Sunday, September 8, 2024

Latest Posts

ರಾಕ್ಷಸರ ಸಂಹಾರಕ್ಕಾಗಿ 8 ರೂಪವನ್ನ ತಾಳಿದ ಗಣೇಶ: ಆ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

- Advertisement -

ಪ್ರಥಮ ಪೂಜಿತ ಗಣೇಶನಿಗೆ ಹಲವಾರು ಹೆಸರುಗಳಿದೆ. ಒಂದೊಂದು ಹೆಸರಿಗೂ ಒಂದೊಂದು ಅರ್ಥವಿದೆ. ಅಂತವುಗಳಲ್ಲಿ ನಾವಿಂದು ಗಣೇಶನ 8 ರೂಪಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಏಕದಂತ: ದೇವತೆಗಳಿಗೆ ಮದಾಸುರನೆಂಬ ರಾಕ್ಷಸ ತೊಂದರೆ ನೀಡುತ್ತಿದ್ದ. ಇದರಿಂದ ದೇವತೆಗಳು ತಮ್ಮನ್ನು ರಕ್ಷಿಸುವಂತೆ ಗಣಪನಲ್ಲಿ ಕೇಳಿಕೊಳ್ಳುತ್ತಾರೆ. ಆಗ ಗಣಪ ಏಕದಂತನಾಗಿ ಮದಾಸುರನನ್ನು ಸಂಹರಿಸುತ್ತಾನೆ.

ಗಜಾನನ: ಲೋಭಾಸುರ ಎಂಬ ರಾಕ್ಷಸನನ್ನು ಸೋಲಿಸಲು ಗಣೇಶ ಗಜಾನನನ ರೂಪ ತಾಳುತ್ತಾನೆಂದು ಹೇಳಲಾಗಿದೆ. ನಂತರ ಲೋಭಾಸುರನಿಗೆ ತನ್ನ ತಪ್ಪಿನ ಅರಿವಾಗಿ, ಆತ ಯುದ್ಧ ಮಾಡದೇ, ಗಣಪನ ಎದುರು ಶರಣಾಗುತ್ತಾನೆ.

ಮಹೋದರ: ದೇವಲೋಕವನ್ನು ನಾಶಪಡಿಸಲು ಶುಕ್ರಾಚಾರ್ಯರು ಸೃಷ್ಟಿಸಿದ್ದ ಮೋಹಾಸುರನನ್ನು ಸಂಹರಿಸಲು ಗಣಪ ಮಹೋದರ ರೂಪ ತಾಳಿದ ಎನ್ನಲಾಗಿದೆ. ಮಹೋದರ ಎಂದರೆ, ಮಹಾ ಉದರ ಅಂದರೆ ಡೊಳ್ಳು ಹೊಟ್ಟೆಯವ ಎಂದರ್ಥ.

ವಕ್ರತುಂಡ: ಮತ್ಸಾಸುರನನ್ನು ಸಂಹರಿಸಲು ಗಣೇಶ ವಕ್ರತುಂಡನ ರೂಪ ತಾಳುತ್ತಾನೆ. ಈ ಮತ್ಸಾಸುರನಿಗೆ ವರ ನೀಡಿದ್ದೇ ಶಿವ. ಶಿವನ ವರದಿಂದ ಕೊಬ್ಬಿದ್ದ ಮತ್ಸಾಸುರ ದೇವೆಗಳಿಗೆ ತೊಂದರೆ ನೀಡುತ್ತಿದ್ದ. ಆಗ ಗಣಪ ವಕ್ರತುಂಡನಾಗಿ ಮತ್ಸಾಸುರನ ಸಂಹಾರ ಮಾಡುತ್ತಾನೆ.

ಧೂಮ್ರವರ್ಣ: ಅಹಂಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಲು ಗಣೇಶ ಧೂಮ್ರವರ್ಣನ ರೂಪ ತಾಳಿದ್ದಾನೆ. ಈ ಮೂಲಕ ಅಹಂ ಅನ್ನು ತೆಗೆದುಹಾಕಲು ಗಣೇಶ ಈ ರೂಪ ತಾಳಿದನೆಂದು ಹೇಳಲಾಗುತ್ತದೆ.

ಲಂಬೋದರ : ಸೂರ್ಯದೇವನನ್ನು ಪೂಜಿಸಿದ ಕ್ರೋಧಾಸುರ ಇಡೀ ಭೂಮಂಡಲದ ಮೇಲೆ ಹಿಡಿತ ಸಾಧಿಸುವಂತೆ ವರ ಕೇಳುತ್ತಾನೆ. ತದನಂತರ ಕ್ರೋಧಾಸುರನ ಅಟ್ಟಹಾಸ ತಡೆಯಲು ಗಣಪತಿ ಲಂಬೋದರನಾಗಿ ಕ್ರೋಧಾಸುರನನ್ನು ಸಂಹರಿಸುತ್ತಾನೆ.

ವಿಘ್ನರಾಜ: ಪರ್ವತದಿಂದ ಜನಿಸಿದ ಮಮ್ ಎಂಬ ರಾಕ್ಷಸನ ಸಂಹಾರ ಮಾಡಲು ಗಣೇಶ ವಿಘ್ನರಾಜನ ಅವತಾರವನ್ನೆತ್ತಿದ ಎನ್ನಲಾಗಿದೆ. ಆದ್ದರಿಂದ ಶುಭಕಾರ್ಯ ನಡೆಯುವುದಕ್ಕೂ ಮುನ್ನ, ಯಾವುದೇ ವಿಘ್ನ ನಡೆಯದಂತೆ ಕಾಪಾಡು ಎಂದು ಪ್ರಪ್ರಥಮವಾಗಿ ಗಣಪತಿಗೆ ಪೂಜೆ ಸಲ್ಲಿಸಲಾಗುವುದು.

ವಿಕಟಾವತಾರಿ: ಕಾಮಾಸುರ ಎಂಬ ರಾಕ್ಷಸನ ಸಂಹಾರಕ್ಕಾಗಿ ಗಣೇಶ ವಿಕಟಾವತಾರಿಯಾದ ಎನ್ನಲಾಗಿದೆ.
ಹೀಗೆ ಮೋಹ, ಮದ, ಮತ್ಸರ, ಲೋಭ, ಕಾಮ, ಅಹಂಕಾರಗಳನ್ನು ತೊಡೆದು ಹಾಕಲು ಗಣಪ ಎಂಟು ಅವತಾರಗಳನ್ನೆತ್ತಿದ ಎನ್ನಲಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss