Tuesday, June 17, 2025

Latest Posts

ವರ್ಗಾವಣೆ ರದ್ದು: ಮತ್ತೆ ಟಾಂಗ್ ಕೊಟ್ಟ ಜೆಡಿಎಸ್: ಕಾಸಿಗಾಗಿ ಹುದ್ದೆ ಸರಕಾರದ 6ನೇ ಗ್ಯಾರಂಟಿ..!

- Advertisement -

Political News: ಶಿಕ್ಷಣ ಇಲಾಖೆಯ ನಾಲ್ವರು ಉಪ ನಿರ್ದೇಶಕರ ವರ್ಗಾವಣೆಯನ್ನು ವರ್ಗ ಮಾಡಿದ ದಿನವೇ ಹಿಂಪಡೆದ ಕ್ರಮವನ್ನು ಜೆಡಿಎಸ್ ಟೀಕೆ ಮಾಡಿದೆ.ವರ್ಗಾವಣೆ ಹಾಗೂ ವರ್ಗಾವಣೆ ಹಿಂಪಡೆದ ಆದೇಶ ಪತ್ರಗಳನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಜೆಡಿಎಸ್ ಪಕ್ಷವು ಸಿಎಂ ಕಚೇರಿ ಮೇಲೆಯೇ ಬೊಟ್ಟು ಮಾಡಿ ತೋರಿಸಿದೆ.

ಇದು ಪಾರದರ್ಶಕವಷ್ಟೇ ಅಲ್ಲ, ‘ಅಪಾರ’ದರ್ಶಕ ಆಡಳಿತಕ್ಕೆ ಹಿಡಿದ ಕನ್ನಡಿ! ಏಕೆಂದರೆ, ಸಿಎಂ ಕಚೇರಿಯಿಂದ ನಡೆಯುವ ವರ್ಗಾವಣೆ, ಶಿಫಾರಸ್ಸಿನ ಟಿಪ್ಪಣಿಗಳ ಬಿಕರಿಗೆ ಇಲ್ಲಿದೆ ಇನ್ನೊಂದು ಸಾಕ್ಷ್ಯ, ಅಲ್ಲಿನವರಿಗೆ ಇದೇ ಪಂಚಭಕ್ಷ್ಯ ಎಂದು ಜೆಡಿಎಸ್ ಟೀಕೆ ಮಾಡಿದೆ.

ಸಿಎಂಓ ಅಂದರೆ ಸಿಎಂ ಆಫ್ ಕರ್ನಾಟಕ ಎಂದುಕೊಂಡಿದ್ದ ಕನ್ನಡಿಗರಿಗೆ ಅದು ಈಗ ಕರಪ್ಶನ್ ಮ್ಯಾನೇಜ್ ಮೆಂಟ್ ಆಫೀಸ್ ಆಗಿದೆ ಎನ್ನುವುದು ಅರ್ಥವಾಗಿದೆ. ಕಾರಣವಿಷ್ಟೇ; ಅಲ್ಲಿ ವೈ ಎಸ್ ಟಿ ಟ್ಯಾಕ್ಸ್ ಪಾವತಿ ಆಗದಿದ್ದರೆ ವರ್ಗಾವಣೆ ಆದೇಶಗಳೆಲ್ಲ ಮುಲಾಜಿಲ್ಲದೆ ಕಸದ ಬುಟ್ಟಿ ಸೇರುತ್ತವೆ ಎಂದು ಜೆಡಿಎಸ್ ಹೇಳಿದೆ.

ವಿಶೇಷ ಸೂಚನೆ: ವರ್ಗಾವಣೆ ಆದೇಶದ ದಿನವೇ ಅದು ಕೈಗೆ ಸಿಗಬೇಕಾದರೆ ವೈ ಎಸ್ ಟಿ ಟ್ಯಾಕ್ಸ್ ಕಡ್ಡಾಯ. ಇಲ್ಲವಾದರೆ ತಪ್ಪಿದ್ದಲ್ಲ ಅನ್ಯಾಯ!! ಕೈ ಬೆಚ್ಚಗೆ ಆಗದಿದ್ದರೆ ವರ್ಗಾವಣೆ ಆದೇಶದ ಪ್ರತಿ ನೇರ ಕಸದ ಬುಟ್ಟಿಗೆ ಹೋಗುವುದು ಗ್ಯಾರಂಟಿ!!! ಎಂದು ತೀವ್ರ ಕಿಡಿಕಾರಿರುವ ಜೆಡಿಎಸ್, ಕಾಸಿಗಾಗಿ ಹುದ್ದೆ ಸರಕಾರದ 6ನೇ ಗ್ಯಾರಂಟಿ ಎಂದು ಲೇವಡಿ ಮಾಡಿದೆ.

ಸ್ವಪಕ್ಷದ ನಾಯಕರ ವಿರುದ್ಧವೇ ಮಾಜಿ ಸಚಿವ ರಾಜುಗೌಡ ಗರಂ

ಸಾರಿ…… ಸಾರಿ…..ವಿಪಕ್ಷ ನಾಯಕರಿಲ್ಲ…?!

10ಕೋಟಿ ರೂ.ಗೆ ಅಧಿಕಾರಿಗಳ ವರ್ಗಾವಣೆ..! ಏನಿದು ಹೆಚ್.ಡಿ.ಕೆ ಹೊಸ ಬಾಂಬ್..?!

- Advertisement -

Latest Posts

Don't Miss