Friday, July 4, 2025

Latest Posts

ಗಣೇಶೋತ್ಸವ ಆಚರಣೆಗೆ ಇನ್ನೂ ‘ವಿಘ್ನ’

- Advertisement -

ಕಡೆಗೂ ಸಾರ್ವಜನಿಕ ಗಣೇಶೋತ್ಸವ ಆಚರಣೆ ಕುರಿತಂತೆ ಅದ್ಯಾಕೋ ಸರ್ಕಾರ ಸದ್ಯಕ್ಕೆ ಯಾವ ನಿರ್ಧಾರಕ್ಕೆ ಬರೋದಕ್ಕೂ ಹಿಂದೇಟು ಹಾಕ್ತಿದೆ.ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರೊಂದಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ರೂ ಕೂಡ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.

ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಗಣೇಶೋತ್ಸವ ಆಚರಣೆಗೆ ಅನುಮತಿ ವಿಚಾರ ಸದ್ಯದ ಮಟ್ಟಿಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈ ವಿಚಾರವಾಗಿ ಇವತ್ತು ಸರ್ಕಾರ ಮಹತ್ವದ ಸಭೆ ನಡೆಸಿದ ಸಿಎಂ ಷರತ್ತುಬದ್ಧ ಅನುಮತಿ ನೀಡುತ್ತಾರೆ ಅನ್ನೋ ನಂಬಿಕೆ ಇತ್ತು. ಆದ್ರೆ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಆರ್, ಅಶೋಕ್, 3ನೇ ಅಲೆ ಬರುವ ಆತಂಕದ ನಡುವೆ ಸದ್ಯಕ್ಕೆ ಗಣೇಶೋತ್ಸವ ಆಚರಣೆ ಬಗ್ಗೆ ಯಾವ ನಿರ್ಧಾರಕ್ಕೂ ಬಂದಿಲ್ಲ. ರಾಜ್ಯದಲ್ಲಿ ಒಟ್ಟು ಸುಮಾರು 30 ಕಡೆ ಅತಿ ದೊಡ್ಡ ಪ್ರಮಾಣದಲ್ಲಿ ಗಣೇಶೋತ್ಸವ ನಡೆಯುತ್ತೆ. ಹೀಗಾಗಿ ಆಯಾ ಜಿಲ್ಲೆಗಳ ಎಸ್ಪಿ ಮತ್ತು ಡಿಸಿಗಳು ಸಂಘಟಕರೊಂದಿಗೆ ಚರ್ಚಿಸಲು ತಿಳಿಸಲಾಗಿದೆ. ಬಳಿಕ ಸೆ.05ರಂದು ಎಲ್ಲಾ ಮಾಹಿತಿ ಪಡೆದು ತಜ್ಞರೊಂದಿಗೆ ಸಿಎಂ ಸಭೆ ನಡೆಸಿ ಒಳ್ಳೆ ನಿರ್ಧಾರ ತೆಗೆದುಕೊಳ್ತಾರೆ ಅಂತ ಅಶೋಕ್ ಮಾಹಿತಿ ನೀಡಿದ್ರು.

- Advertisement -

Latest Posts

Don't Miss