ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನುಇಂದು ಭೇಟಿಯಾದರು. ವರದಿಗಳ ಪ್ರಕಾರ ಬ್ಯಾನರ್ಜಿ ಅವರು ರಾಜ್ಯ ಅಸೆಂಬ್ಲಿಯಲ್ಲಿ ಅಧಿಕಾರಿಯನ್ನು ತಮ್ಮಕೋಣೆಗೆ ಆಹ್ವಾನಿಸಿದ್ದಾರೆ. ಶಾಸಕರಾದ ಅಗ್ನಿಮಿತ್ರ ಪಾಲ್, ಅಶೋಕ್ ಕುಮಾರ್ ಲಾಹಿರಿ ಮತ್ತು ಮನೋಜ್ ತಿಗ್ಗಾ ಅಧಿಕಾರಿ ಜೊತೆಗದ್ದರು. ಶುಕ್ರವಾರ ವಿಧಾನಸಭೆ ಆವರಣದಲ್ಲಿ ಪ್ಲಾಟಿನಂ ಜುಬಿಲಿ ಸ್ಮಾರಕ ಭವನ ಉದ್ಘಾಟನೆಗೂ ಮುನ್ನ ಇಬ್ಬರು ನಾಯಕರ ಸಭೆ ನಡೆದಿದೆ.
ಅನುಮತಿ ಇಲ್ಲದೆ ಅಮಿತಾಬ್ ಬಚ್ಚನ್ ಧ್ವನಿ, ಚಿತ್ರ ಬಳಸುವಂತಿಲ್ಲ : ಹೈಕೋರ್ಟ್ ತೀರ್ಪು
‘ನಾನು ಇಂದು ಸಿಎಂ ಮಮತಾ ಬ್ಯಾನರ್ಜಿ ಅವರೊಂದಿಗೆ 3-4 ನಿಮಿಷಗಳ ಸುದೀರ್ಘ ಭೇಟಿಯನ್ನು ಮಾಡಿದ್ದೇನೆ. ನಂದಿಗ್ರಾಮದಿಂದ ಸ್ಪರ್ಧಿಸುವುದು ಮಮತಾಜಿ ವಿರುದ್ಧದ ವೈಯಕ್ತಿಕ ಹೋರಾಟವಲ್ಲ, ಆದರೆ ರಾಜಕೀಯ ಮತ್ತು ಸೈದ್ಧಾಂತಿಕ ಹೋರಾಟ’ ಎಂದು ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.