ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಿಡಿಸಿದ ಅಬ್ಬರದ ಶತಕ ಹಾಗೂ ಶ್ರೇಯಸ್ ಅಯ್ಯರ್ ಬಾರಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ ವಿಂಡೀಸ್ ಎದುರು ಭಾರತ 59 ರನ್ ಗಳ ಗೆಲುವು ದಾಖಲಿಸಿತು. ನಿನ್ನೆ ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವೆಲ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ, ಆರಂಭದಲ್ಲೇ ಆಘಾತ ಎದುರಾಯಿತು. ಧವನ್ 2 ,ರೋಹಿತ್ 18 ಬಹುಬೇಗನೆ ಪೆವಿಲಿಯನ್ ಸೇರಿದ್ರು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ಸ ಅಯ್ಯರ್ ತಂಡಕ್ಕೆ ಆಸರೆಯಾದ್ರು. ಪರಿಣಾಮವಾಗಿ ಭಾರತ, ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 279 ರನ್ ಕಲೆ ಹಾಕಿತು.
ಭಾರತ ತಂಡ ನೀಡಿದ್ದ 280 ರನ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 42 ಓವರ್ಗಳಲ್ಲಿ 210 ರನ್ಗಳಿಗೆ ಆಲೌಟಾಯಿತು. ಮಳೆಯಿಂದಾಗಿ ಪಂದ್ಯಕ್ಕೆ ಸ್ವಲ್ಪ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ 46 ಓವರ್ಗಳಲ್ಲಿ 270 ರನ್ ಗಳಿಸುವ ಗುರಿ ನೀಡಲಾಗಿತ್ತು. ವಿಂಡೀಸ್ ಪರ ಎವಿನ್ ಲೂಯಿಸ್ ಮತ್ತು ನಿಕೋಲಸ್ ಪೂರನ್ ಮಾತ್ರ ಭಾರತೀಯ ಬೌಲಿಂಗ್ ಪಡೆಗೆ ಪ್ರತಿರೋಧ ಒಡ್ಡಿದರು. ಉಳಿದಂತೆ ಇತರ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿದರು. ಟೀಮ್ ಇಂಡಿಯಾ ಪರ ಭವನೇಶ್ವರ್ ಕುಮಾರ್ 4, ಮೊಹಮದ್ ಶಮಿ 2 ಮತ್ತು ಕುಲದೀಪ್ ಯಾದವ್ 2 ವಿಕೆಟ್ ಪಡೆದು ಗೆಲುವಿನ ರುವಾರಿ ಯಾದ್ರು. ಈ ಮೂಲಕ ಭಾರತ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತು.