- Advertisement -
Manglore News:
ಮಂಗಳೂರಿನಲ್ಲಿ ಸಾಕು ನಾಯಿಗೆ ಸೀಮಂತ ಮಾಡಿರೋ ವಿಶೇಷ ಘಟನೆ ನಡೆದಿದೆ. ಹೌದು ಮಂಗಳೂರಿನ ಗುರುಪುರ ಕೈಕಂಬದ ಮಂಜುಳ ಹಾಗು ಭಾಸ್ಕರ್ ಎಂಬುವವರ ಪುತ್ರಿ ಸುಶ್ಮಿತಾ ಸಾಲ್ಯಾನ್ ಪ್ರಾಣಿ ಪ್ರಿಯೆ. ಈಕೆ ಮನೆಯಲ್ಲಿ ಸಾಕಿದ ತನ್ನ ಮುದ್ದಿನ ನಾಯಿಗೆ ಸೀಮಂತ ಕಾರ್ಯ ನೆರವೇರಿಸಿದ್ದಾರೆ. ಒಂದೂವರೆ ವರ್ಷದ ಶ್ಯಾಡೋ ನಾಮಾಂಕಿತದ ನಾಯಿಗೆ ಹಸಿರು ಬಳೆ ಕುಂಕುಮ ಅರಶಿನ ಹಚ್ಚಿ ಆರತಿ ಬೆಳಗಿ ಸೀಮಂತ ಮಾಡಿದ್ದಾರೆ. ಈ ವೇಳೆ ಸೈಲೆಂಟ್ ಆಗಿ ಕುಳಿತ ನಾಯಿಯನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಪ್ರೇಮಕಾವ್ಯ ಹೊತ್ತು ಬಂದ ‘ಆಶಿಕಿ’ ಟ್ರೇಲರ್…ದಸರಾಗೆ ತೆರೆಗೆ ಬರಲಿದೆ ಸಿನಿಮಾ
- Advertisement -