Sunday, September 8, 2024

Latest Posts

ದೇವರಾಜೇಗೌಡನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಸಚಿವ ಚಲುವರಾಯಸ್ವಾಮಿ

- Advertisement -

Political News: ಬೆಂಗಳೂರಿನಲ್ಲಿ ಸಚಿನ ಚೆಲುವರಾಯಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದು, ದೇವರಾಜೇಗೌಡನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಒಬ್ಬ ದೇವರಾಜೇ ಗೌಡನಿಗೆ ಯಾಕೆ ಮಹತ್ವ ಕೊಡ್ತೀರಾ..? ಈ ತರ ವಿಚಾರಗಳನ್ನ ಯಾಕೆ ಪ್ರಚಾರ ಮಾಡ್ತೀರಾ..? ದೇವರಾಜೆ ಗೌಡ ಇನ್ನೂ ಯಾರ ಹೆಸರು ಹೇಳ್ಬೇಕು ಅನ್ನೋ ಗೊಂದಲದಲ್ಲಿದ್ದಾರೆ. ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಹಿಂದೆ ಕುಮಾರಸ್ವಾಮಿ ವಿರುದ್ಧವೂ ಆರೋಪಗಳನ್ನ ಮಾಡ್ತಿದ್ರು. ಇಂತವನ ಬಗ್ಗೆ ಬೆಳಕು ಚೆಲ್ಲೋದು ಎಷ್ಟರ ಮಟ್ಟಿಗೆ ಸರಿ? ಇದು ನಮಗೆ ಸಂಬಂಧವಿಲ್ಲದ ವಿಚಾರ. ತನಿಖೆ ಯಾವ ರೀತಿ ಆಗ್ಬೇಕೋ ಆಗ್ತಿದೆ. ಅಪರಾಧಿಯನ್ನು ಬಿಟ್ಟು ವಿಷಯ ಬೇರೆ ಕಡೆ ಡೈವರ್ಟ್ ಆಗ್ತಿದೆ ಎಂದು ಚಲುವರಾಯಸ್ವಾಮಿ ಆರೋಪಿಸಿದ್ದಾರೆ.

