- Advertisement -
ಹುಬ್ಬಳ್ಳಿ; ನಗರದಲ್ಲಿ ಆಸ್ತಿಗಳ ಮಾರ್ಗಸೂಚಿ ವಿಚಾರವಾಗಿ ಪ್ರವಾಸಿ ಮಂದಿರದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಆದರೆ ಸಭೆಗೆ ತಡವಾಗಿ ಬಂದ ಅಧಿಕಾರಿಗಳನ್ನು ಶಾಸಕ ಮಹೇಶ್ ಟೆಂಗಿನಕಾಯಿ ತರಾಟೆಗೆ ತೆಗೆದುಕೊಂಡರು.
ದೇಶಪಾಂಡೆ ನಗರದ ಪ್ರವಾಸಿ ಮಂದಿರದಲ್ಲಿ ಆಸ್ತಿಗಳ ಮಾರ್ಗ ಸೂಚಿ ದರ ಹೆಚ್ಚಳ ಕುರಿತು ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ನಡೆದ ಸಭೆಗೆ ನಾಗರಾಜ ಹಾಗೂ ಕೋಟಿ ಎಂಬ ಉಪ ನೋಂದಾಣಿ ಅಧಿಕಾರಿ ತಡವಾಗಿ ತಡವಾಗಿ ಬಂದರು
ಇದರಿಂದ ಕೋಪಗೊಂಡ ಶಾಸಕ ಮಹೇಶ್ ಟೆಂಗಿನಕಾಯಿ ಅವರು ನಾವು ಹಾಗೂ ಮಾಧ್ಯಮದವರು ಕೆಲಸವಿಲ್ಲದೆ ಖಾಲಿ ಇದ್ದೇವಾ ಸಭೆಗೆ ಈ ತರಹ ತಡವಾಗಿ ಬರುವ ನೀವು ಕಚೇರಿಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
Builders: ಪ್ಲಾಟ್ ಮಾರಾಟ ಮಾಡಿದ್ದರೂ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್..!
- Advertisement -