Friday, October 18, 2024

Latest Posts

ಮಂಡ್ಯ ಜಿಲ್ಲೆಯು ನಾಯಕತ್ವ ಗುಣ ಬೆಳೆಸುತ್ತದೆ: ವಿ.ಆರ್. ಶೈಲಜ

- Advertisement -

Mandya news:

ಮಂಡ್ಯ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ವೃತ್ತಿ ಜೀವನದಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಉತ್ಸಹವನ್ನು ನೀಡಿದೆ. ಮಂಡ್ಯ ಜಿಲ್ಲೆಯು ನಾಯಕತ್ವ ಗುಣ ಬೆಳೆಸುತ್ತದೆ ಎಂದು ನಿಕಟಪೂರ್ವ ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜ ಅವರು ತಿಳಿಸಿದರು.

ನಗರದ ಕರ್ನಾಟಕ ಸಂಘದಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘ ಬೆಂಗಳೂರು, ಕಂದಾಯ ಇಲಾಖಾ ದ್ವಿ.ದ.ಸ.ಮತ್ತು ಲಿ. ನೌ.ಸಂಘ ದಾವಣಗೆರೆ, ಗ್ರಾಮಲೆಕ್ಕಾದಿಗಳ ಸಂಘ, ಗ್ರಾಮ ಸಹಾಯಕರ ಸಂಘ, ಜಿಲ್ಲಾ ಘಟಕ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆ ಇಂದಿನ ಕಾರ್ಯಕ್ರಮ ನನಗೆ ಇನ್ನಷ್ಟು  ಕೆಲಸ ಮಾಡಲು ಪ್ರೋತ್ಸಾಹ ನೀಡಿದೆ. ಮಂಡ್ಯ ಜಿಲ್ಲೆ ಹೃದಯಕ್ಕೆ ಹತ್ತಿರವಾದ ಜಿಲ್ಲೆ.ನನ್ನ ವೃತ್ತಿ ಜೀವನವನ್ನು ಮಂಡ್ಯದ ಬೆಸಗರಹಳ್ಳಿಯ ಪ್ರೌಢಶಾಲೆಯ ಶಿಕ್ಷಕಿಯಾಗಿ ಆರಂಭಿಸಿದೆ ಎಂದರು.ಜಿಲ್ಲೆಯಲ್ಲಿ ಉತ್ಸವದ ಕಾರ್ಯಗಳು ರೈತರ ಪರ, ಚುನಾವಣೆ, ದಸರಾ,ಕಂದಾಯ ಅದಾಲತ್, ಪಿ.ಎಂ. ಕಿಸಾನ್ ಯೋಜನೆಗಳು ಹೀಗೆ ಅನೇಕ ಕೆಲಸ ಕಾರ್ಯಗಳನ್ನು ಮಾಡಿದಂತಹ ಅನುಭವಗಳು ಹಾಗೂ ಮಂಡ್ಯ ಜಿಲ್ಲೆಯಲ್ಲಿ ತಹಶೀಲ್ದಾರ್ ,ಉಪವಿಭಾಗಾಧಿಕಾರಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಸಂತಸ ತಂದಿದೆ ಎಂದರು.

ಮಂಡ್ಯ ಜಿಲ್ಲೆಯ 5 ವರ್ಷ ಸೇವೆಯ ಪಯಣವನ್ನು ಮರೆಯಲು ಸಾಧ್ಯವಿಲ್ಲ. ಇದಕ್ಕೆ ಮೂಲ ಕಾರಣ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಸಹೋದ್ಯೋಗಿಗಳಾಗಿ ಸಹಕರಿಸಿದ ಉಪ ತಹಶೀಲ್ದಾರರು, ತಹಶೀಲ್ದಾರರು,ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಕಚೇರಿಯ ಸಿಬ್ಬಂದಿ ಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಉತ್ತಮ ಕೆಲಸ ಮಾಡಿದರೆ ಜನರಿಗೆ ಒಳ್ಳೆಯದಾಗುತ್ತದೆ ಜನ ಸಾಮಾನ್ಯರ ಮನಸಿನಲ್ಲಿ ಉಳಿಯುತ್ತದೆ.ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಉತ್ತಮ ಕೆಲಸವನ್ನು  ಮಾಡೋಣ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಎಲ್.ನಾಗರಾಜು ಅವರು ತಿಳಿಸಿದರು.

ಸಾಮಾನ್ಯವಾಗಿ ಕೆಲಸವನ್ನು ನಿರ್ವಹಿಸುವಾಗ ಒತ್ತಡ ಇರುತ್ತದೆ. ಆದರೆ ಸಾರ್ವಜನಿಕರ ಪ್ರೀತಿಗೆ ಎಂದಿಗೂ ದ್ರೋಹ ಮಾಡದೆ ಇರುವ ಹಾಗೆ ಉತ್ತಮ ಕೆಲಸವನ್ನು ಮಾಡಿರುವ  ಶೈಲಜಾ ರವರಿಗೆ ಅಭಿನಂದನೆಯನ್ನು ಸಲ್ಲಿಸಿಸುತ್ತೇನೆ ಎಂದರು.ಹಿರಿಯರ  ಅಧಿಕಾರಿಗಳ ಮಾರ್ಗದರ್ಶನದಿಂದ ಹಾಗೂ ಅವರ ಸಹಕಾರದಿಂದ ಕರ್ತವ್ಯ ನಿರ್ವಹಿಸುತ್ತಾ ಸಾಗೋಣ. ನಮ್ಮ ಮೇಲೆ ಹೆಚ್ಚು ಜವಾಬ್ದಾರಿ ಇದೆ ಎಂದು ಹೇಳಿದರು. ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಇಲಾಖೆಯ ಸಮಸ್ಯೆಯಾಗಲಿ ಅದರ ಭಾಗವಾಗಿ ನಿಂತುಕೊಂಡು ಅದಕ್ಕೆ ಪೂರಕವಾಗಿ ಜನರ ಕೆಲಸವನ್ನುಮಾಡುವುದಕ್ಕೆ ಇಷ್ಟ ಪಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹ ಕಾಧಿಕಾರಿ ಶಾಂತಾ ಎಲ್.ಹುಲ್ಮನಿ,ಜಿಲ್ಲಾಧಿಕಾರಿಗಳ ಕಛೇರಿಯ ಹಿರಿಯ ಉಪ ತಹಶೀಲ್ದಾರರಾದ ಸ್ವಾಮಿಗೌಡ,ತಹಶೀಲ್ದಾರ್ ಗಳಾದ ಕುಂಇ ಅಹಮದ್, ನರಸಿಂಹಮೂರ್ತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಗೌಡ,ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

ಗಣೇಶನ ಅವತಾರದಲ್ಲಿ ಡಿಬಾಸ್, ಅಪ್ಪು, ಯಶ್.!

ಮಂಡ್ಯದಲ್ಲಿ ಮಳೆತಂದ ಅವಾಂತರ, ನೊಂದ ಮಹಿಳೆಯ ಕಣ್ಣೀರು

ಮಂಡ್ಯ: ರಾತ್ರಿ ಸುರಿದ ಧಾರಾಕಾರ ಮಳೆ ಕೊಚ್ಚಿ ಹೋದ ರಸ್ತೆ, ಒಡೆದ ವಿ.ಸಿ ನಾಲೆ

- Advertisement -

Latest Posts

Don't Miss