ರಾಯಚೂರು: ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಎಲ್ಲೆಂದರಲ್ಲೆ ಹಂದಿಗಳ ಸರಣಿ ಸಾವು ಶುರುವಾಗಿದೆ. ಕಾರಣವಿಲ್ಲದೆ ದಿನಕ್ಕೆ ನಾಲ್ಕರಿಂದ ಐದು ಹಂದಿಗಳು ರಸ್ತೆಯಲ್ಲಿ ಬಿದ್ದು ಒದ್ದಾಡಿ ಉಸಿರುಗಟ್ಟಿಕೊಂಡು ಕೆಲವೇ ನಿಮಿಷಗಳಲ್ಲಿ ಬಿದ್ದ ಸ್ಥಳದಲ್ಲೇ ಸಾವನ್ನಪ್ಪುತ್ತಿರುವ ಘಟನೆ ನಡೆದಿದೆ. ಇದರಂದ ಹಟ್ಟಿಯ ಜನಕ್ಕೆ ಭಯದ ವಾತಾವರಣ ಶುರುವಾಗಿದೆ.
ರಸ್ತೆಯಲ್ಲಿ ಸತ್ತು ಬಿದ್ದಿರುವ ಹಂದಿಗಳನ್ನು ಎತ್ತಿಕೊಂಡು ಹೋಗಲು ಮಾಹಿತಿ ನೀಡಿದರೂ ಹಂದಿಯ ಮಾಲೀಕರು ಬೇಜವಬ್ದಾರಿತನ ತೋರಿಸುತ್ತಿದ್ದಾರೆ. ವಾರ್ಡ್ ಸದಸ್ಯರು ಸಂಘಟನೆಗಳು, ವಿದ್ಯಾರ್ಥಿಗಳು, ಗ್ರಾಮಸ್ತರು ಪಟ್ಟಣ ಪಂಚಾಯಿತಿಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಒಂದು ವೇಳೆ ಹಂದಿ ಮಾಲೀಕರು ಸತ್ತ ಹಂದಿಗಳನ್ನು ಎಳೆದುಕೊಂಡು ಹೋದರೂ ಬೈಪಾಸ್ ರಸ್ತೆಯಲ್ಲಿ ಬಿಸಾಡುತ್ತಾರೆ. ಇಲ್ಲವೆ ಬೀದಿನಾಯಿಗಳಿಗೆ ಆಹಾರಕ್ಕಾಗಿ ಸತ್ತ ಹಂದಿಗಳನ್ನು ತುಂಡು ಮಾಡಿ ರಸ್ತೆಯಲ್ಲಿ ಹಾಕುತ್ತಾರೆ. ಒಂದು ವೇಳೆ ಇದನ್ನು ತಿಂದ ನಾಯಿಗಳಿಗೆ ಸಾಂಕ್ರಾಮಿಕ ರೋಗ ಹರಡಿ ಊರಿನಲ್ಲಿ ವ್ಯಾಪಿಸಿದರೆ ಜನರ ಪರಿಸ್ಥಿತಿ ಏನಾಗಬೇಡ ಎಂದು ಗ್ರಾಮಸ್ತರು ಭಯಭಿತರಾಗಿದ್ದಾರೆ.
Gruha Laxmi ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
Honors to ministers : ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ನಲ್ಲಿ ನೂತನ ಸಚಿವರು, ಶಾಸಕರಿಗೆ ಸನ್ಮಾನ
Taiwan: ಚೀನಾದ ಬೆದರಿಕೆಗಳಿಗೆ ತನ್ನ ಜನರು ಮಣಿಯುವುದಿಲ್ಲ ಎಂದು ತೈವಾನ್ ಹೇಳಿದೆ