Thursday, June 19, 2025

Latest Posts

Dr.MS Mooditthaya : ಉದ್ಯೋಗ ಸೃಷ್ಟಿಯಲ್ಲಿ ಬಹಳಷ್ಟು ಯೋಜನೆಗಳು ರೂಪಿಸಬೇಕಿದೆ : ಡಾ.ಎಂ.ಎಸ್.ಮೂಡಿತ್ತಾಯ

- Advertisement -

Karkala News : ಭಾರತದ ಅಗಾಧ ಜನಸಂಖ್ಯೆಯು ಸಂಪನ್ಮೂಲ ಮತ್ತು ಸವಾಲು ಎಂದು ಎರಡು ರೀತಿಯಲ್ಲೂ ಪರಿಗಣಿಸಬಹುದಾಗಿದ್ದು ಉದ್ಯೋಗ ಸೃಷ್ಟಿಯಲ್ಲಿ ಬಹಳಷ್ಟು ಯೋಜನೆಗಳು ರೂಪಿಸಬೇಕಿದೆ. ನಮ್ಮ ರಾಷ್ಟ್ರದ ಸಂಪೂರ್ಣ ಜನಸಂಖ್ಯಾ ಗಾತ್ರವು ನಮಗೆ ಸಾಟಿಯಿಲ್ಲದ ಸಾಮರ್ಥ್ಯವನ್ನು ನೀಡುತ್ತದೆ. ನಮ್ಮ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲ ವೈವಿಧ್ಯಮಯ ಕೌಶಲ್ಯಗಳು ಮತ್ತು ಪ್ರತಿಭೆಗಳಿಂದ ತುಂಬಿರುವ ವಿಶಾಲ ಕಾರ್ಯಪಡೆಯಾಗಿದೆ ಎಂದು ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಪತಿ . ಡಾ.ಎಂ.ಎಸ್.ಮೂಡಿತ್ತಾಯ ಹೇಳಿದರು.

ಅವರು ನಿಟ್ಟೆಯ ಅಟಲ್ ಇನ್ಕ್ಯುಬೇಷನ್ ಸೆಂಟರ್‍ನ 3ನೇ ಸಂಸ್ಥಾಪನಾ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯಲ್ಲಿ ಹೂಡಿಕೆ ಮಾಡುವ ಮೂಲಕ, ನಾವು ಈ ಸಂಪನ್ಮೂಲವನ್ನು ಬಳಸಿಕೊಳ್ಳಬಹುದು ಮತ್ತು ನಮ್ಮ ಜನಸಂಖ್ಯಾ ಲಾಭಾಂಶವನ್ನು ಆರ್ಥಿಕ ಬೆಳವಣಿಗೆಗೆ ವೇಗವರ್ಧಕವಾಗಿ ಪರಿವರ್ತಿಸಬಹುದು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಳಂದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಫೌಂಡೇಶನ್‍ನ ಅಟಲ್ ಇನ್ಕ್ಯುಬೇಷನ್ ಸೆಂಟರ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದೇವಜ್ಯೋತಿ ಮೊಹಾಂತಿ ಅವರು ಸ್ಟಾರ್ಟ್ ಅಪ್‍ನ ಸವಾಲುಗಳು ಮತ್ತು ವಿಜಯಗಳನ್ನು ವಿವರಿಸಿದರು ಮತ್ತು ಕಲ್ಪನೆ, ಉತ್ಪನ್ನದ ಬೆಳವಣಿಗೆಗೆ ಎಐಸಿ ಹೇಗೆ ಬೆಂಬಲ ನೀಡಬಹುದು ಎಂಬುದನ್ನು ವಿವರಿಸಿದರು.

ವಾಧ್ವಾನಿ ಫೌಂಡೇಶನ್‍ನ ಇಇಡಿ ಹಿರಿಯ ಸಲಹೆಗಾರ ಸಂಘ ಮಿತ್ರ ಭಾಸಿನ್ ಮಾತನಾಡಿ ನವೀನ ಆಲೋಚನೆಗಳನ್ನು ಕಾರ್ಯ ಸಾಧ್ಯವಾದ ವ್ಯವಹಾರಗಳಾಗಿ ಪರಿವರ್ತಿಸುವಲ್ಲಿ ಇನ್ಕ್ಯುಬೇಷನ್ ಕೇಂದ್ರಗಳು ವಹಿಸುವ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ನಿಟ್ಟೆಯ ಅಟಲ್ ಇನ್ಕ್ಯುಬೇಷನ್ ಸೆಂಟರ್ ಕಳೆದ ಮೂರು ವರ್ಷಗಳಲ್ಲಿ ಹಲವಾರು ಯಶೋಗಾಥೆಗಳೊಂದಿಗೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇನ್ಕ್ಯುಬೇಟರ್ಗಳ ಭವಿಷ್ಯವನ್ನು ರೂಪಿಸುವ ದೃಷ್ಟಿಕೋನವನ್ನು ಜಂಟಿಯಾಗಿ ಅನುಸರಿಸುವ ವಿಶ್ವಾಸವನ್ನು ಇದು ನಮಗೆ ನೀಡಿತು ಎಂದರು.

ಈ ಸಂದರ್ಭದಲ್ಲಿ ಎಐಸಿ-ನಿಟ್ಟೆ ಮತ್ತು ವಾಧ್ವಾನಿ ಫೌಂಡೇಶನ್ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು. 4ನೇ ಕೋಹರ್ಟ್‍ನಲ್ಲಿ ಇನ್ಕ್ಯುಬೇಟ್ ಆದ ಕಂಪನಿಗಳಿಗೆ ಪ್ರಮಾಣ ಪತ್ರಗಳನ್ನು ಈ ಸಂದರ್ಭದಲ್ಲಿ ಪ್ರತಿನಿಧಿಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ನಿಟ್ಟೆ ಡಿಯು ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ, ಎನ್‍ಎಂಎಎಂಐಟಿ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್, ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‍ನ ನಿರ್ದೇಶಕ ಡಾ.ಗುರುರಾಜ್ ಕಿದಿಯೂರು ಸೇರಿದಂತೆ ಇನ್ಕ್ಯುಬೇಷನ್ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Prabhakar Kulal : ಯುವ ಜನತೆ ನಮ್ಮ ನೆಲದ ಸಂಸ್ಕೃತಿ ಅರಿತುಕೊಳ್ಳುವಂತಾಗಬೇಕು : ಪ್ರಭಾಕರ ಕುಲಾಲ್

BBMP: ಕಸ ವಿಲೇವಾರಿ ಘಟಕಕ್ಕೆ ನಾಲ್ಕು ಪ್ರವೇಶ ಮತ್ತು ನಿರ್ಗಮನ ದ್ವಾರದ ವ್ಯವಸ್ಥೆ..!

Tomato : ಟೊಮೆಟೋ ದರ ಭಾರೀ ಕುಸಿತ…! ಆತಂಕದಲ್ಲಿ ರೈತರು…!

- Advertisement -

Latest Posts

Don't Miss