Friday, April 19, 2024

Latest Posts

ಉಪೇಂದ್ರ ನೀಡಿದ್ರು ಅಭಿಮಾನಿಗಳಿಗೆ ಅಭಿಯಾಣದ ಆಹ್ವಾನ…!

- Advertisement -

Film News:

ಸೂಪರ್ ಸ್ಟಾರ್ ಉಪೇಂದ್ರ ಏನೇ ಮಾಡಿದ್ರೂ ಅದು ಫುಲ್  ಡಿಫರೆಂಟ್ ಆಗಿರುತ್ತೆ ಹಾಗೆಯೇ ಇದೀಗ ಅಭಿಮಾನಿಗಳಿಗೆ ಕರೆಯೋಲೆಯೊಂದನ್ನು ಕೊಟ್ಟಿದ್ದಾರೆ ಸೂಪರ್ ಸ್ಟಾರ್ ಉಪೇಂದ್ರ…

ಸೂಪರ್ ಸ್ಟಾರ್ ಉಪೇಂದ್ರ  ಕನ್ನಡ  ಸಿನಿಮಾ ಇಂಡಸ್ಟ್ರಿಯಲ್ಲೇ  ಒಂದು  ವಿಶೇಷ ಬದಲಾವಣೆ ತಂದವರು . ನಿರಂತರ ಉತ್ತಮ ಸಂದೇಶದ ಸಿನಿಮಾ ನೀಡುತ್ತಾ ಅಭಿ ಮಾನಿ ಗಳಿಗೆ ಹತ್ತಿರವಾಗುತ್ತಿದ್ದಾರೆ. ಏಕ್ಶನ್ ಡೈರೆಕ್ಷನ್ ಜೊತೆಗೆ ಉಪ್ಪಿ ಸಮಾಜ ಸೇವೆಯಲ್ಲೂ ತಾ ಮುಂದು ಎಂದು ಮನ್ನಡೆಯುವವರು. ಹೀಗಾಗಿ ಅಭಿಮಾನಿಗಳಿಗೊಂದು  ಟಾಸ್ಕ್ ನೀಡುತ್ತಿದ್ದಾರೆ ರಿಯಲ್  ಸ್ಟಾರ್ ಉಪೇಂದ್ರ.

ಹೌದು ಸಿನಿಮಾ ಸ್ಟಾರ್ ಗಳ ಬರ್ತ್ಡೇ ಎಂದರೆ ಅಭಿಮಾನಿಗಳಿಗೆ ಅದೊದು ತರಹ ಹಬ್ಬ ಖಂಡಿತವಾಗಿಯೂ ಫ್ಯಾನ್ಸ್ ಅಂದು ತನ್ನ ನೆಚ್ಚಿನ ಸ್ಟಾರ್ಟ್  ಮನೆಗಳಿಗೆ ಹೋಗೋದು ಕಾಮನ್. ಇದು ತಿಳಿದಿರೋ  ಉಪೇಂದ್ರ ಮುಂಚಿತವಾಗಿಯೇ ಅಭಿಮಾನಿಗಳಿಗೆ ಈ ರೀತಿಯಾಗಿ ಕರೆಕೊಟ್ಟಿದ್ದಾರೆ.

ಅಭಿಮಾನಿಗಳಿಗೆ ಟ್ವಿಟರ್ ಮೂಲಕ ಕರೆ ಕೊಟ್ಟಿರೋ ಉಪೇಂದ್ರ ಇದೇ ಸೆಪ್ಟೆಂಬರ್ 18 ರಂದು ಅಭಿಯಾನವೊಂದನ್ನು ಶುರು ಮಾಡಿದ್ದಾರೆ. ವಿಚಾರವಂತರಾಗೋಣ ಎಂದು  ಹೇಳಿಕೊಂಡು ಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ, ಗಿಫ್ಟ್ ಎಲ್ಲಾ ಬಿಟ್ಟು, ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ’ ಎಂದು ಉಪೇಂದ್ರ ಟ್ವಿಟರ್ ನಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ವಿಚಾರ ಕಂಡು   ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಅಂತೂ ಅಭಿಮಾನಿಗಳು ಸೆಪ್ಟೆಂಬರ್ 18ಕ್ಕಾಗಿ ಕಾತುರದಿಂದ  ಕಾಯುತ್ತಿದ್ದಾರೆ. ಅಭಿಮಾನಿಗಳ ಆ ಪದಪುಂಜ ಹೇಗಿರತ್ತೋ ಕಾದು ನೋಡ್ಬೇಕಾಗಿದೆ.

 

ತಂದೆಯಾಗುತ್ತಿದ್ದಾರೆ ಧ್ರುವ ಸರ್ಜಾ..!

‘ಬ್ಯೂಟಿ ಅಂಡ್ ಬಿಯಾಂಡ್’ ಶಾಪ್ ಉದ್ಘಾಟಿಸಿದ ಧನ್ಯಾ ಬಾಲಕೃಷ್ಣ

ಪ್ರೇಮಕಾವ್ಯ ಹೊತ್ತು ಬಂದ ‘ಆಶಿಕಿ’ ಟ್ರೇಲರ್…ದಸರಾಗೆ ತೆರೆಗೆ ಬರಲಿದೆ ಸಿನಿಮಾ

- Advertisement -

Latest Posts

Don't Miss