Friday, June 20, 2025

Latest Posts

ಕೆ.ಜಿ.ಎಫ್ ತಾತನ ಆರೋಗ್ಯದಲ್ಲಿ ಏರುಪೇರು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

- Advertisement -

ಬೆಂಗಳೂರು: ಕೆ.ಜಿ.ಎಫ್ ಚಿತ್ರ ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಚಿತ್ರ. ಕೆ.ಜಿ. ಎಫ್ ತಾತಾ ಅಂತಲೇ ಫೇಮಸ್ ಆಗಿದ್ದ ನಟ ಕೃಷ್ಣ ಜಿ. ರಾವ್ ಅವರು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆ.ಜಿ. ಎಫ್1 ,ಕೆ.ಜಿ. ಎಫ್2 ಎರಡೂ ಸಿನಿಮಾಗಳಲ್ಲಿ ನಟಿಸಿದ್ದ ಇವರು ಕೆ.ಜಿ.ಎಫ್. ತಾತ ಎಂದು ಜನಪ್ರಿಯರಾಗಿದ್ದರು. ಕೆ.ಜಿ.ಎಫ್ ಚಿತ್ರದಲ್ಲಿ ಅಭಿನಯಿಸಿದ ಪ್ರತಿಯೊಬ್ಬ ಕಲಾವಿದರಿಗೂ ಪ್ರಾಮುಖ್ಯತೆ ಕೊಟ್ಟಿದ್ದು , ಚಿತ್ರದಲ್ಲಿನ ಕಲಾವಿದರನ್ನು ಜನರು ಈಗಲೂ ಅದೇ ಪಾತ್ರದಿಂದ ಗುರುತಿಸುತ್ತಾರೆ. ಅಂಥದ್ದೇ ಒಂದು ಪಾತ್ರ ಕೆ.ಜಿ.ಎಫ್. ನ “ತಾತ “.  ನಟ ಕೃಷ್ಣ ಜಿ ರಾವ್ ಅವರ ಈ ಪಾತ್ರ ಎಷ್ಟರ ಮಟ್ಟಿಗೆ ಸದ್ದು ಮಾಡಿತ್ತು ಅಂದರೆ ತಾತ ಈ ವಯಸ್ಸಿನಲ್ಲಿ ಹೀರೋ ಕೂಡ ಆಗಿದ್ದಾರೆ ನಂತರ ನ್ಯಾನೋ ನಾರಾಯಣಪ್ಪ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಕೆಜಿಎಫ್ ಬಿಡುಗಡೆಯಾದ ನಂತರ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಮೈಸೂರಿನಲ್ಲಿ ಡಿಸೆಂಬರ್ 10ಕ್ಕೆ ಡಿಬಾಸ್ ‘ಕ್ರಾಂತಿ’ಗೆ ಭರ್ಜರಿ ಸಿದ್ಧತೆ

ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ವಿನಾಯಕ ಖಾಸಗಿ ಆಸ್ಪತ್ರೆಗೆ ನಟ ಕೃಷ್ಣ ಜಿ. ರಾವ್ ಅವರನ್ನು ದಾಖಲಿಸಿ, ಐ.ಸಿ. ಯು. ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಬಂಧಿಕರ ಮನೆಗೆ ಹೋಗಿದ್ದ ಕೃಷ್ಣ ಜಿ. ರಾವ್ ಅವರನ್ನ ಸುಸ್ತಾದ ಕಾರಣ ಮಧ್ಯರಾತ್ರಿ ಆಸ್ಪತ್ರೆಗೆ ‌ದಾಖಲು ಮಾಡಲಾಗಿತ್ತು. ಆದಷ್ಟು ಬೇಗ ತಾತಾ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಯಾವುದೇ ವೆಚ್ಚವಿಲ್ಲದೆ ಕರಿಬೇವಿನಿಂದ ಕೂದಲಿನ ಸಮಸ್ಯೆಗಳಿಗೆ ಪರಿಹಾರ..!

ಸಪೋಟಾ ಹಣ್ಣಿನಿಂದ ತೂಕ ಇಳಿಸಿಕೊಳ್ಳುವುದಲ್ಲದೆ.. ಈ ಆರೋಗ್ಯ ಸಮಸ್ಯೆಗಳಿಗೆ ಚೆಕ್..!

- Advertisement -

Latest Posts

Don't Miss