Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತನಾಡಿರುವ ಶಾಸಕ ಮಹೇಶ್ ಟೆಂಗಿನಕಾಯಿ, ಸಂತೋಷ್ ಲಾಡ್ ಅವರನ್ನು ನೀವೇ ವಿರೋಧ ಪಕ್ಷದ ನಾಯಕರಾಗಿ ಎಂದಿದ್ದಾರೆ.
ಅಂಬೇಡ್ಕರ್ ಸಂವಿಧಾನವನ್ನ ನಾವು ಒಪ್ಪಿಕೊಂಡಿದ್ದೇವೆ, ಇಲ್ಲಾ ಅಂದಿದ್ರೆ ಶರೀಯತ್ ಲಾ ವನ್ನ ನೀವೇ ಇಂಪ್ಲಿಮೆಂಟ್ ಮಾಡೇ ಬಿಡ್ತಿದ್ರಿ. ರಾಹುಲ್ ಗಾಂಧೀ ಕೆಲಸ ಸಚಿವ ಸಂತೋಷ ಲಾಡ್ ಗೆ ತೃಪ್ತಿ ಆಗ್ತಿಲ್ಲ ಅನ್ಸುತ್ತೆ. ರಾಹುಲ್ ಗಾಂಧೀ ಬದಲು ನೀವೇ ವಿರೋಧ ಪಕ್ಷದ ನಾಯಕರಾಗಿ. ನಿಮ್ಮಲ್ಲಿ ಮಾತನಾಡುವ ಜಾಣ್ಮೆ ಇದೆ ನೀವೇ ಆಗಿ ಬಿಡಿ ಎಂದು ಮಹೇಶ್ ಹೇಳಿದ್ದಾರೆ.
ನಿನ್ನೆ ಸಂತೋಷ ಲಾಡ್ ಅವರು ನರೇಂದ್ರ ಮೋದಿ ರಾಜೀನಾಮೆಗೆ ಆಗ್ರಹ ಮಾಡಿದ್ದಾರೆ. ಕಾಂಗ್ರೆಸ್ ವಕ್ತಾರ ದೇಶದ ಸೈನ್ಯದ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಇಂತಹ ಘಟನೆಗೆ ಕಾರಣ ಯಾರು ಅಂತ ಲಾಡ್ ಅವರು ಅರ್ಥ ಮಾಡಿಕೊಳ್ಳಬೇಕು. ಎಲ್ಲದಕ್ಕೂ ಮೂಲ ಕಾರಣ ಕಾಂಗ್ರೆಸ್. ಆರ್ಟಿಕಲ್ 370 ತೆಗೆದ ಮೇಲೆ ಕಾಶ್ಮೀರ ಅದ್ಬುತ ಬೆಳವಣಿಗೆ ಆಗ್ತಾ ಇದೆ. ಪ್ರವಾಸಿಗರು ಹೋಗ್ತಾ ಇದ್ದಾರೆ. ಇದನ್ನೆಲ್ಲಾ ಇಸ್ಲಾಮಿಕ್ ಭಯೋತ್ಪಾದನೆಗೆ ಸಹಿಸೋಕೆ ಆಗ್ತಿಲ್ಲ. ಬಿಜೆಪಿ ಅವರು ಹಿಂದೂ ಮುಸ್ಲಿಂ ಅಂತಾರೆ ಅಂತ ಹೇಳ್ತಾರೆ. ರಾಹುಲ್ ಗಾಂಧೀ ಮುತ್ತಜ್ಜರು ಮಾಡಿದ ತಪ್ಪಿಗೆ ಇದೆಲ್ಲಾ ಆಗ್ತಿದೆ. ಯಾವ ನೈತಿಕತೆ ಇಂದ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಕೇಳ್ತಾ ಇದ್ದೀರಿ? ಎಂದು ಮಹೇಶ್ ಪ್ರಶ್ನಿಸಿದ್ದಾರೆ.
2014ಕ್ಕಿಂತ ಮುಂಚೆ ಟೆರರಿಸ್ಟ್ ಅಟ್ಯಾಕ್ ಆದ್ರೆ ಬೇರೆ ದೇಶದ ಮುಂದೆ ನಿಲ್ಲೋ ಪರಿಸ್ಥಿತಿ ಇತ್ತು. ಈಗ ಬೇರೆ ದೇಶಗಳು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಈ ಮುಂಚೆ ದೇಶದಲ್ಲಿ ಬರಿ ಗಲಭೆ ಆಗ್ತಿತ್ತು. ಮಕ್ಕಳ ಕೈಯಲ್ಲಿ ಕಲ್ಲು ಕೊಟ್ಟಿದ್ಯಾರು? ಫಂಡ್ ಮಾಡ್ತಿದ್ದವರು ಯಾರು ಅಂತ ಎಲ್ಲರಿಗೂ ಗೊತ್ತಿದೆ. ಯುಪಿಎ 2004 ರಿಂದ 2014 ರ ವರೆಗೆ ಎಷ್ಟು ಗಲಭೆ ಆಗಿವೆ. ಹತ್ತಾರು ಬಾಂಬ್ ಬ್ಲಾಸ್ಟ್, ಸಾವಿರಾರು ಜನ ಮೃತ ಪಟ್ಟಿದ್ದಾರೆ. ಲಾಡ್ ಅವರೇ ನಾನು ಅಂಕಿ ಅಂಶ ಬಿಡುಗಡೆ ಮಾಡ್ತಾ ಇದ್ದೇನೆ. 2014 ರಿಂದ 2024 ರ ವರೆಗೆ ಏನು ಆಗಿದೆ ನೀವು ಬಿಡುಗಡೆ ಮಾಡಿ.
