ನವರಸ ನಾಯಕ ಜಗ್ಗೇಶ್ ತಮ್ಮ ಜೀವನವನ್ನ ತುಂಬಾ ಚೆನ್ನಾಗಿ ಅನುಭವಿಸುತ್ತಿದ್ದಾರೆ. ರಾಯರ ಆರಾಧಕ, ಕಲಾರಾಧಕ ಹೀಗೆ ಜಗ್ಗೇಶ್ ಎಲ್ಲಾ ಜೀವನವನ್ನ ಸಂತೃಪ್ತಿಯಿಂದ ಇದ್ದಾರೆ. ಶೂಟಿಂಗ್ ಟೈಮ್ ನಲ್ಲಿ ನಟನಾಗಿ, ಮಕ್ಕಳ ಜೊತೆ ಮಗುವಾಗಿ ಜಗ್ಗೇಶ್ ಇರ್ತಾರೆ. ಇದೀಗ ಮೊಮ್ಮಕ್ಕಳೊಂದಿಗಿನ ಆನಂದವನ್ನ ಫೇಸ್ ಬಿಕ್ ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ.
ಅರ್ಜುನ ಅರ್ಹ ಯುಷಾನ್ ವಸಿಷ್ಟ ಕಾಷಿಕ.. ಒಬ್ಬ ತಾತನಾಗಿ ಇಂದು ಎಲ್ಲಾ ಮೊಮ್ಮಕ್ಕಳ ಜೊತೆ ಸಮಯಕಳೆದಾಗ ಅದರ ಆನಂದ ಅನುಭವಿಸಿದವರಿಗೆ ಗೊತ್ತು!
1980ರಲ್ಲಿ ನನ್ನ ತಾತ ಎಲ್ಲಾ ಮೊಮ್ಮಕ್ಕಳ ಜೊತೆಯಲ್ಲಿ ಕಾಲಕಳೆದು “ಶಿವ ಶಿವ ಆನಂದ” ಎಂದಾಗ ಏನ್ ತಾತ ಆನಂದ ಅಂತ್ತೀಯ ಎಂದಾಗ ನಾನು..ತಾತ ನನಗೆ ಮೊಮ್ಮಗನೆ ಒಂದು ಕಾಲ ಬರುತ್ತದೆ ನನ್ನಂತೆ ನೀನು ತಾತನಾಗಿ ಎಲ್ಲಾ ಮೊಮ್ಮಕ್ಕಳು ಜೊತೆ ನೀ ಸೇರಿದಾಗ ಆ ಆನಂದ ಏನು ಎಂದು ನಿನಗರಿವಾಗುತ್ತದೆ ಆಗ ನಾನು ಇರುವುದಿಲ್ಲಾ ನನ್ನ ನೆನಪು ನಿನ್ನ ಬಳಿ ಇರುತ್ತದೆ ಎಂದಿದ್ದ!ಆ ಕಾಲಕ್ಕೆ ಕಾಯೋ ಸೂ…ಮಗನೆ ಎಂದಿದ್ದ..
ಇಂದು ನಾನು ಈ ಮಕ್ಕಳಿಗೆ ತಾತನಾಗಿ ಎಲ್ಲರ ಜೊತೆ ಕೊತಾಗ ಏನೋ ರೋಮಾಂಚನವಾಯಿತು..ಆಗ ತಾತ ನುಡಿದ ಮಾತು ನೆನಪಾಯಿತು!57 ಗಡಿಯಲ್ಲಿ ಅಂದಿನ ನನ್ನ ತಾತನ ಅನುಭವ ಇಂದು ನನಗಾಯಿತು!
ಓ ದೇವರೆ ಎಂಥ ಸಂತೋಷ ಇಟ್ಟಿದ್ದೀಯ ನಮ್ಮಲ್ಲಿಯೇ!ನನ್ನಂತೆ ಎಲ್ಲರಿಗು ಈ ಸಂತೋಷ ಹಂಚಿಕೊಂಡು ಬಾಳುವ ದಿನ ಗುಣ ನೀಡಿಬಿಡು!
ಎಂದು ಪ್ರಾರ್ಥಿಸು ನನ್ನ ಮನ…
ಮಕ್ಕಳಿರಲಿ ಮನೆತುಂಬ…ಶುಭಸಂಜೆ..