Tuesday, September 16, 2025

Latest Posts

ನರೇಂದ್ರ ಗಲಾಟೆ ಪ್ರಕರಣ..ಇಬ್ಬರ ಪೋಲೀಸ ಸಿಬ್ಬಂದಿಗಳು ಸಸ್ಪೆಂಡ್.. ಇನ್ಸ್ಪೆಕ್ಟರ್ ಮೇಲೆ ತನಿಖೆಗೆ ಆದೇಶ…

- Advertisement -

Dharwad: ಧಾರವಾಡ:- ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಇಬ್ಬರು ಪೋಲೀಸರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಸ್ಪೆಂಡ ಮಾಡಿ ಧಾರವಾಡ ಎಸ್ ಪಿ ಆದೇಶ ಹೊರಡಿಸಿದ್ದಾರೆ.

ಧಾರವಾಡದ ನರೇಂದ್ರ ಗ್ರಾಮದಲ್ಲಿ ನಡೆದ ಘಟನೆ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡ ಗ್ರಾಮೀಣ ಇನ್ಸ್ಪೆಕ್ಟರ್ ಕಮತಗಿ ಹಾಗೂ ಇಬ್ಬರು ಪೋಲೀಸ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡುವಂತೆ ಎಸ್ ಪಿಗೆ ಒತ್ತಾಯಿಸಿದ್ದರು.ಆ ಹಿನ್ನೆಲೆಯಲ್ಲಿ ಪೋಲೀಸ ಸಿಬ್ಬಂದಿಗಳಾದ ಸೈದ್ ಹಾಗೂ ಕೃಷ್ಣಾ ಎಂಬುವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.ಜೊತೆಗೆ ಇನ್ಸ್ಪೆಕ್ಟರ್ ವಿರುದ್ದ ತನಿಖೆಗೆ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

ಇನ್ಸ್ಪೆಕ್ಟರ್ ವಿರುದ್ದ ಕೇಂದ್ರ ಸಚಿವರು ತೀವ್ರ ಅಸಮಾಧಾನ ಹೊರಹಾಕಿದ್ದರು ಹಾಗೂ ಒಳ್ಳೆ ಕೆಲಸ ಮಾಡಿರುವ ಪೋಲೀಸ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

- Advertisement -

Latest Posts

Don't Miss