ಭಯೋತ್ಪಾದನೆ ಕಿತ್ತು ಹಾಕುವ ಕೆಲಸ ನಾವೆಲ್ಲಾ ಒಗ್ಗೂಡಿ ಮಾಡಬೇಕು. ಘಟನೆ ಆದ ಕೂಡಲೇ ಅಮಿತ್ ಶಾ ಸ್ಥಳಕ್ಕೆ ಹೋದ್ರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರವಾಸ ರದ್ದು ಮಾಡಿದ್ರು. ಎಲ್ಲಾ ಮಾಧ್ಯಮಗಳು ಮೋದಿ ಪರವಾಗಿ ಮಾತನಾಡ್ತೀರಿ ಅಂತ ಹೇಳ್ತಾರೆ. ಈ ರೀತಿ ಮಾಧ್ಯಮಗಳಿಗೆ ಸವಾಲ್ ಮಾಡ್ತೀರಿ.
ಮಾಧ್ಯಮಗಳು ದೇಶದ ಪರವಾಗಿ ಮಾತಾಡ್ತಾರೆ. ಹಳೇ ಹುಬ್ಬಳ್ಳಿ ಗಲಭೆಯಲ್ಲಿ 151 ಜನರನ್ನ ಒಳಗೆ ಹಾಕಲಾಯಿತು. ಅವರ್ಯಾರು ಅಮಾಯಕರಲ್ಲ, ಅವರನ್ನ ಬಿಡಿಸೋಕೆ ಹೋದ್ರು. ಹಿಂದೂಗಳ ಭಾವನೆಗೆ ನಿಮ್ಮ ಬಳಿ ಬೆಲೆ ಇಲ್ಲಾ. ಕೆಜೆ ಹಳ್ಳಿ-ಡಿಜೆ ಹಳ್ಳಿಯಲ್ಲಿ ಬೆಂಕಿ ಹಚ್ಚೋಕೆ ಹೋದವರ್ಯಾರು? ಇವೆಲ್ಲ ತುಷ್ಟಿಕರಣದಿಂದ ನಡಿತಾ ಇದೆ ಎಂದು ಮಹೇಶ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪಾಕಿಸ್ತಾನ್ ಕ್ಕೆ ಬುದ್ದಿ ಕಲಿಸುವ ಕೆಲಸ ಮಾಡ್ತಾ ಇದೆ. ಸೈನ್ಯದ ಬಗ್ಗೆ ಏನು ತಿಳಿದುಕೊಂಡಿದ್ದೀರಿ? ನಾವು ನೆಮ್ಮದಿಯಿಂದ ಇದ್ದೇವೆ ಅಂದ್ರೆ ಅದಕ್ಕೆ ಸೈನಿಕರು ಕಾರಣ, ಮರಿ ಬೇಡಿ. ನಾವು ಸಂಪೂರ್ಣವಾಗಿ ಸಮಸ್ಯೆ ಬಗೆ ಹರಿಸುವ ಕೆಲಸ ಮಾಡಿದ್ದೇವೆ ಅಂತ ಹೇಳ್ತಿಲ್ಲ, ಕಂಟ್ರೋಲ್ ಗೆ ತರ್ತಾ ಇದ್ದೇವೆ. ಕಾಂಗ್ರೆಸ್ ನಲ್ಲಿ ದ್ವಂದ್ವ ಹೇಳಿಕೆ ನೀಡ್ತಾ ಇದ್ದಾರೆ. ನರೇಂದ್ರ ಮೋದಿ ಕೇವಲ ಭಾರತದಲ್ಲಿನ ಟೆರರಿಸಂ ಬಗ್ಗೆ ಅಲ್ಲಾ, ವಿಶ್ವದ ಟೆರರಿಸಮ್ ಬಗ್ಗೆ ಮಾತನಾಡ್ತಾ ಇದ್ದಾರೆ. ಬಿಹಾರ ರಾಜಕಾರಣಕ್ಕೂ ಈ ಘಟನೆಗೂ ಸಂಬಂಧ ಇಲ್ಲಾ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.