Friday, November 14, 2025

Latest Posts

Mandya: ಮೇಲುಕೋಟೆಯಲ್ಲಿ ಕೋತಿಗಳ ಸೆರೆ. ನಿಟ್ಟುಸಿರು ಬಿಟ್ಟ ಭಕ್ತರು.

- Advertisement -

Mandya News: ಮಂಡ್ಯ : ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ 1ಆದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಕೋತಿಗಳ ಉಪಟಳ ಜೋರಾಗಿತ್ತು. ಭಕ್ತರು ದೇವರ ದರ್ಶನಕ್ಕಾಗಿ ಹೆದರಿಕ“ಂಡೇ ಬರಬೇಕಿತ್ತು. ಆದರೆ ಇದೀಗ ಈ ಕಾಟದಿಂದ ಬಿಗ್ ರಿಲೀಫ್ ಸಿಕ್ಕಿದೆ.

ಕೋತಿಗಳ ಹೆಚ್ಚು ಉಪದ್ರ ನೀಡುತ್ತಿದೆ. ಮನುಷ್ಯರ ಮೇಲೆ ದಾಳಿ ನಡೆಸುವುದಲ್ಲದೇ, ಬೆಳೆ ನಾಶ ಮಾಡುತ್ತಿದೆ ಎಂದು ಇಲ್ಲಿನ ರೈತರು ಅಧಿಕಾರಿಗಳಿಗೆ ದೂರು ನೀಡಿದ್ದರು. ಹೀಗಾಗಿ  ಚಲುವನಾರಾಯಣಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಗ್ರಾ.ಪಂ ಸಹ ಬಾಗಿತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸುಮಾರು 10 ದಿನಗಳ ಕಾಲ ಈ ಕಾರ್ಯಾಚರಣೆ ನಡೆಯಲಿದ್ದು, ಈಗಾಗಲೇ 100ಕ್ಕೂ ಹೆಚ್ಚು ಕೋತಿಗಳ ಸೆರೆ ಹಿಡಿಯಲಾಗಿದೆ..

ಆದರೆ ಇಲ್ಲಿ ಸಾವಿರಕ್ಕೂ ಹೆಚ್ಚು ಕೋತಿಗಳು ಓಡಾಡುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಕೋತಿಗಳನ್ನು ಸೆರೆ ಹಿಡಿಯುವ ಸಾಧ್ಯತೆ ಇದೆ. ಹೀಗೆ ಸೆರೆ ಹಿಡಿದ ಕೋತಿಗಳನ್ನು ಬಂಡೀಪುರಕ್ಕೆ ಬಿಡಲು ನಿರ್ಧರಿಸಲಾಗಿದೆ.

- Advertisement -

Latest Posts

Don't Miss