Sunday, June 1, 2025

Latest Posts

ವಿಘ್ನ ವಿನಾಯಕನಿಗೂ ತಪ್ಪಲಿಲ್ಲಾ ಅತಿವೃಷ್ಟಿ ಸಂಕಟ

- Advertisement -

ಬೆಳಗಾವಿ: ಅತಿವೃಷ್ಟಿ ಮಹಾಮಳೆ ಸಂಕಟ ವಿಘ್ನ ನಿವಾರಕ ಗಣೇಶನಿಗೂ ತಲುಪಿದೆ, ಮೊದಲು ಕರೊನಾ ಈಗ ಮಳೆ ಪ್ರವಾಹ ಹೀಗೆ ಇದೆಲ್ಲದರ ಸೈಡ್ ಎಫೆಕ್ಟ್ ಗಣೇಶ ಚತುರ್ಥಿಗೆ ಎದುರಾಗಿದೆ,ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ ಆದ್ರೆ ಈ ವರ್ಷ ಕರೊನಾ ಕರಿ ನೆರಳಿನ ಜೊತೆ ಮಹಮಳೆಯ ಪ್ರವಾಹ ಕೂಡ ಬೆಳಗಾವಿ ಗಣೇಶ ಹಬ್ಬಕ್ಕೆ ಕಂಟಕವಾಗಿದೆ.

ಹಲವು ವರ್ಷಗಳಿಂದ ಬೆಳಗಾವಿ ಜಿಲ್ಲೆಯ ಬಹುತೇಕ ಜನರು ಮಹಾರಾಷ್ಟ್ರದ ಪೆನ್ ಪನವೇಲ್ ಪಟ್ಟಣದಿಂದ ಗಣೇಶ ಮೂರ್ತಿಗಳನ್ನ ಆಮದು ಮಾಡಿಕೊಂಡು ಇಲ್ಲಿ ಸ್ಥಳೀಯ ಮೂರ್ತಿ ತಯಾರಕರು ಮಾರಾಟ ಮಾಡುತ್ತಿದ್ದರು, ಪನೆವೆಲ್ ಗಣಪತಿಯನ್ನ ಮನೆಯಲ್ಲಿ ಪ್ರತಿಷ್ಠಾನ ಮಾಡುವುದು ಇಲ್ಲಿನ ಒಂದು ಪ್ರತೀತಿ ಆಗಿದೆ.

ಪ್ರವಾಹ ದಿಂದ ಪನೆವೆಲ್ ನಲ್ಲಿ ತಯಾರಿಸಿದ್ದ ಗಣೇಶ್ ಮೂರ್ತಿಗಳು ಹಾಳಾಗಿ ಹೋಗಿವೆ ಎಂದು ಹೇಳಾಗುತ್ತಿದೆ, ಈ ಬಾರಿ ನಿರೀಕ್ಷೆ ಮಟ್ಟದಲ್ಲಿ ಗಣೇಶ ಮೂರ್ತಿಗಳು ಮಹಾರಾಷ್ಟ್ರ ದಿಂದ ಬಂದಿಲ್ಲ, ಅಲ್ಲದೆ ಕೆಲ ಮೂರ್ತಿಗಳು ಬಂದಿದ್ದು ಬೆಲೆ ಕೂಡ ಶೇಕಡಾ40 ರಷ್ಟು ಹೆಚ್ಚು ಮಾಡಲಾಗಿದೆ,

ಸ್ಥಳೀಯ ಮಾರಾಟಗಾರ ಸಾಗರ ಕರೇಕರ್ ಹೇಳುವಂತೆ ಈ ಬಾರಿ ಮಣ್ಣಿನ ಧಾರ್ಮಿಕ ಗಣೇಶಮೂರ್ತಿಗಳು ಸಿಕ್ಕಿಲ್ಲಾ ಅಲ್ಲದೆ ರೇಟ್ ಕೂಡ ಹೆಚ್ಚಾಗಿದೆ ಇದೆಲ್ಲವೂ ಪ್ರವಾಹ ಹಾಗೂ ಕರೊನಾದಿಂದ ಆಗಿದೆ ಎನ್ನುತ್ತಾರೆ, ಇನ್ನು ಜಿಲ್ಲಾಡಳಿತ ಸಾರ್ವಜನಿಕ ಗಣೇಶ ಪ್ರತಿಷ್ಠಾನ ನಿಷೇಧ ಮಾಡಿದ್ದು ಅನೇಕ ನಿಯಮಗಳನ್ನು ಪಾಲಿಸುವಂತೆ ಕೂಡ ಸೂಚನೆ ನೀಡಿದ್ದಾರೆ.

ನಾಗೇಶ್, ಕರ್ನಾಟಕ ಟಿವಿ, ಬೆಳಗಾವಿ

- Advertisement -

Latest Posts

Don't Miss