Manglore News: ಮಂಗಳೂರು ಕಾಪಿಕಾಡ್ 6ನೇ ಕ್ರಾಸ್ ನ 4 th ಲೈನ್ ನಲ್ಲಿ ಚಿಲಿಂಬಿ ಗುಡ್ಡೆಗೆ ಸಂಪರ್ಕ ರಸ್ತೆಯ ಎತ್ತರ ಪ್ರದೇಶದಲ್ಲಿ ಗುಡ್ಡ ಕುಸಿದು ತಿಮಪ್ಪ ಕಂಪೌಂಡ್ ನಲ್ಲಿರುವ ಮನೆಗಳಿಗೆ ತೀವ್ರವಾದ ಅಪಾಯ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಸಂಧರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಎಂ ಶಶಿಧರ ಹೆಗ್ಡೆಯವರು ತುರ್ತಾಗಿ ಸ್ಪಂದಿಸಿ ಅಪಾಯವನ್ನು ತಡೆಗಟ್ಟಲು ಜಲ್ಲಿ ಹುಡಿ ತುಂಬಿದ ಗೋಣಿ ಚೀಲಗಳನ್ನು ಜೋಡಿಸುವ ಮೂಲಕ ತಡೆ ನಿರ್ಮಿಸಿ ಇನ್ನು ಕುಸಿಯದಂತೆ ಬೇಕಾದ ಕ್ರಮಗಳನ್ನು ಕೈಗೊಂಡರು. ಮುಂದೆ ಗುಡ್ಡ ಕುಸಿತದಿಂದ ಬಡ ಕುಟುಂಬಗಳಿಗೆ ತೊಂದರೆ ಯಾಗದ ಹಾಗೆ ಶಾಶ್ವತ ಕಾಮಗಾರಿಯನ್ನು ಮಾಡಿ ಕೊಡಲಾಗುವುದೆಂದರು. ತುರ್ತು ಕಾರ್ಯಗಳ ಮೂಲಕ ಸ್ಪಂದಿಸಿದ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಎಂ ಶಶಿಧರ ಹೆಗ್ಡೆಯವರ ಬಗ್ಗೆ ಸ್ಥಳೀಯರು ವ್ಯಾಪಕ ಪ್ರಸಂಶೆ ವ್ಯಕ್ತಪಡಿಸಿದರು.
Siddaramaiah : ಮುಖ್ಯಮಂತ್ರಿ ಸಿದ್ದರಾಮಯ್ಯ ಅದೃಷ್ಟದ ಮನೆಗೆ ಡಿಕೆಶಿ ಶಿಫ್ಟ್ …!