ಕೋಲಾರ: ಕಚ್ಚಾಡುವ ಕಾಂಗ್ರೆಸ್ ಹಾಗೂ ಹೊಡೆದಾಡುವ ಬಿಜೆಪಿ ಮದ್ಯ ಕೋಲಾರ ಕ್ಷೇತ್ರದ ಜನತೆಯನ್ನು ಗೌರವ ಯುತವಾಗಿ ನಡೆಸುಕೊಂಡು ಹೋಗುವ ಜನಸೇವಕ ಬೇಕಾಗಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಕೋಲಾರದ ಅಭಿವೃದ್ಧಿಯನ್ನು ಮರೆತಿದ್ದಾರೆ. ಕೋಲಾರದ ಸಮಗ್ರ ಅಭಿವೃದ್ಧಿ ಗೆ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರಬೇಕಾಗಿದೆ, ಜನರ ನಾಡಿಮಿಡಿತ ಅರಿತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಕೋಲಾರಕ್ಕೆ ಸರಳ ಸಜ್ಜನಿಕೆ ವ್ಯೆಕ್ತಿ ಬೇಕು ಎಂದು ಅಳೆದು ತೂಗಿ ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ , ಜನರ ಸೇವೆ ಮಾಡಲು ಕೋಲಾರ ಜನತೆ ನನಗೆ ಅವಕಾಶ ಮಾಡಿಕೊಡಬೇಕು ಎಂದು ಕೋಲಾರದ ಜೆಡಿಎಸ್ ಅಭ್ಯರ್ಥಿ ಸಿ ಎಮ್ ಆರ್ ಶ್ರೀನಾಥ್ ಮನವಿ ಮಾಡಿದ್ದಾರೆ.
ಚೀನಾದಲ್ಲಿ ಹೆಚ್ಚಿದ ಕೊರೋನಾ ಪ್ರಕರಣಗಳು : ರಾಜ್ಯಗಳಿಗೆ ‘ಕೋವಿಡ್ ಪರಿಶೀಲನಾಪಟ್ಟಿ’ ಕಳುಹಿಸಿದ ಕೇಂದ್ರ
ಕಳೆದ 15 ವರ್ಷಗಳಿಂದ ಕೋಲಾರ ವಿದಾನಸಭಾಕ್ಷೇತ್ರ ವ್ಯಾಪಾರೀಕರಣ ರಾಜಕಾರಣವಾಗಿದೆ ಇದಕ್ಕೆ ಕಡಿವಾಣ ಹಾಕಬೇಕಾದರೆ ಕ್ಷೇತ್ರದ ಜನರಿಗೆ ಬೇಕಾಗಿರುವುದು ಸರಳ ಸಜ್ಜನಿಕೆ ಹಾಗೂ ಗೌರವಯುತವಾಗಿ ನಡೆದುಕೊಳ್ಳಬೇಕಾದ ಜನನಾಯಕ, ಈ ನಿಟ್ಟಿನಲ್ಲಿ ಕುಮಾರಸ್ವಾಮಿ ರವರು ನನ್ನನ್ನು ಗುರುತಿಸಿ ಅಬ್ಯರ್ಥಿಯಾಗಿ ಆಯ್ಕೆಮಾಡಿದ್ದಾರೆ, ಕೋಲಾರಕ್ಷೇತ್ರ ಪ್ರಬುದ್ದರು ಹಾಗೂ ರೈತ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಷೇತ್ರ , ಕಳೆದ ಚುನಾವಣೆಯಲ್ಲಿ ಹಣದ ಆಮಿಷ ಮತ್ತು ಕೆಲ ನಡವಳಿಕೆಗಳಿಂದ ಮರಳು ಮಾಡಿ ನಾಯಕರು ಮತಗಳನ್ನು ಪಡೆದಿದ್ದರು ಆದರೆ ಈ ಬಾರಿ ಜನರಿಗೆ ಅರಿವಾಗಿದೆ ಅದನ್ನು ಸರಿಪಡಿಸಿಕೊಳ್ಳಲು ಮತದಾರರು ಕಾಯುತ್ತಿದ್ದಾರೆ.