ಹಾಸನದ ಹೆಣ್ಣುಕ್ಕಳನ್ನ ಬೀದಿಗೆ ತಂದವರಿಗೆ ಶಿಕ್ಷೆ ಆಗ್ಬೇಕು. ಪ್ರಜ್ವಲ್ ಇಂತ ಕೃತ್ಯ ನಡೆಸಿರೋದು ಮೊದಲ ತಪ್ಪು. ರೆಕಾರ್ಡ್ ಮಾಡಿದ್ದು 2ನೇ ತಪ್ಪು. Dk ಶಿವಕುಮಾರ್ ನಮ್ ಜೊತೆ ಈ ವಿಷ್ಯಕ್ಕೆ ಮೀಟಿಂಗ್ ಮಾಡಿಲ್ಲ. ದೇವರಾಜೆ ಗೌಡರಿಗೆ ನಮ್ ಬಗ್ಗೆ ಮಾತನಾಡೋ ಹಕ್ಕಿಲ್ಲ. SIT ತನಿಖೆಯನ್ನ ಗಂಭೀರವಾಗಿ ನಡೆಸ್ತಿದೆ. ಕುಟುಂಬದವರೇ ಸಾಧ್ಯವಾದರೆ ಪ್ರಜ್ವಲ್ ನಾ ಕರೆದು ತನಿಖೆಗೆ ಹಾಜರುಪಡಿಸಬೇಕು. ದೇವರಾಜೆ ಗೌಡರ ವಿಡಿಯೋ ನೋಡಿದ ಮೇಲೂ. ಶಿವರಾಮೇ ಗೌಡರ ವಿಚಾರವು ನನಗೆ ಸಂಬಂಧವಿಲ್ಲ. ನನಗೆ ಶಿವರಾಮೇ ಗೌಡ ಮತ್ತು ದೇವರಾಜೇ ಗೌಡ ಇಬ್ಬರ ಜೊತೆಯೂ ಸಂಬಂಧವಿಲ್ಲ. ನನಗೆ MLC ಮಾಡ್ತೀನಿ ಅಂತ ಆಫರ್ ಬಂದಿತ್ತು ಅಂತಿದ್ರು. ಈಗ 100ಕೋಟಿ ಆಫರ್ ಇತ್ತು ಅಂತಿದಾರೆ. ನಾನು ನನ್ನ ಬಗ್ಗೆ ಅಷ್ಟೇ ಕ್ಲಾರಿಟಿ ಕೊಡಬಹುದು. ಉಳಿದವರ ಬಗ್ಗೆ ಸ್ಪಷ್ಟನೆ ಕೊಡೋಕಾಗಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಒಕ್ಕಲಿಗರನ್ನ ಟಾರ್ಗೆಟ್ ಮಾಡ್ತಿದಾರೆ. Dk ಶಿವಕುಮಾರ್, ಕೃಷ್ಣ ಬೈರೇಗೌಡ ಅವರ ನಂತರ ನಾನೇ ಅಲ್ವಾ ಟಾರ್ಗೆಟ್. ಮಳೆ ವಿಚಾರವಾಗಿ ಹೆಚ್ಚಾಗಿ ಚರ್ಚೆ ಮಾಡ್ತಿದಿವಿ. ಮಳೆಗಿಂತ ಇದು ಮುಖ್ಯನಾ..? ನನ್ನ ಹೆಸರು ಹೇಳಿರೋದ್ರಿಂದ ನಾನು ಪ್ರತಿಕ್ರಿಯೆ ನೀಡ್ತಿದಿನಿ ಅಷ್ಟೇ. ಬೆಳಿಗ್ಗೆ ಎದ್ದು ಪೆನ್ ಡ್ರೈವ್ ವಿಚಾರ ಚರ್ಚೆ ಮಾಡೋದಲ್ಲ. ಪ್ರಜ್ವಲ್ ನಾ ಆದಷ್ಟು ಬೇಗ ಕರೆಸಲಿ. ಕುಮಾರಸ್ವಾಮಿ ರೇವಣ್ಣ ಪ್ರಜ್ವಲ್ ಎಲ್ಲಾ ಒಂದೇ ಸಂಬಂಧ ಅಲ್ವಾ. ಕುಮಾರಸ್ವಾಮಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ದೇವೇಗೌಡರಿಗೆ ಈ ವಯಸ್ಸಲ್ಲಿ ಬಹಳ ನೋವಾಗಿದೆ,. ಅವರು ಈ ರಾಜ್ಯದ ಆಸ್ತಿ ಅವರ ವಿಷಯಕ್ಕೆ ನಮಗೂ ನೋವಾಗಿದೆ. ಕುಮಾರಸ್ವಾಮಿಗೆ ಸಹಾಯ ಮಾಡಿದವರಿಗೆ ಧನ್ಯವಾದ ಹೇಳೋ ಗುಣ ಇಲ್ಲ. ನಾನ್ ಹೇಳಿದ್ನ ನಿಮಗೆ ಸಹಾಯ ಮಾಡೋಕೆ ಅಂತ ಕೇಳ್ತಾರೆ. Dk ಶಿವಕುಮಾರ್ ಕುಮಾರಸ್ವಾಮಿಯವರಿಗೆ ಸಹಾಯ ಮಾಡಿದ್ದಿದೆ.

