ಮೇಷ: ಆರ್ಥಿಕವಾಗಿ ಆಗಾಗ ತಾಪತ್ರಯಗಳು ಕಂಡು ಬರಲಿದೆ. ವೃತ್ತಿರಂಗದಲ್ಲಿ ಅಧಿಕಾರಿ ಜನರ ಆಗ್ರಹ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ಪ್ರಯಾಣದಲ್ಲಿ ಕಷ್ಟನಷ್ಟಗಳು ತೋರಿ ಬರಲಿದೆ. ದಿನಾಂತ್ಯ ಕಿರು ಸಂಚಾರವಿದೆ.

ವೃಷಭ: ಸದ್ಯ ದೈವಬಲ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ.ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಅಸಮಾಧಾನ ಕಂಡುಬರುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಉತ್ತಮ ಫಲವು ಸಿಗಲಿದೆ.
ಮಿಥುನ: ಅಪೇಕ್ಷಿತ ಜನರ ಸಹಾಯದಿಂದ ಕಾರ್ಯಸಾಧನೆಯಾಗಲಿದೆ. ದೇಹಾರೋಗ್ಯದಲ್ಲಿ ಸಮಾಧಾನ ಸಿಗಲಿದೆ. ದೈಹಿಕ ವಿಷದಾಪತ್ತುಗಳು ಸಮಸ್ಯೆ ತಂದೀತು. ಸಾಂಸಾರಿಕವಾಗಿ ಉತ್ತಮ ಕೆಲಸಗಳು ನಡೆಯಲಿದೆ.
ಕರ್ಕಾಟಕ: ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕುಟುಂಬದವರಿಂದ ಸ್ಪೂರ್ತಿ ಸಹಕಾರ ಮುನ್ನಡೆಗೆ ಸಾಧಕವಾಗಲಿದೆ. ನೆರೆ ಹೊರೆಯವರೊಂದಿಗೆ ಉತ್ತಮ ಸಂಬಂಧವಿರಿಸಿಕೊಳ್ಳಿ.
ಸಿಂಹ: ಅಧೀನ ನೌಕರರಿಂದ ಕಿರಿಕಿರಿ ಇರುತ್ತದೆ. ಸಾಂಸಾರಿಕವಾಗಿ ಉತ್ತಮ ಕೆಲಸಗಳಾಗಲಿದೆ. ಉದ್ಯೋಗ ಗೃಹ ಕೆಲಸಗಳಲ್ಲಿ ಸಮಾಧಾನ ಸಿಗಲಿದೆ. ಶತೃಕೃತ ದೋಷದಿಂದ ಮನಸ್ಸಿಗೆ ಸಮಾಧಾನ ದೊರಕಲಾರದು.
ಕನ್ಯಾ: ಸಾಂಸಾರಿಕವಾಗಿ ಸಾಮರಸ್ಯದ ಕೊರತೆ ಕಾಣಲಿದೆ. ಮನಸ್ಸು ಉದ್ವೇಗದಿಂದ ಶಾಂತಿ ಸಮಾಧಾನ ಕಳೆದುಕೊಳ್ಳಲಿದೆ. ಖರ್ಚು ವೆಚ್ಚಗಳು ದುಪ್ಪಟ್ಟಾಗುವುದರಿಂದ ಆರ್ಥಿಕ ಸಮತೋಲನ ತಪ್ಪಿ, ಆತಂಕಕ್ಕೆ ಕಾರಣವಾದಾವು.
ತುಲಾ: ಆರ್ಥಿಕವಾಗಿ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ನಾನಾ ರೀತಿಯ ಸಮಸ್ಯೆಗಳು ಮನಸ್ಸನ್ನು ಉದ್ವಿಗ್ನಗೊಳಿಸಲಿದೆ. ಎಲ್ಲದರಲ್ಲೂ ತಪ್ಪು, ಹುಳುಕು ಹುಡುಕುವ ನಿಮಗೆ ಸಮಾಧಾನವು ಕಂಡು ಬರಲಾರದು.
ವೃಶ್ಚಿಕ: ಆರೋಗ್ಯದ ಬಗ್ಗೆ ಮುಖ್ಯವಾಗಿ ಪಿತ್ತ, ಉಷ್ಣ, ಜಾಢ್ಯ, ಉದರ ವ್ಯಾಧಿ, ಉಸಿರಾಟದ ತೊಂದರೆ ಆಗಾಗ ಗೋಚರಕ್ಕೆ ಬರುತ್ತದೆ .ಜಾಗೃತೆ ವಹಿಸಿರಿ. ಕಾರ್ಯಕ್ಷೇತ್ರದಲ್ಲಿ ವಿರೋಧಿಗಳು ಧೈರ್ಯವಾಗಿ ಎದುರಿಸುವುದು.
ಧನು: ನಿರುದ್ಯೋಗಿಗಳಿಗೆ ಅವಕಾಶಗಳು ಅನಿರೀಕ್ಷಿತ ರೀತಿಯಲ್ಲಿ ಸಿಗಲಿದೆ. ವಿದ್ಯಾರ್ಥಿಗಳ ಪರಿಶ್ರಮ ಸಾರ್ಥಕವಾದೀತು. ಶ್ರೀ ದೇವರ ದರುಶನ ಭಾಗ್ಯ ಮನಸ್ಸಿಗೆ ಸಂತಸ ತರಲಿದೆ.
ಮಕರ: ಶುಭ ಮಂಗಲ ಕಾರ್ಯಗಳು ನಿರ್ವಿಘ್ನವಾಗಿ ನಡೆದೀತು. ಆರ್ಥಿಕವಾಗಿ ಶಿಸ್ತು, ಸಂಯಮದಿಂದ ಇದ್ದಲ್ಲಿ ಕಷ್ಟನಷ್ಟಗಳು ಕಡಿಮೆಯಾಗುವ ಅನುಭವ ನಿಮ್ಮದಾಗಲಿದೆ. ಮಾನಸಿಕ ಒತ್ತಡ ಹೆಚ್ಚಾಗಲಿದೆ.
ಕುಂಭ: ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ ಕಂಡು ಮನಸ್ಸಿಗೆ ಬೇಸರ ತರಿಸಲಿದೆ. ಹೆಜ್ಜೆ ಹೆಜ್ಜೆಗೂ ವಿವೇಚನೆ ಅಗತ್ಯವಿದೆ. ಉದ್ಯೋಗಿಗಳಿಗೆ ದೂರಕ್ಕೆ ವರ್ಗಾವಣೆಯ ಸಂಭವ ಕಂಡುಬರಲಿದೆ. ತಾಳ್ಮೆಯಿಂದ ಸಹಕರಿಸಿ.
ಮೀನ: ಗ್ರಹಿಸಿದ ಕೆಲಸವೊಂದು ಅನಿರೀಕ್ಷಿತವಾಗಿ ನಡೆದು ಮನಸ್ಸಿಗೆ ಸಮಾಧಾನ ತರಲಿದೆ. ವಿವಾಹಾಪೇಕ್ಷಿಗಳಿಗೆ ದಾಂಪತ್ಯದ ಯೋಗವಿದೆ. ಪತ್ರಿಕೋದ್ಯಮಿಗಳಿಗೆ ನಿರೀಕ್ಷೆಗೂ ಮೀರಿ ಯಶಸ್ಸು ತೋರಿ ಬರಲಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.