Sunday, June 1, 2025

Latest Posts

ಮೈಷುಗರ್ ವಿಚಾರ : ಸರ್ಕಾರಕ್ಕೆ ಸಂಸದೆ ಸುಮಲತಾ 6 ಸಲಹೆಗಳು

- Advertisement -

ಕರ್ನಾಟಕ ಟಿವಿ : ಇಂದು ಮೈಷುಗರ್ ಕಾರ್ಖಾನೆ ಪುನರಾರಂಭ ಸಂಬಂಧ ಜನಪ್ರತಿನಿಧಿಗಳು ಹಾಗೂ ರೈತರೊಂದಿಗೆ ವಿಧಾನಸೌಧದಲ್ಲಿ ರಾಜ್ಯ ಸರ್ಕಾರ ಸಭೆ ನಡೆಸಿತು. ಸಭೆಯಲ್ಲಿ ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್, ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ಮೈಷುಗರ್ ಕಾರ್ಖಾನೆ ಪುನರಾರಂಭ ಸಂಬಂಧ ಸಲಹೆಗಳನ್ನ ನೀಡಿದ್ರು.

ಸರ್ಕಾರವೋ, ಸರ್ಕಾರೇತರರೋ, ಯಾರಾದರೂ ಸರಿ ಜೂನ್ ತಿಂಗಳಲ್ಲಿ ಕಾರ್ಖಾನೆ ಆರಂಭಿಸಿ

ರೈತರಿಂದ ಕಬ್ಬ ಖರೀದಿ ಮಾಡಿ ನಿಗದಿತ ಅವಧಿಯಲ್ಲಿ ಹಣ ಪಾವತಿಸಿ.

ಮೈಷುಗರ್ ಕಾರ್ಖಾನೆ ಆವರಣದ ಡಿಸ್ಟಿಲರಿ, ವಿದ್ಯುತ್ ಉತ್ಪಾದನಾ ಘಟಕ ಹೊರತುಪಡಿಸಿ ಇತರೆ ಆಸ್ತಿಯನ್ನ ಗುತ್ತಿಗೆಯ ಒಪ್ಪಂದಕ್ಕೆ ಕೊಡಬಾರದು

ಸಕ್ಕರೆ ಕಾರ್ಖಾನೆಯವರ ಮೊದಲ ಆದ್ಯತೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣ ಪಾವತಿಸುವುದಾಗಿರಬೇಕು

ಖಾಸಗಿಯವರಿಗೆ ಕೊಡುವ ನಿರ್ಧಾರ ಮಾಡಿದ್ರೆ ಕಾರ್ಖಾನೆ ಪುನರಾರಂಭ ಕಷ್ಟವಾಗುತ್ತೆ, ಹೀಗಾಗಿ ಸದ್ಯಕ್ಕೆ ಸರ್ಕಾರವೇ ಕಬ್ಬುಬೆಳೆಗಾರರ ದೃಷ್ಟಿಯಲ್ಲಿ ಕಾರ್ಖಾನೆ ಆರಂಭಿಸಬೇಕು ( ಖಾಸಗಿಯವರು ತೆಗೆದುಕೊಳ್ಳುವವರೆಗೂ )

ಪರಿಶೀಲನಾ ಸಭೆ ನಡೆಸುವುದನ್ನ ಬಿಟ್ಟು ಎರಡು ತಿಂಗಳಲ್ಲಿ ಕಾರ್ಖಾನೆ ಪುನರಾರಮಭ ಮಾಡುವುದು

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ

- Advertisement -

Latest Posts

Don't Miss