Hubli News: ವಾಣಿಜ್ಯನಗರಿ ಈಗ ಕೇಸರಿನಗರ: ಎಲ್ಲೆಡೆಯೂ ರಾರಾಜಿಸುತ್ತಿವೆ ಕೇಸರಿ ಭಾವುಟ..!

Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗಣಪತಿ ಉತ್ಸವದ ಸಂಭ್ರಮ ಮನೆ ಮಾಡಿದ್ದು, ವಾಣಿಜ್ಯನಗರಿ ಈಗ ಕೇಸರಿಯ ನಗರವಾಗಿದೆ. ಎಲ್ಲೆಡೆಯೂ ಕಣ್ಣು ಹಾಯಿಸಿದಷ್ಟು ಕೇಸರ ಧ್ವಜಗಳು ರಾರಾಜಿಸುತ್ತಿವೆ.

ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಟಾಪನೆಗೊಂಡಿರುವ ಗಣಪತಿ ವಿಸರ್ಜನೆಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಸಂಭ್ರಮ ಮನೆ ಮಾಡಿದೆ. ವಾಣಿಜ್ಯನಗರಿಯ ಹೃದಯ ಭಾಗ ಸಂಪೂರ್ಣ ಕೇಸರಿ ಬಾವುಟದಿಂದ ಕಂಗೊಳಿಸುತ್ತಿರುವುದು ನಿಜಕ್ಕೂ ಕಣ್ಮನ ಸೆಳೆಯುತ್ತಿದೆ.

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮೂರು ದಿನಗಳ ಕಾಲ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವಕಾಶ ನೀಡಿದ್ದು, ಮೂರು ದಿನಗಳ ನಂತರ ಭರ್ಜರಿಯಾಗಿ ವಿನಾಯಕ ವಿಸರ್ಜನೆಗೊಳ್ಳಲಿದ್ದಾನೆ. ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್ ತಂಡ ನೇತೃತ್ವದಲ್ಲಿ ಪೊಲೀಸ್ ಕಣ್ಗಾವಲು ಇರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಒಂದು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

About The Author