Saturday, July 27, 2024

Latest Posts

ಮಾಜಿ ಸಚಿವ ವಿನಯ್ ಕುಲಕರ್ಣಿ ಸ್ವಾಗತಕ್ಕೆ ಹಿಂಡಲಗಾ ಜೈಲಿಗೆ ಆಗಮಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್.

- Advertisement -

www.karnatakatv.net : ಬೆಳಗಾವಿ: ಧಾರವಾಡ ಮಾಜಿ ಸಚಿವ ವಿನಯ ಕುಲಕರ್ಣಿ  ಯೊಗೇಶಗೌಡ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬರುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಸ್ವಾಗತ ಮಾಡಲು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಹಿಂಡಲಗಾ ಜೈಲಿಗೆ ದೌಡಾಯಿಸಿದ್ದಾರೆ. 

ಇವತ್ತು ವಿನಯ ಕುಲಕರ್ಣಿ ಅವರ ಹಿಂಡಲಗಾ ಜೈಲಿನಿಂದ ಬಿಡುಗಡೆ ಇದ್ದು ಸ್ವಾಗತ ಮಾಡಲು ಆಗಮಿಸಿದ ವೇಳೆ ಹಿಂಡಲಗಾ ಜೈಲಿನ ಬಳಿ ಮಾದ್ಯಮ ಜೊತೆ ಮಾತನಾಡಿದ ಅವರು, ನಮ್ಮ ಹಿರಿಯ ಸಹೊದರ ರಕ್ಷಾ ಬಂದನನದ ಶುಭ ಸಂದರ್ಭದಲ್ಲಿ ಜೈಲಿನಿಂದ ಹೊರಗಡೆ ಬರುತ್ತಿದ್ದಾರೆ.‌ ಸಹೋದರ ಹೊರಗಡೆ ಬರುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಬರ ಮಾಡಲು ಬಂದದ್ದೇನೆ.‌ಅವರಿಗೆ  ದೈರ್ಯ ತುಂಬವ ಕೆಲಸ ಮಾಡುತ್ತೇನೆ.‌

ರಕ್ಷಾ ಬಂಧನದ ಸಂದರ್ಭದಲ್ಲಿ ಅಣ್ಣಾ ಹೊರಗಡೆ ಬರುತ್ತಿರುವ ಹಿನ್ನೆಲೆಯಲ್ಲಿ ತಂಗಿಯಾಗಿ ಬರ ಮಾಡಲು ಬಂದಿದ್ದೇನೆ. ನಾಳೆ ರಕ್ಷಾ ಬಂಧನ  ಇದೆ ಆದಕಾರಣ ನಾನು ತುಂಬಾ ಯಮೋಷನಲ್ ಆಗಿದ್ದೇನೆ.‌ ರಾಜಕೀಯ ಎನು ಮಾತನಾಡಲ್ಲ.‌ ಅವರ ಹೊರ ಬಂದರೆ ನಮಗೆ ಶಕ್ತಿ ಬಂದಂತೆ ಎಂದು ತಿಳಿಸಿದರು. ‌ಇನ್ನೆನು ಕೆಲವೇ ಕ್ಷಣಗಳಲ್ಲಿ ಬಿಡುಗಡೆ ಆಗಲಿರುವ ವಿನಯ ಕುಲಕರ್ಣಿ ಜೈಲಿನ ಮುಂದೆ ಜಮಾಯಿಸುತ್ತಿರುವ ಅಭಿಮಾನಿಗಳು.

ನಾಗೇಶ ಕುಂಬಳಿ ಕರ್ನಾಟಕ ಟಿವಿ ಬೆಳಗಾವಿ

- Advertisement -

Latest Posts

Don't Miss