ಹೆಣ್ಣು ಮಕ್ಕಳ ಆತ್ಮರಕ್ಷಣೆಗೆ ಅಲ್ಪಾವಧಿ ಕೋರ್ಸುಗಳ ಪ್ರಾರಂಭಕ್ಕೆ ಚಿಂತನೆ : ಸಿಎಂ ಬಸವರಾಜ ಬೊಮ್ಮಾಯಿ
ಕೋಲಾರಕ್ಕೆ ಪ್ರಮುಖವಾಗಿ ಬೇಕಾಗಿರುವುದು ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮದ ಅಭಿವೃದ್ಧಿ ಹಿಂದಿನ ಜನಪ್ರತಿನಿಧಿಗಳು ಇವುಗಳನ್ನು ಕಡೆಗಣಿಸಿದ್ದಾರೆ, ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಜೆಡಿಎಸ್ ನ ಪ್ರಮುಖ ಉದ್ದೇಶವಾಗಿದೆ ಜನರು ಆಶಿರ್ವಾದ ನೀಡಿದರೆ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತೇನೆ , ಕೋಲಾರದಲ್ಲಿ ರಾಷ್ಟ್ರೀಯ ಪಕ್ಷ ಹಾಗೂ ಪಕ್ಷೇತರವಾಗಿ ಯಾರೇ ಅಭ್ಯರ್ಥಿ ಯಾದರೂ ಅಂಜಿಕೆಇಲ್ಲ ನನ್ನ ಮುಖ್ಯ ಗುರಿ ಹಾಗು ನಿಲುವು ಗೆಲ್ಲುವುದು ಮಾತ್ರ ಆಗಿದೆ ಇದಕ್ಕೆ ನಮ್ಮ ಪಕ್ಷದ ಅಜಂಡಾದ ಮೂಲಕ ಕೆಲಸಮಾಡುತ್ತೇನೆ, ಬಲಿಷ್ಠ ಕೋಲಾರದ ನಿರ್ಮಾಣಕ್ಕೆ ಜೆಡಿಎಸ್ ಬೆಂಬಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಕೃಷ್ಣ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜ. 2ರಿಂದ ಶಾಹಿ ಈದ್ಗಾ ಸಮೀಕ್ಷೆಗೆ ಕೋರ್ಟ್ ಆದೇಶ
ಹಾಲಿ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವುದು ಜೆಡಿಎಸ್ ಪಕ್ಷಕ್ಕೆ ಯವುದೇ ತೊಂದರೆ ಇಲ್ಲ ಜೆಡಿಎಸ್ ನ ಬಲಿಷ್ಠ ಕಾರ್ಯಕರ್ತರ ನಿರಂತರ ಶ್ರಮದಿಂದ ಶ್ರೀನಿವಾಸಗೌಡರು ಗೆದ್ದರು ಆದರೆ ಜಿಲ್ಲೆಯಲ್ಲಿ ಇರುವ ಕೆಲವು ಮೇದಾವಿಗಳು ಎನಿಸಿಕೊಂಡವರು ಅವರ ದಿಕ್ಕುತಪ್ಪಿಸಿ ಕಾಂಗ್ರೆಸ್ ಕಡೆಗೆ ಸೇರ್ಪಡೆ ಮಾಡಿಸಿಕೊಂಡರು ಇದರಿಂದ ಜೆಡಿಎಸ್ ಪಕ್ಷಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ , ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಮೂಲ ಉದ್ದೇಶಗಳನ್ನು ಮರೆತಿದ್ದಾರೆ ಅಲ್ಲಿರುವ ಈಗಿನ ನಾಯಕರು ಹೊರಗಡೆಯಿಂದ ಬಂದವರಾಗಿದ್ದಾರೆ ಇವರ ಮದ್ಯ ಜನರು ನನಗೆ ಈಬಾರಿ ಆಶಿರ್ವಾದ ನೀಡಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಸಿ ಎಮ್ ಆರ್ ಶ್ರೀನಾಥ್ ತಿಳಿಸಿದ್ದಾರೆ.