www.karnatakatv.net: ರಾಜ್ಯ- ವಿಜಯನಗರ- ಹೂವಿನಹಡಗಲಿ ಸುಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಸತತ 31 ವರ್ಷಗಳ ಕಾಲ ಕಾರ್ಣಿಕ ನುಡಿಯುತ್ತಿದ್ದ ಮಾಲತೇಶಪ್ಪ ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ರು. ತಮ್ಮ ಕಂಚಿನ ಕಂಠದಿಂದ 3 ದಶಕಗಳಿಂದ ಪುರಾಣ ಪ್ರಸಿದ್ದ ಮೈಲಾರ ಕಾರ್ಣಿಕವನ್ನ ಗೊರವಯ್ಯ ಮಾಲತೇಶಪ್ಪ ನುಡಿಯುತ್ತಿದ್ರು. ಇನ್ನು, ಸಂಕಷ್ಟದಲ್ಲಿದ್ದ ಮಾಲತೇಶಪ್ಪನಿಗೆ ಮನೆ ನಿರ್ಮಿಸುವ ಆಸೆಯಿತ್ತು, ಇದಕ್ಕೆ ನಾಡಿನ ಜನರು ಅವರಿಗೆ ಸಹಾಯ ಹಸ್ತ ಚಾಚಿದ್ರು. ಆದ್ರೆ, ಮನೆ ನಿರ್ಮಾಣವಾಗುವ ಮೊದಲೇ ಗೊರವಯ್ಯ ಇಹಲೋಕ ತ್ಯಜಿಸಿದ್ದಾರೆ.
Home ರಾಜ್ಯ ಜಿಲ್ಲಾ ಸುದ್ದಿಗಳು 31 ವರ್ಷಗಳಿಂದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ನಿಧನ




