ವಿಜಯಪುರ : ಪ್ರಕಾಶ್ ರೈ ಹಂದಿ ಇದ್ದಂತೆ, ಯಾವೊಬ್ಬ ನಟನೂ ಕಾವೇರಿ ವಿಚಾರವಾಗಿ ಇದುವರೆಗೂ ಹೋರಾಟ ಮಾಡಿಲ್ಲ ಅವರ ಸಿನಿಮಾ ಬಹಿಷ್ಕರಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ವಿಜಯಪುರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಹೋರಾಟ ಮಾಡಲು ಇದುವರೆಗೂ ಕನ್ನಡದ ಯಾವೊಬ್ಬ ನಟ ನಟಿಯರೂ ಬಂದಿಲ್ಲ, ಅವರನ್ನೆಲ್ಲಾ ಅವರ ಮನೆಗೆ ಹೋಗಿ ಆರತಿ ಬೆಳಗಿ ಕರೆಯಬೇಕಾ ಎಂದು ಪ್ರಶ್ನಿಸಿದರು.
ಸಿನಿಮಾಗಳನ್ನು ಮಾಡಿ ಹಣ ಮಾಡಿರುವ ನಟ,ನಟಿಯರು ಜನರ ಪರವಾಗಿ ಹೊರಗೆ ಬಂದು ಹೋರಾಟ ಮಾಡಲಿ, ನಟ ದರ್ಶನ್, ಯಶ್ ಎಲ್ಲರೂ ಕಾವೇರಿ ಭಾಗದವರೇ ಆಗಿದ್ದಾರೆ. ಇಲ್ಲಿನ ನಟರೂ ತಾವೇ ಸ್ವಯಂ ಪ್ರೇರಿತರಾಗಿ ಕಾವೇರಿ ಹೋರಾಟಕ್ಕೆ ಮುಂದಾಗಬೇಕು, ಯಾರು ಭಾಗವಹಿಸುವುದಿಲ್ಲವೋ ಅವರ ಸಿನಿಮಾಗಳನ್ನು ಎಲ್ಲರೂ ಬಹಿಷ್ಕರಿಸಬೇಕು ಎಂದರು.
Gadag ; ಬರಪಿಡಿತ ಪ್ರದೇಶದಿಂದ ಕೈ ಬಿಟ್ಟ ಹಿನ್ನೆಲೆ ಮುಂಡರಗಿಯಲ್ಲಿ ಪ್ರತಿಭಟನೆ..!
Bhadra dam: ಭದ್ರಾ ಆಣೆಕಟ್ಟಿನಿಂದ ನೀರು ಬಿಡಲು ಮೀನಾಮೇಶ; ದಾವಣಗೆರೆ ರೈತರಿಂದ ಬಂದ್ ಗೆ ಕರೆ