ದೇವೇಗೌಡ ಹೇಳಿರೋದು ಅಕ್ಷರಶ ಸತ್ಯ. ಪ್ರಜ್ವಲ್ ಅವರ ಕುಟುಂಬದ ಸಂಪರ್ಕದಲ್ಲಿ ಇರ್ತಾರೆ. ಹಳೆ ವಿಡಿಯೋ ಯಾವುದು ಹೊಸ ವಿಡಿಯೋ ಯಾವುದು ಗೊತ್ತಾಗಲ್ವಾ..? ಇದಕ್ಕೆಲ್ಲ ಪ್ರಜ್ವಲ್, ಕಾರ್ತಿಕ್ ಮತ್ತು ದೇವರಾಜೆ ಗೌಡ ಮಾಸ್ಟರ್ ಪ್ಲಾನ್ ಅಲ್ವಾ..? ನಾನು ಗೃಹ ಸಚಿವನಲ್ಲ ಮುಖ್ಯಮಂತ್ರಿ ಅಲ್ಲ ಉಪಮುಖ್ಯಮಂತ್ರಿಯೂ ಅಲ್ಲ. ಚುನಾವಣೆ ಗೂ ಮುಂಚಿತವಾಗಿ ಊಟಕ್ಕೆ ಹೋಗಿದ್ದೇನೆ ಆಮೇಲೆ ಹೋಗಿಲ್ಲ. ಕಳೆದ ವರ್ಷ ಹೋಗಿದ್ದೆ ಆಮೇಲ್ ಹೋಗಿಲ್ಲ. ಈ ವಿಚಾರವಾಗಿ ಗೋಪಾಲಸ್ವಾಮಿ ಅವರಿಗೂ ಸಂಬಂಧವಿಲ್ಲ. ನಾವು 3ಜನ ಇದೀವಿ ಅಂತ ಗೊತ್ತಾದ್ರೆ ಇದನ್ನ ಪ್ರೂವ್ ಮಾಡ್ಬಿಟ್ರೆ ನಾನು ಕ್ಷಮೆ ಕೇಳ್ತೀನಿ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

ನಾನು ರಾಜ್ಯದಲ್ಲಿ ಕಾಂಗ್ರೆಸ್ ಲೀಡರ್ ಅಂದ ಮಾತ್ರಕ್ಕೆ ಎಲ್ಲಾ ವಿಚಾರಕ್ಕೂ ಮೂಗುತೂರಿಸಲ್ಲ. ಕಾಂಗ್ರೆಸ್ ಈ ಪೆನ್ಡ್ರೈವ್ ಯಿಂದ ಅನುಕೂಲ ಆಗುತ್ತೆ ಅಂತ ಯಾವತ್ತೂ ಅಂದುಕೊಂಡಿಲ್ಲ. ಆ ರೀತಿ ಅನುಕೂಲ ಈಗಲೂ ಅಗಿಲ್ಲ. ಇಷ್ಟು ದಿನ ದೇವರಾಜೇಗೌಡ ಪೆನ್ಡ್ರೈವ್ ಇಟ್ಕೊಂಡ್ ಆಟ ಆಡ್ತಿದ್ರು. ಇಂತ ವಿಚಾರಕ್ಕೆ ತಲೆ ಕೆಡಿಸ್ಕೊಳೋ ಅಗತ್ಯತೆ ಇಲ್ಲ. ದೇವೇಗೌಡರಿಗೆ ನಾವು ಅತ್ಯಂತ ಗೌರವವಾಗಿ ನಡೆದುಕೊಳ್ತಿದ್ದೇವೆ. Dk ಶಿವಕುಮಾರ್ – ಕುಮಾರಸ್ವಾಮಿ ಅವರ ಮಧ್ಯೆ ಏನಾದ್ರು ಇದ್ರೆ ಅಸೆಂಬ್ಲಿಗೆ ಬಂದು ಚರ್ಚೆ ಮಾಡ್ಲಿ.

