Karkala News : ಇತರರ ಹಕ್ಕಿಗೆ ಧಕ್ಕೆ ಬಾರದಂತೆ ನಮ್ಮ ಹಕ್ಕನ್ನು ಚಲಾಯಿಸುವುದೇ ಸಾಮಾಜಿಕ ಸ್ವಾತಂತ. ನಮ್ಮೊಳಗಿನ ಭೇದ ಭಾವವನ್ನು ಮರೆತು ಏಕತೆಯನ್ನು ಸಾಧಿಸುವ ರಾಷ್ಟ್ರೀಯತೆಯ ಚಿಂತನೆ ನಮ್ಮದಾಗಬೇಕು ಎಂದು ಕಾರ್ಕಳ ತಹಶಿಲ್ದಾರ್ ಅನಂತಶಂಕರ ಬಿ.ಹೇಳಿದರು.
ಕಾರ್ಕಳ ಗಾಂಧೀ ಮೈದಾನದಲ್ಲಿ ನಡೆದ 77ನೇ ಸ್ವಾತಂತ್ರ್ಯದಿನಾಚರಣೆಯಲ್ಲಿ ಧ್ವಜಾರೋಹಣಗೈದು ಸಂದೇಶ ನೀಡಿ ಮಾತನಾಡಿದರು.
ವಿಶ್ವದಲ್ಲಿ ಅತೀ ದೊಡ್ಡ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದ್ದೇವೆ. ಸಂವಿಧಾನದಲ್ಲಿ ಸಮಾನ ಕೆಳಸ್ತರದಲ್ಲಿರುವವರಿಂದ ಹಿಡಿದು ಸ್ಥಾನಮಾನವನ್ನು ಸಮಾಜದ ಅತ್ಯುನ್ನತ ಸ್ಥಾನದಲ್ಲಿರುವವರೆಗೆ ಏಕರೂಪಿಯಾಗಿ ನಿಜಾರ್ಥದಲ್ಲಿ ಕಾಪಾಡುವುದು ನಮ್ಮ ನಾಗರೀಕ ಕರ್ತವ್ಯವಾಗಿದೆ. ಸಾಮಾಜಿಕ ದುಷ್ಟ ಪಿಡುಗುಗಳಾದ ಜಾತಿ ಭೇದ, ವರದಕ್ಷಿಣೆ, ನಿರುದ್ಯೋಗ ಸಮಸ್ಯೆ, ಬಡತನ, ಅನಕ್ಷರತೆಗಳನ್ನು ಮೆಟ್ಟ ನಿಂತು ಸ್ವಾವಲಂಭಿ, ಸದೃಢ ರಾಷ್ಟ್ರವನ್ನು ಕಟ್ಟುವತ್ತ ಬದ್ಧರಾಗೋಣ, ಗ್ರಾಮ ರಾಜ್ಯ, ರಾಮ ರಾಜ್ಯದ ಕನಸನ್ನು ಸಾಕಾರಗೊಳಸೋಣ ಎಂದರು.
ಶಾಸಕ ವಿ.ಸುನಿಲ್ ಕುಮಾರ್ ಗೌರವವಂದನೆ ಸಲ್ಲಿಸಿ, ಪೆರೆಡ್ ವೀಕ್ಷಿಸಿದರು. ಕಾರ್ಕಳ ಉಪ ವಿಭಾಗ ಪೆÇಲೀಸ್ ಉಪನಿರೀಕ್ಷಕ ಅರವಿಂದ ಕಲಗುಜ್ಜಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ತ್, ವೃತ್ತ ನಿರೀಕ್ಷಕ ಡಿ. ನಾಗರಾಜ್, ಕ್ಷೇತ್ರ ಶಿಕ್ಷಣಾ„ಕಾರಿ ಭಾಸ್ಕರ್ ಡಿ. ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ಪುರಸಭೆ ಸದಸ್ಯರು, ಮಾಜಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಸಿಬಂದಿಗಳು, ವಿದ್ಯಾರ್ಥಿಗಳು ನಾಗರಿಕರು. ಉಪಸ್ಥಿತರಿದ್ದರು. ಪೆÇಲೀಸ್ ತಂಡ, ಶಿಕ್ಷಣ ಸಂಸ್ಥೆಗಳ ವಿವಿಧ ಘಟಕಗಳ ತಂಡದ ಬ್ಯಾಂಡ್ಸೆಟ್ ಸಹಿತ ಆಕರ್ಷಕ ಪೆರೆಡ್ ನಡೆಯಿತು. ಅನಂತಶಯನದಲ್ಲಿ ಪುರಸಭೆ ಮುಖ್ಯಾಧಿಕಾರಿ ಟಿ. ರೂಪಾ ಶೆಟ್ಟಿ ಧ್ವಜಾರೋಹಣಗೈದರು. ಅಲ್ಲಿಂದ ಆಕರ್ಷಕ ಮೆರವಣಿಗೆ ಗಾಂಧಿಮೈದಾನದ ತನಕ ಸಾಗಿತು. 2.ಕಿ.ಮೀ ದೂರದ ವರೆಗೆ ಶಾಸಕರು ಮೆರವಣಿಗೆ ಜತೆ ಕಾಲ್ನಡಿಗೆಯಲ್ಲಿ ಮೈದಾನದವರೆಗೆ ತೆರಳಿದರು. ಅಜೆಕಾರ್ ಪೆÇಲೀಸ್ ಠಾಣೆಯ ಎಸ್ಐ ರವಿ. ಬಿ.ಕೆ ಪೆರೆಡ್ ಮುಖ್ಯಸ್ಥರಾಗಿ ನಡೆಸಿಕೊಟ್ಟರು. ತೋಟಗಾರಿಕೆ ಇಲಾಖೆಯಿಂದ ಇಬ್ಬರು ತಾಳೆ ಕೃಷಿಕರನ್ನು ಗುರುತಿಸಿ ಪೆÇ್ರೀತ್ಸಾಹಿಸಲಾಯಿತು. ಸಂಜಯ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
Independence Day :ಬಂಟಕಲ್ಲು ಪರಿಸರದಲ್ಲಿ ರಾಷ್ಟ್ರದ 77ನೇ ಸ್ವಾತಂತ್ರ್ಯೋತ್ಸವದ ಸಡಗರ….!
Shirva School : ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