ಕೇರಳದ ತಿರುವನಂತಪುರಂನಲ್ಲಿರುವ ಅನಂತ ಪದ್ಮನಾಭ ಮಂದಿರದಲ್ಲಿ ಸಾಕಷ್ಟು ಚಿನ್ನಾಭರಣಗಳಿದೆ ಎಂದು, ಕೆಲ ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಅಲ್ಲಿರುವ 7 ಕೋಣೆಗಳಲ್ಲಿ 6 ಕೋಣೆಗಳ ಬಾಗಿಲನ್ನು ತೆರೆಸಿ, ಚಿನ್ನಾಭರಣಗಳನ್ನು ತೆಗೆಯಲಾಗಿತ್ತು. ಆದ್ರೆ ಇದುವರೆಗೆ 7ನೇ ಕೋಣೆಯ ಬಾಗಿಲು ತೆಗೆಯಲು ಮಾತ್ರ ಯಾರೂ ಧೈರ್ಯ ಮಾಡಲಿಲ್ಲ. ಯಾಕಂದ್ರೆ ಈ 7ನೇ ಕೋಣೆಯ ಬಾಗಿಲು ತೆರೆಯದಂತೆ ಯಾವುದೋ ಒಂದು ಶಕ್ತಿ ಅದನ್ನ ಕಾಯುತ್ತಿದೆ ಎಂದು ಹೇಳಲಾಗತ್ತೆ. ಹಾಗಾದ್ರೆ ಅಲ್ಲಿರುವ ರಹಸ್ಯವಾದ್ರೂ ಏನು..? ಈ 7ನೇ ಕೋಣೆಯ ಬಾಗಿಲು ತೆಗೆದರೆ ಏನಾಗತ್ತೆ..? ಇವೆಲ್ಲದರ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ..
ಎಷ್ಟೋ ಜನ, ಎಷ್ಟೇ ಪ್ರಯತ್ನ ಪಟ್ಟರೂ, ಈ ಬಾಗಿಲು ತೆಗೆಯಲು ಸಾಧ್ಯವಾಗಲಿಲ್ಲ ಅಂತಾ ಹೇಳಲಾಗತ್ತೆ. ಮತ್ತು ಈ ಬಾಗಿಲನ್ನು ತೆಗೆಯಲು ಪ್ರಯತ್ನಿಸುವುದು, ಯಾವುದೋ ಅನಾಹುತಕ್ಕೆ, ಆಮಂತ್ರಣ ಕೊಟ್ಟಂತೆ ಅಂತಾನೂ ಇಲ್ಲಿನ ಜನ ಹೇಳ್ತಾರೆ. ಯಾಕಂದ್ರೆ ಈ ಕೋಣೆಯನ್ನು ಕಾಯುತ್ತಿರುವುದು, ವಿಷ್ಣು ಅಂಶವಾದ ಸರ್ಪಗಳಂತೆ.
ಈ ಕೋಣೆಯ ಬಾಗಿಲಿಗೆ ಎರಡು ಸರ್ಪಗಳ ಕೆತ್ತನೆ ಮಾಡಲಾಗಿದೆ. ಹೆಚ್ಚಾಗಿ ಇದು, ಇಲ್ಲಿ ನಾಗಗಳು ಇದೆ ಅನ್ನುವ ಸಂಕೇತವೂ ಆಗಿರಬಹುದು. ಒಮ್ಮೆ ಒಂದಿಬ್ಬರು ಜನ ಈ ಬಾಗಿಲನ್ನ ತೆಗೆಯಲು ಪ್ರತ್ನಿಸಿದ್ದರಂತೆ, ಆವಾಗ ಸರ್ಪ ಕಚ್ಚಿ ಅವರು ಸತ್ತರೆಂದು ಹೇಳಲಾಗಿದೆ. ಈ ಘಟನೆ ನಡೆದ ಬಳಿಕ, ಯಾರೂ ಕೂಡ ಈ ಕೋಣೆಯ ಬಾಗಿಲನ್ನು ತೆಗೆಯಲು ಪ್ರಯತ್ನ ಮಾಡಲಿಲ್ಲ. ಅಲ್ಲದೇ, ಈ ದೇವಸ್ಥಾನದ ಖಜಾನೆ ಬಗ್ಗೆ ಕೋರ್ಟ್ನಲ್ಲಿಯೂ ವಾದ ಮಂಡಿಸಲಾಗಿತ್ತು. ಎಲ್ಲ ಕೋಣೆಯ ಬಾಗಿಲು ತೆಗೆದು ಅಲ್ಲಿರುವ ಖಜಾನೆಯ ಲೆಕ್ಕ ಕೊಡಬೇಕೆಂದು ಕೂಡ ಹೇಳಲಾಗಿತ್ತು. 6 ಕೋಣೆಯ ಬಾಗಿಲು ತೆಗೆದು ಖಜಾನೆ ಲೆಕ್ಕ ಕೊಡಲಾಯಿತು. ಆದ್ರೆ 7ನೇ ಕೋಣೆಯ ಬಾಗಿಲು ತೆಗೆಯುವ ಪ್ರಯತ್ನ ಮಾತ್ರ ಅರ್ಧಕ್ಕೆ ನಿಂತಿದೆ.
