Sunday, June 1, 2025

Latest Posts

ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಹಿನ್ನೆಲೆ ಏನು..?

- Advertisement -

ಇವತ್ತು ನಾವು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪುಣ್ಯಕ್ಷೇತ್ರವಾದ ಗೋಕರ್ಣ ಮಹಾಬಲೇಶ್ವರನ ಬಗ್ಗೆ ಚಿಕ್ಕ ಮಾಹಿತಿಯನ್ನ ತಿಳಿಯೋಣ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ರಶುರಾಮ ಸ್ಥಾಪನೆಯ ಸಪ್ತ ಕ್ಷೇತ್ರಗಳಲ್ಲಿ ಗೋಕರ್ಣ ಕೂಡಾ ಒಂದು. ಇಲ್ಲಿ ಸಾಕ್ಷಾತ್ ಶಿವ ಲಿಂಗ ಸ್ಥಾಪಿತವಾಗಿದೆ. ರಾವಣ ಶಿವನ ಪರಮ ಭಕ್ತ ಅಂಬೋದು ಎಲ್ಲರಿಗೂ ಗೊತ್ತಿರುವ ವಿಷಯ. ಅಂತೆಯೇ ಆತನ ತಾಯಿ ಕೈಕಸಿ ಕೂಡ ಶಿವನ ಭಕ್ತೆಯಾಗಿದ್ದಳು. ಆಕೆಗಾಗಿ ಶಿವಲಿಂಗ ತರಲು ರಾವಣ, ಶಿವನ ಕುರಿತು ತಪಸ್ಸು ಮಾಡುತ್ತಾನೆ. ರಾವಣನ ತಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ತನ್ನ ಆತ್ಮಲಿಂಗ ರಾವಣನಿಗೆ ನೀಡುತ್ತಾನೆ. ಆದರೆ ಆ ಲಿಂಗ ಭೂಮಿ ಮೇಲಿರಿಸಬಾರದು, ಅದು ಎಲ್ಲಿ ಇರಿಸಲಾಗುತ್ತದೆಯೋ ಅಲ್ಲಿಂದ ಪುನಃ ತೆಗೆಯಲಾಗುವುದಿಲ್ಲವೆಂಬ ಮಾತನ್ನ ಶಿವ ರಾವಣನಿಗೆ ಹೇಳುತ್ತಾನೆ.

ಇದು ಮುಂದೆ ಲೋಕದ ಸರ್ವನಾಶಕ್ಕೆ ನಾಂದಿ ಹಾಡುತ್ತದೆ ಎಂಬ ಸಂಗತಿ ವಿಷ್ಣುವಿಗೆ ಗೊತ್ತಾಗುತ್ತದೆ. ಆಗ ವಿಷ್ಣು ಗಣಪತಿಗೆ ಗೋಪಾಲಕನ ವೇಷ ಧರಿಸಿ, ರಾವಣನಿಂದ ಆತ್ಮಲಿಂಗ ತೆಗೆದುಕೊಳ್ಳುವಂತೆ ಹೇಳುತ್ತಾನೆ. ಸಂಜೆಯಾಗುತ್ತಿದ್ದಂತೆ ಸಂಧ್ಯಾವಂದನೆ ಮಾಡಬೇಕೆಂದು ರಾವಣ ನೋಡುತ್ತಿರಬೇಕಾದರೆ, ಗೋಪಾಲನ ವೇಷದಲ್ಲಿರುವ ಗಣಪ ಕಾಣುತ್ತಾನೆ. ಆತನನ್ನು ಕರೆದು, ಈ ಲಿಂಗವನ್ನ ಕೈಯಲ್ಲೇ ಹಿಡಿದುಕೊಳ್ಳಬೇಕು. ಕೆಲ ಸಮಯದಲ್ಲೇ ನಾನು ಸಂಧ್ಯಾವಂದನೆ ಮಾಡಿ ಬರುತ್ತೇನೆಂದು ಹೇಳುತ್ತಾನೆ.

ಆಗ ಗೋಪಾಲಕ, ನಾನು ಮೂರು ಬಾರಿ ಕಳೆಯುವುದರೊಳಗೆ ಬರಬೇಕು. ಇಲ್ಲವಾದರೆ, ನಾನು ಈ ಲಿಂಗವನ್ನ ಭೂಮಿಯ ಮೇಲಿಡುತ್ತೇನೆ ಎನ್ನುತ್ತಾನೆ. ಇದಕ್ಕೆ ಒಪ್ಪಿದ ರಾವಣ ಸಂಧ್ಯಾವಂದನೆಗೆ ತೆರಳುತ್ತಾನೆ.

ಮೂರು ಬಾರಿ ಕೂಗಿದರೂ ರಾವಣ ಬರದಿದ್ದಾಗ, ಆತ್ಮ ಲಿಂಗವನ್ನ ಕೆಳಗಿರಿಸುತ್ತಾನೆ. ಇದೇ ವೇಳೆ ಸಂಧ್ಯಾವಂದನೆ ಮುಗಿಸಿ ಬಂದ ರಾವಣ ಲಿಂಗ ಭೂಮಿ ಮೇಲಿರುವುದನ್ನು ಕಂಡು ಸಿಟ್ಟಾಗುತ್ತಾನೆ. ಲಿಂಗವನ್ನ ಕೀಳಬೇಕೆಂದು ಪ್ರಯತ್ನಿಸುತ್ತಾನೆ. ಆದ್ರೆ ಅವನ ಕೈಗೆ ಶಿವಲಿಂಗದ ನಾಲ್ಕು ತುಂಡುಗಳು ಬರುತ್ತದೆ. ಆ ಲಿಂಗದ ತುಂಡನ್ನ ನಾಲ್ಕು ದಿಕ್ಕಿಗೆ ಎಸೆಯುತ್ತಾನೆ.

ಆ ಲಿಂಗದ ತುಂಡುಗಳು ಬಿದ್ದ ಜಾಗ ನಾಲ್ಕು ಪುಣ್ಯಕ್ಷೇತ್ರಗಳಾಗಿ ಮಾರ್ಪಡುತ್ತದೆ. ಧಾರೇಶ್ವರ, ಮುರ್ಡೇಶ್ವರ, ಗುಣವಂತೇಶ್ವರ ಮತ್ತು ಸಜ್ಜೇಶ್ವರ ಎಂದು ಅವುಗಳಿಗೆ ನಾಮಕರಣ ಮಾಡಲಾಗುತ್ತದೆ. ರಾವಣ ಲಿಂಗ ತೆಗಿಯುವ ಭರದಲ್ಲಿ ಆ ಲಿಂಗ ಗೋವಿನ ಕಿವಿಯ ರೂಪಕ್ಕೆ ಬರುತ್ತದೆ. ಆದ್ದರಿಂದ ಆ ಕ್ಷೇತ್ರವನ್ನ ಗೋಕರ್ಣ ಎನ್ನಲಾಗುತ್ತದೆ. ಅಲ್ಲದೇ, ತನ್ನ ಅಷ್ಟು ಶಕ್ತಿಯನ್ನ ಹಾಕಿ ರಾವಣ ಲಿಂಗ ತೆಗೆಯಲು ಪ್ರಯತ್ನಿಸಿದ್ದಕ್ಕಾಗಿ, ಇಲ್ಲಿನ ಲಿಂಗಕ್ಕೆ ಮಹಾಬಲೇಶ್ವರ ಎಂಬ ಹೆಸರು ಬಂದಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss