Sunday, June 1, 2025

Latest Posts

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನ ಸಂತೋಷವಾಗಿರಲು ಹೀಗೆ ಮಾಡಿ …!

- Advertisement -

Devotional:

ಪತಿ ಪತ್ನಿಯರು ಎಷ್ಟೆ ಅನ್ಯೋನ್ಯವಾಗಿದ್ದರೂ ಅವರಲ್ಲಿ ಚಿಕ್ಕ ಚಿಕ್ಕ ಜಗಳಗಳು ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಜಗಳವಾಡದೇ ಸಂಬಂಧ ಗಟ್ಟಿ ಕೂಡ ಆಗುವುದಿಲ್ಲ. ಹಾಗಂತ ಜಗಳ ಅತಿಯಾದರೆ ,ಅಲ್ಲಿ ಪ್ರೀತಿಗೆ ಜಾಗವಿರುವುದಿಲ್ಲ, ದ್ವೇಷಕ್ಕೆ ಕಾರಣವಾಗುತ್ತದೆ. ಆದಕಾರಣ ಜಗಳಗಳನ್ನು ಕಡಿಮೆಮಾಡಿ, ಗಂಡ- ಹೆಂಡತಿ ನಡುವಿನ ಸಂಬಂಧ ಅನ್ಯೋನ್ಯವಾಗಿರಲು ಜ್ಯೋತಿಷ್ಯದಲ್ಲಿ ಹೇಳಿರುವ ಈ ಉಪಾಯಗಳನ್ನು ಪಾಲಿಸುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಪತಿ-ಪತ್ನಿಯರ ನಡುವೆ ಜಗಳವಾಗುವುದಿಲ್ಲ ಮತ್ತು ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ .

ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ನೀವೂ ಶಿವ ಮತ್ತು ಪಾರ್ವತಿಯ ಆರಾಧನೆ ನಿಯಮಿತವಾಗಿ ಮಾಡಬೇಕು. ಪ್ರತಿದಿನ ತುಪ್ಪದ ದೀಪವನ್ನು ಶಿವ ಪಾರ್ವತಿಯರ ಮುಂದೆ ಬೆಳಗಿಸಬೇಕು ಹಾಗೂ ಶಿವ ಚಾಲೀಸಾವನ್ನು ಪಠಿಸುತ್ತಾ ತಮ್ಮ ಮನಸ್ಸಿನಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬೇಕು.

ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಹೆಚ್ಚಿಸಲು, ಪ್ರತಿ ಶುಕ್ರವಾರದಂದು ದೇವಸ್ಥಾನಕ್ಕೆ ಭೇಟಿ ನೀಡಿ ವಿಷ್ಣು ಮತ್ತು ಲಕ್ಷ್ಮಿದೇವಿ ದರ್ಶನ ಮಾಡಬೇಕು. ಜೊತೆಗೆ ದೇವರಿಗೆ ಗುಲಾಬಿ ಹೂವುಗಳನ್ನು ಅರ್ಪಿಸಬೇಕು, ಇದನ್ನು ನಿಯಮಿತವಾಗಿ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ಮಾಧುರ್ಯ ಮತ್ತು ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ .

ಶಿವಲಿಂಗಕ್ಕೆ ಹಸುವಿನ ಹಾಲಿನ ಅಭಿಷೇಕ ಮಾಡಿಸುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಜಗಳಗಳಿಂದ ಮುಕ್ತಿ ಹೊಂದಬಹುದು ಹಾಗೂ ಶಿವನ ದೇವಾಲಯದಲ್ಲಿ ಶಿವನ ಮಂತ್ರಗಳನ್ನು ಪಠನೆ ಮಾಡುವುದರಿಂದ ಜೊತೆಗೆ ದೀಪದಾನವನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ವಿವಾಹಿತ ಮಹಿಳೆಯರು ಶ್ರಾವಣ ಮಾಸದಲ್ಲಿ ಸಂತೋಷದ ವೈವಾಹಿಕ ಜೀವನಕ್ಕಾಗಿ ಮನೆಯಲ್ಲಿ ಮಂಗಳ ಗೌರಿ ಪೂಜೆಯನ್ನು ಮಾಡಬಹುದು. ವರ್ಷದ ಈ ಪೂಜೆ ಮಾಡುವುದರಿಂದ ದಾಂಪತ್ಯದ ಅಡೆತಡೆಗಳನ್ನು ನಿವಾರಿಸಲು ಈ ಪೂಜೆಯೂ ಸಹಾಯ ಮಾಡುತ್ತದೆ .

ಜಾತಕದಲ್ಲಿ ಗುರುವಿನ ಬಲ ಕಡಿಮೆ ಇದ್ದರೆ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ನಿಮ್ಮ ವೈವಾಹಿಕ ಜೀವನದಲ್ಲಿ ಗೊಂದಲಗಳಿದ್ದರೆ, ಹಳದಿ ದಾರವನ್ನು ಬಲಗೈಗೆ ಕಟ್ಟಿಕೊಳ್ಳಬೇಕು ಹಾಗೂ ವಿಷ್ಣುವಿನ ಮಂತ್ರವನ್ನು ಜಪಿಸಿ, ಓಂ ನಮೋ ಭಗವತೇ ವಾಸುದೇವಾಯ. ಪಠಣವನ್ನು ಏಳು, ಹನ್ನೊಂದು ಅಥವಾ ಇಪ್ಪತ್ತೊಂದು ಬಾರಿ ಪಠಿಸಬೇಕು. ನಂತರ ದೇವಸ್ಥಾನಕ್ಕೆ ಹೋಗಿ ಈ ದಾರವನ್ನು ವಿಷ್ಣುವಿಗೆ ಅರ್ಪಿಸಿದರೆ, ವೈವಾಹಿಕ ಜೀವನ ಸುಖಮಯವಾಗಿರುತ್ತದೆ .

ಚಾಣಕ್ಯನ ಪ್ರಕಾರ ಇಂತಹ ಜನರು ಬಡತನದಲ್ಲಿ ಹುಟ್ಟಿದರೂ ಸಹ ಇವರ ಮೇಲೆ ಲಕ್ಷ್ಮಿಯ ಅಪಾರ ಕೃಪೆ ಇರುತ್ತದೆ..!

ದೈವಾರಾಧನೆಗೆ ಶ್ರೇಷ್ಠವಾದ ಧನುರ್ ಮಾಸ ಶುಭಕಾರ್ಯಗಳಿಗೆ ಶ್ರೇಷ್ಠವಲ್ಲ ಏಕೆ..?

ಕಲ್ಮಷವಿಲ್ಲದ ಭಕ್ತಿ…!

 

- Advertisement -

Latest Posts

Don't Miss