆ ಇರದೆ ಹೋದ್ರು ,ಸೀರೆ ಎಲ್ಲಿಂದ ಬಂತು,ನಿಜವಾಗಿಯೂ ಇದು ಆತ್ಮಹತ್ಯೆಯಾ ಕೊಲೆಯಾ ಅನ್ನೋದು ಪೊಲೀಸರ ತನಿಖೆಯ ನಂತರವೇ ಬಯಲಾಗಲಿದೆ…

-ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ.

Students : ಕಾರ್ಕಳ : ಆ. 12. ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ

Murugesh : ಸೇವಾ ನಿವೃತ್ತಿ ಹೊಂದಿದ ಪ್ರೋ. ಮುರುಗೇಶಿ .ಟಿ ಯವರಿಗೆ ಸನ್ಮಾನ

Siddaramaiah: ಎಷ್ಟೇ ಕಷ್ಟವಾದರೂ ಸಂವಿಧಾನವನ್ನು ಉಳಿಸಿಕೊಳ್ಳುವ ಅಗತ್ಯವಿದೆ.

- Advertisement -

Latest Posts

Don't Miss