ಹೀಗೆ ಬೀದೀಲಿ ಚರ್ಚೆ ಮಾಡೋದಲ್ಲ. ಬೇರೆ ತರ ಇದ್ರೆ ಫೈಟ್ ಮಾಡ್ಲಿ ನಾವು ಮಾಡ್ತೀವಿ. ಕುಮಾರಸ್ವಾಮಿ ರೇವಣ್ಣಈ ಆರೋಪ ಒಪ್ಪಿಕೊಂಡಿದ್ದಾರಲ್ವಾ.. ಅವರೇ ಪ್ರಜ್ವಲ್ ಕರೆಸಿಬಿಟ್ರೆ ಸಾಕು. Dk ಶಿವಕುಮಾರ್ ಅವರನ್ನ ಪೆನ್ಡ್ರೈವ್ ವಿಚಾರಕ್ಕೆ ಯಾಕೆ ಎಳಿತೀರಾ?. ಈ ಪೆನ್ಡ್ರೈವ್ ವಿಚಾರವನ್ನ ಇಬ್ರೂ ಕೈ ಬಿಟ್ರೆ ಒಳ್ಳೆದು. ಹೌದು ಕುಮಾರಸ್ವಾಮಿ ನಮ್ಮ ಸ್ನೇಹಿತರೇ. ರಾಜಕೀಯವಾಗಿ ಪರವಿರೋಧ ಅಷ್ಟೇ ಶತ್ರು ಅಲ್ಲ. ಕುಮಾರಸ್ವಾಮಿಯವರನ್ನ ನಾನ್ ಯಾವತ್ತೂ ವೈರಿ ಅಂತ ಹೇಳಲ್ಲ. ಚುನಾವಣೆ ಬಳಿಕ ಪಕ್ಷ ಸೇರ್ಪಡೆ ಬಗ್ಗೆ ಗೊತ್ತಾಗುತ್ತೆ. 15 ಸೀಟ್ ವರೆಗೆ ನಾವು ಗೆಲ್ಲೋ ಸಾಧ್ಯತೆ ಇದೆ. NDA 270ಮುಟ್ಟಲ್ಲ 250 ಅಷ್ಟೇ ಬರಬಹುದು. 136 ಜನ ಇರೋ ಸರ್ಕಾರ ಬೀಳಿಸ್ತೀವಿ ಅನ್ನೋದು ಕೂಡ ದೊಡ್ಡ ಅಪರಾಧ. ಯಾರು ಕೂಡ ಪಕ್ಷಕ್ಕೆ ಬರಬೇಕು ಅನ್ನೋ ಡಿಮ್ಯಾಂಡ್ ಇಲ್ಲ. ಅವರೇ ಬರಬೇಕು ಅಂದ್ರೆ ಬರಲಿ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಮಳೆ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಈ ಬಾರಿ ಹೆಚ್ಚು ಮಳೆ ಆಗಬಹುದು ಕಡಿಮೆ ಅಂತು ಆಗಲ್ಲ. ಬಿತ್ತನೆ ಬೀಜ ರಸಗೊಬ್ಬರ ಸರಿಯಾಗಿ ಪೂರೈಕೆ ಆಗುತ್ತೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಅಹಿತಕರ ಘಟನೆಗಳು ನಡೆದಾಗ ತಕ್ಷಣಕ್ಕೆ ಕಡಿವಾಣ ಹಾಕೋದು ಪೋಲಿಸರ ಕರ್ತವ್ಯ: ಸಚಿವ ಸಂತೋಷ್ ಲಾಡ್

ಶಾಸಕ ಪ್ರಸಾದ್ ಅಬ್ಬಯ್ಯ ಫೋಟೋ ಪೋಸ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ

ಹುಬ್ಬಳ್ಳಿ-ಧಾರವಾಡದಲ್ಲಿ ಪೊಲೀಸರು ಅಲರ್ಟ್: ಮಹಿಳೆಯರ ರಕ್ಷಣೆಗೆ ಕಾರ್ಯಾಚರಣೆಗಿಳಿಯಲಿದೆ ಚೆನ್ನಮ್ಮ ಪಡೆ

- Advertisement -

Latest Posts

Don't Miss