ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು. ಕನ್ನಡ ಸಿನಿ ರಂಗಕ್ಕೆ ಹಲವು ಸಿನಿಮಾಗಳನ್ನ ನೀಡಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇವರು ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ರು ಬಹಳ ಹೆಸರು ಗಳಿಸಿದ್ದು ಮಾತ್ರ ‘ಟಗರು’ ಸಿನಿಮಾದ ಮೂಲಕ. ಈ ಸಿನಿಮಾದಲ್ಲಿ ‘ಡಾಲಿ’ ಎಂಬ ಹೆಸರಿನಿಂದ ನಟ ಧನಂಜಯ ಜನಪ್ರಿಯರಾದರು. ಅದಷ್ಟೇ ಅಲ್ಲದೆ ‘ಪುಷ್ಪ’ ಸಿನಿಮಾದ ಮೂಲಕ ದಕ್ಷಿಣ ಭಾರತಕ್ಕೂ ಕೂಡ ಚಿರಪರಿಚಿತರಾದರು. ಇನ್ನು ‘ಬಡವ ರಾಸ್ಕಲ್’ ಸಿನಿಮಾಕ್ಕೆ ನಿರ್ಮಾಪಕರಾಗಿ ಕೆಲಸ ಮಾಡಿ ಹೆಸರು ಪಡೆದರು. ಇಷ್ಟೆಲ್ಲ ಕೆಲಸದ ನಡುವೆಯೂ ಸಹ ನಟ ಡಾಲಿ ಹೊಸಬರ ಚಿತ್ರಕ್ಕೆ ಸಾಥ್ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಹೊಸಬರ ಚಿತ್ರಗಳು ಬರ್ತಾನೆ ಇವೆ. ಈ ಸಾಲಿಗೆ ಸೇರಿದವರಲ್ಲಿ ನವೀನ ಶಂಕರ್ ಕೂಡ ಒಬ್ಬರು. ‘ಗುಳ್ಟು’ ಸಿನಿಮಾದಿಂದ ಜನಪ್ರಿಯತೆ ಪಡೆದುಕೊಂಡ ನವೀನ್ ಶಂಕರ್. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರು ಮತ್ತೊಂದು ಸಿನಿಮಾವನ್ನು ಮುಗಿಸಿದ್ದಾರೆ. ಈ ಸಿನಿಮಾಕ್ಕೆ ‘ಕ್ಷೇತ್ರಪತಿ’ ಎಂದು ಹೆಸರಿಡಲಾಗಿದ್ದು, ನಟ ಡಾಲಿ ಧನಂಜಯ್ ಫಸ್ಟ್ ಲುಕ್ ಲಾಂಚ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ನಂತರ ಮಾತನಾಡಿದ ನಟ ಧನಂಜಯ್, ಜಯನಗರ 4ನೇ ಬ್ಲಾಕ್ ಕಿರುಚಿತ್ರ ಮಾಡುತ್ತಿದ್ದ ಸಮಯದಲ್ಲಿ ನವೀನ್ ಮತ್ತು ನಾನು ಭೇಟಿಯಾಗುತ್ತಿದ್ದೆವು. ಯಾವುದೇ ಹಿನ್ನೆಲೆ ಇಲ್ಲದೆ ನವೀನ್ ಇಷ್ಟು ಬೆಳದಿರುವುದು ನಿಜಕ್ಕೂ ಹೆಮ್ಮೆ. ಈ ಚಿತ್ರದಲ್ಲಿ ಬಸವ ಎಂಬ ಪಾತ್ರವನ್ನು ನವೀನ್ ಮಾಡಿದ್ದಾರೆ. ಈ ಬಸವನಿಗೆ ನಮ್ಮ ಕ್ರಾಂತಿಕಾರಿ ಬಸವಣ್ಣನವರು ಆದರ್ಶವಾಗಲಿ. ಈ ಕ್ಷೇತ್ರಪತಿ ಚಿತ್ರ ಜಯಭೇರಿ ಬಾರಿಸಲಿ ಎಂದು ಶುಭ ಹಾರೈಸಿದರು.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