www.karnatakatv.net : ರಾಯಚೂರು : ಮಹಾರಾಷ್ಟ್ರದಲ್ಲಿ ಬಾರೀ ಮಳೆ ಹಿನ್ನಲೆ. ಕೋಯ್ನಾ ಸೇರಿದಂತೆ ಹಲವು ಜಲಾಶಯ ಭರ್ತಿಯಾಗಿದು. ಅಲ್ಲಿನ ಜಲಾಶಯಗಳಿಂದ ನೀರು ಬಿಟ್ಟ ಹಿನ್ನಲೆ, ಕರ್ನಾಟಕದ ಬಸವಸಾಗರ ಜಲಾಶಯ ಕೂಡ ಭರ್ತಿಯಾಗಿದೆ ನಾರಾಯಣಪುರದ ಬಸವಸಾಗರ ಜಲಾಶಯದ ಸಾಮರ್ಥ್ಯ 22 ಟಿಎಂಸಿ. ಈಗಾಗಲೇ 20 ಟಿಎಂಸಿಯಷ್ಟು ತುಂಬಿದೆ. ಬಸವಸಾಗರ ಡ್ಯಾಂ ನಲ್ಲಿ ನೀರು ಹೆಚ್ಚಳ ಹಿನ್ನಲೆ

ಕೃಷ್ಣಾ ನದಿಗೆ ಹೆಚ್ಚಿನ ನೀರು. 1.5000 ಕ್ಯೂಸೆಕ್ಸ್ ನೀರು ಜಲಾಶಯದಿಂದ ನದಿಗೆ ಬಂದಿದೆ. ಇನ್ನಷ್ಟು ನೀರು ಹರಿಬಿಡುವ ಸಾಧ್ಯತೆ ಎಂದರು ಅಧಿಕಾರಿಗಳು ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಇದ್ದು ಲಿಂಗಸ್ಗೂರು ತಾಲ್ಲೂಕಿನ ನದಿ ಪಾತ್ರದ ಹಳ್ಳಿಗಳಿಗೆ ಪ್ರವಾಹ ಭೀತಿ ಎಚ್ಚರಿಕೆಯ ನೀಡಿದರು.

ಕೃಷ್ಣಾ ನದಿ ತೀರದ ಶೀಲಹಳ್ಳಿ ಗ್ರಾಮದ ಸೇತುವೆ ಜಲಾವೃತ ಗ್ರಾಮಕ್ಕೆ ರಸ್ತೆ ಸಂಪರ್ಕ್ ಕಟ್ ಆಗಿದು. ಶೀಲಹಳ್ಳಿ ಮೂಲಕ ತೆರಳುವ ಗ್ರಾಮಗಳಿಗೆ ಸಂಪರ್ಕ ಸ್ಥಗಿತಗೊಂಡಿತು. ಜಿಲ್ಲಾಡಳಿತದಿಂದ ನದಿ ಬಳಿ ತೆರಳದಂತೆ ಎಚ್ಚರಿಕೆ ನೀಡಿದರು . ಪೊಲೀಸ್ ಇಲಾಖೆಯಿಂದ ನದಿ ದಂಡೆಯಲ್ಲಿ ಬ್ಯಾರೀಕೇಡ್ ಹಾಕಿ ಕಟ್ಟೆಚ್ಚರಕ್ಕೆ ವೈಯಸಿದ್ದರು .