ಇನ್ನೂ ವಿಚಿತ್ರ ಸಂಗತಿ ಅಂದ್ರೆ ಈ ಬಾಗಿಲಿಗೆ ಯಾವುದೇ ಬೀಗವನ್ನು ಹಾಕಲಾಗಿಲ್ಲ. ಈ ಬಾಗಿಲು ಹೇಗೆ ಬದಲಾಗಿದೆ ಎಂದು ಕೂಡ ಯಾರಿಗೂ ಇದುವರೆಗೆ ಕಂಡುಹಿಡಿಯಲು ಆಗಿಲ್ಲ. ಸ್ಥಳೀಯರು ಹೇಳುವ ಪ್ರಕಾರ, ಇದನ್ನ ಮಂತ್ರೋಚ್ಛಾರಣೆ ಮಾಡಿ, ಬಂದ್ ಮಾಡಲಾಗಿದೆಯಂತೆ. ಈ ಬಾಗಿಲು ತೆರೆಯಲು ಆ ಮಂತ್ರವನ್ನೇ ಹೇಳಬೇಕಂತೆ. ಆಗಷ್ಟೇ 7ನೇ ಕೋಣೆಯ ಬಾಗಿಲು ತೆರೆಯುತ್ತದೆ ಅಂತಾರೆ ಸ್ಥಳೀಯರು.
ಇಲ್ಲಿ ನಾಗವಿದೆ ಎಂದು ನಂಬಲಾದ ಕಾರಣ, ಗರುಡ ಮಂತ್ರದಿಂದ ಈ ಬಾಗಿಲನ್ನು ತೆಗಿಯಬಹುದು ಅಂತಾ ಅಂದಾಜಿಸಲಾಗಿದೆ. ಆದ್ರೆ ಈ ಮಂತ್ರವನ್ನ ಉಚ್ಛಾರ ಮಾಡುವುದಕ್ಕೆ ಸಿದ್ಧಪುರುಷನೇ ಬೇಕಂತೆ. ಅಂಥವರಷ್ಟೇ ಈ ಮಂತ್ರವನ್ನ ಸ್ಪಷ್ಟವಾಗಿ ಉಚ್ಛರಿಸಬಹುದು. ಈ ಮಂತ್ರವನ್ನ ತಪ್ಪಾಗಿ ಉಚ್ಛರಿಸಿದರೆ, ಅವರಿಗೆ ಮರಣ ಖಚಿತವೆಂದು ಹೇಳಲಾಗತ್ತೆ. ಇನ್ನು ಸದ್ಯದ ಮಟ್ಟಿಗೆ ಗರುಡಮಂತ್ರವನ್ನು ಸ್ಪಷ್ಟವಾಗಿ ಉಚ್ಛರಿಸುವ ಸಿದ್ಧ ಪುರುಷ, ಈ ಭೂಮಿಯ ಮೇಲೆ ಇಲ್ಲವೆಂದು ಹೇಳಲಾಗಿದೆ. ಇದನ್ನ ಒತ್ತಾಯ ಪೂರ್ವಕವಾಗಿ ತೆರೆದರೆ, ಪ್ರಳಯವಾಗತ್ತೆ ಅಂತಾ ಹೇಳಲಾಗಿದೆ. ಹಾಗಾಗಿ ಯಾರೂ ಇದುವರೆಗೂ ಈ ಬಾಗಿಲನ್ನ ತೆರೆಯಲು ಪ್ರಯತ್ನಿಸಿಲ್ಲ.