Sunday, September 8, 2024

Latest Posts

ಕೇದಾರನಾಥ ದೇವಸ್ಥಾನದಲ್ಲಿ 200 ಕೆಜಿಗೂ ಹೆಚ್ಚಿನ ಚಿನ್ನ ನಾಪತ್ತೆ

- Advertisement -

National News: ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸ್ವಾಮೀಜಿ, ಕೇದಾರನಾಥ ದೇಗುಲದಲ್ಲಿ 200 ಕೆಜಿಗೂ ಹೆಚ್ಚು ಚಿನ್ನ ನಾಪತ್ತೆಯಾಗಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಇಲ್ಲಿ ಚಿನ್ನದ ಹಗರಣ ನಡೆದಿದೆ. ಆದರೆ ಆ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಅಷ್ಟು ದೊಡ್ಡ ಹಗರಣವಾದರೂ ಇನ್ನೂ ಎಲ್ಲಿಯೂ ಸುದ್ದಿಯಾಗಿಲ್ಲ. ಇವರು ದೆಹಲಿಯಲ್ಲಿಯೂ ಕೇದಾರನಾಾಥ ಮಂದಿರ ನಿರ್ಮಿಸಲು ಹೊರಟಿದ್ದಾರೆಯೇ ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ.

ಈ ಪ್ರಶ್ನೆ ಕೇಳಲು ಕಾರಣವೇನೆಂದರೆ, ಚಿನ್ನ ನಾಪತ್ತೆಯಾಗಿದೆ ಎಂದು ಅವರು ಯಾರ ಮೇಲೆ ಆರೋಪ ಮಾಡುತ್ತಿದ್ದಾರೋ, ಅವರನ್‌ನು ಕೇಳಿದಾಗ, ದೆಹಲಿಯಲ್ಲಿ ಕೇದಾರನಾಥ ದೇಗುಲ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆಂದು ಸುದ್ದಿ.

ಇಲ್ಲಿ ಇಷ್ಟೊಂದು ಚಿನ್ನದ ಹಗರಣವಾದರೂ ಆ ಬಗ್ಗೆ ಯಾರೂ ಏಕೆ ಚಕಾರವೆತ್ತುತ್ತಿಲ್ಲ..? ದೇಹಲಿಯಲ್ಲಿ ಮತ್ತೊಂದು ದೇವಸ್ಥಾನ ನಿರ್ಮಾಣ ಮಾಡಿ, ಅಲ್ಲೂ ಮತ್ತೊಂದಿಷ್ಟು ಹಗರಣ ಮಾಡಬೇಕೆಂದು ಇದ್ದೀರಾ..?  ಇಲ್ಲಿ ನಡೆದಿರುವ ಈ ಹಗರಣಕ್ಕೆ ಜವಾಬ್ದಾರರು ಯಾರು ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss