Spiritual: ಮಹಾಲಯ ಮಾಸ ಶುರುವಾಗಿದೆ. ಈ ದಿನಗಳಲ್ಲಿ ನಾವು ನಮ್ಮ ಪೂರ್ವಜರ ಶ್ರಾದ್ಧ ಕಾರ್ಯವನ್ನು ಮಾಡಲು ಉತ್ತಮ ಸಮಯ. ಅವರು ತೀರಿಹೋದ ದಿನಗಳಲ್ಲಿ ಶ್ರಾದ್ಧ ಕಾರ್ಯ ಮಾಡಲಾಗದಿದ್ದಲ್ಲಿ, ಮಹಾಲಯ ಮಾಸದಲ್ಲಿ ಶ್ರಾದ್ಧ ಕಾರ್ಯ ಮಾಡಲು ಅವಕಾಶವಿದೆ. ಹಾಗಾದ್ರೆ ಶ್ರಾದ್ಧವನ್ನು ಹೇಗೆ ಮಾಡಬೇಕು ಎಂದು ತಿಳಿಯೋಣ ಬನ್ನಿ..
ಹಿಂದೂ ಧರ್ಮದಲ್ಲಿ ಹಲವು ರೀತಿಯಲ್ಲಿ ಶ್ರಾದ್ಧ ಕಾರ್ಯ ಮಾಡಲಾಗುತ್ತದೆ. ಕೆಲವರು ಅನ್ನದ ಉಂಡೆಗಳನ್ನ ಮಾಡಿ, ಪಿಂಡ ಪ್ರಧಾನ ಮಾಡುತ್ತಾರೆ. ಈ ವೇಳೆ ಮನೆಯಲ್ಲಿ ಭೋಜನ ಮಾಡಿ, ಅದನ್ನು ದೇವರಿಗೆ, ಪೂರ್ವಜರಿಗೆ ಅರ್ಪಿಸಿ, ಕಾಗೆ, ದನಗಳಿಗೆ ನೀಡುತ್ತಾರೆ. ಬ್ರಾಹ್ಮಣರಿಗೆ ಊಟ ಹಾಕುತ್ತಾರೆ.
ಇನ್ನು ಕೆಲವರು ಯೋಗ್ಯರಿಗೆ ದಕ್ಷಿಣೆ ನೀಡುತ್ತಾರೆ. ಮತ್ತೆ ಕೆಲವರು ದಕ್ಷಿಣ ದಿಕ್ಕಿಗೆ ನಿಂತು ಮರಣ ಹೊಂದಿದ ಪಿತೃಗಳನ್ನು ನೆನೆದು ಬಾಯಿ ಬಡಿದುಕೊಳ್ಳುತ್ತಾರೆ. ಇವೆಲ್ಲವೂ ಪಿತೃಗಳನ್ನು ನೆನೆದು, ಶ್ರಾದ್ಧ ಮಾಡುವ ರೀತಿಯಾಗಿದೆ.
ಸರಿಯಾದ ರೀತಿಯಲ್ಲಿ ಶ್ರಾದ್ಧಕಾರ್ಯ ಮಾಡಿದರೆ, ಅದರಿಂದ ನಿಮ್ಮ ಪೂರ್ವಜರು ಸಂತ್ರಪ್ತರಾದರೆ, ನಿಮಗೆ ಅಭಿವೃದ್ಧಿಯಾಗಲಿ, ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿ, ನಿಮ್ಮ ಜೀವನದಲ್ಲಿ ನೆಮ್ಮದಿ ಇರಲಿ, ಮಕ್ಕಳಿಗೆ ವಿದ್ಯಾ ಬುದ್ಧಿ ಚೆನ್ನಾಗಿ ಬರಲಿ ಎಂದು ಆಶೀರ್ವಾದ ಮಾಡುತ್ತಾರೆ. ಈ ಆಶೀರ್ವಾದವೇ ನಿಮ್ಮನ್ನು ಸದಾಕಾಲ ಕಾಪಾಡುತ್ತದೆ. ಹಾಾಗಾಗಿ ಮರಿಯದೇ, ಮರಣ ಹೊಂದಿದ ಪೂ್ರ್ವಜರಿಗೆ ಶ್ರಾದ್ಧ ಕಾರ್ಯ ಮಾಡಬೇಕು ಎಂದು ಹೇಳಲಾಗುತ್ತದೆ.