ನಾವು ಈ ಮೊದಲೇ ತುಳಸಿಯ ಬಗ್ಗೆ ಹಲವಾರು ಮಾಹಿತಿಯನ್ನ ನೀಡಿದ್ದೇವೆ. ತುಳಸಿ ಸಮೃದ್ಧವಾಗಿ ಬೆಳೆದ್ರೆ ಮನೆಯು ಕೂಡ ಅಷ್ಟೇ ಸಮೃದ್ಧವಾಗಿ ಇರುತ್ತದೆ ಅಂತಾ ಹೇಳಿದ್ದೇವು. ಇಂದು ನಾವು ತುಳಸಿ ಪೂಜೆ ಮಾಡುವಾಗ ಶ್ಲೋಕವೊಂದನ್ನ ಹೇಳಬೇಕು. ಆ ಶ್ಲೋಕ ಯಾವುದು..? ಅದನ್ನ ಹೇಳುವುದರಿಂದ ಆಗುವ ಪ್ರಯೋಜನವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.

ಪ್ರತಿದಿನ ಸ್ನಾನ ಮಾಡಿ, ತುಳಸಿಗೆ ನೀರು ಹಾಕಿ, ತುಳಸಿ ಪೂಜೆ ಮಾಡಿದ್ದಲ್ಲಿ. ಮನೆಗೆ ಒಳಿತಾಗುತ್ತದೆ. ಮನೆಯ ಅಭಿವೃದ್ಧಿಯಾಗುತ್ತದೆ. ಆದ್ರೆ ಇದರ ಜೊತೆಗೆ ಒಂದು ಶ್ಲೋಕವನ್ನು ಹೇಳುವುದು ಇನ್ನೂ ಉತ್ತಮ. ಈ ಶ್ಲೋಕವನ್ನ ಹೇಳುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುವುದು. ಕಲಹ ಕಡಿಮೆಯಾಗುವುದು. ಆರೋಗ್ಯಾಭಿವೃದ್ಧಿ, ಧನಾಭಿವೃದ್ಧಿಯಾಗುತ್ತದೆ. ಆ ಶ್ಲೋಕ ಹೀಗಿದೆ..
ಯನ್ಮೂಲೇ ಸರ್ವತೀರ್ಥಾನೀ ಯನ್ಮಧ್ಯೆ ಸರ್ವದೇವತ
ಯದಾಗ್ರೆ ಸರ್ವದೇವಶ್ಚ ತುಳಸಿ ತ್ವಾಂ ನಮಾಮ್ಯಹಂ
ಈ ಶ್ಲೋಕವನ್ನ ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕುತ್ತ ಪೂಜೆ ಮಾಡುವಾಗ ಹೇಳಬೇಕು. ಆದರೆ ತುಳಸಿ ಗಿಡಕ್ಕೆ ನೀರು ಹಾಕಿದ ಬಳಿಕ ತಂಬಿಗೆಯಲ್ಲಿನ ಸ್ವಲ್ಪ ನೀರು ಉಳಿಸಿಕೊಂಡು ಕೊನೆಗೆ ಆ ನೀರನ್ನ ನಿಮ್ಮ ತಲೆಯ ಮೇಲೆ ಚುಮುಕಿಸಿಕೊಳ್ಳಬೇಕು.
ಹೀಗೆ ಪ್ರತಿದಿನ ತುಳಸಿಗೆ ನೀರು ಹಾಕುವವ ವೇಳೆ ಈ ಶ್ಲೋಕ ಹೇಳುವುದರಿಂದ ಯಶಸ್ಸು ಕಾಣುತ್ತೀರಿ. ಆದ್ರೆ ಸೂತಕವಿದ್ದಾಗ, ಮುಟ್ಟಾದಾಗ ತುಳಸಿ ಗಿಡ ಮುಟ್ಟುವುದು, ನೀರು ಹಾಕುವುದು, ಶ್ಲೋಕ ಹೇಳುವುದೆಲ್ಲ ನಿಷಿದ್ಧ.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911